AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pt. Shivkumar Sharma Death : ಸಂತೂರ್ ಮಾಂತ್ರಿಕ ಶಿವಕುಮಾರ ಶರ್ಮಾ ನಿಧನ

Santoor Maestro : ಖ್ಯಾತ ಸಂತೂರ್ ವಾದಕ ಶಿವಕುಮಾರ ಶರ್ಮಾ (84) ಮುಂಬೈನಲ್ಲಿ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಆರು ತಿಂಗಳಿಂದ  ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು.

Pt. Shivkumar Sharma Death : ಸಂತೂರ್ ಮಾಂತ್ರಿಕ ಶಿವಕುಮಾರ ಶರ್ಮಾ ನಿಧನ
ಪಂ. ಶಿವಕುಮಾರ್ ಶರ್ಮಾ
TV9 Web
| Updated By: ಶ್ರೀದೇವಿ ಕಳಸದ|

Updated on: May 10, 2022 | 1:28 PM

Share

Pt. Shivkumar Sharma : ಖ್ಯಾತ ಸಂತೂರ್ ವಾದಕ ಶಿವಕುಮಾರ ಶರ್ಮಾ (84) ಮುಂಬೈನಲ್ಲಿ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಆರು ತಿಂಗಳಿಂದ  ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಜಮ್ಮು ಕಾಶ್ಮೀರ ಸಂತೂರ್ ವಾದನದ ಮೂಲಕ ಇಡೀ ಪ್ರಪಂಚದ ಸಂಗೀತರಸಿಕರ ಮನಗೆದ್ದಿದ್ದ ಶಿವಕುಮಾರ್ (Santoor Maestro) 1986ರ ಜನವರಿ 13ರಂದು ಜಮ್ಮುವಿನಲ್ಲಿ ಜನಿಸಿದ್ದರು. 1943ರಲ್ಲಿ ಇವರ ತಂದೆ ಪಂ. ಉಮಾ ದತ್ ಶರ್ಮಾ ಅವರ ಬಳಿ ಗಾಯನ ಮತ್ತು ತಬಲಾ ಕಲಿಯುವಿಕೆಯ ಮೂಲಕ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ನಂತರ 1950ರಲ್ಲಿ ತಂದೆಯ ಬಳಿಯೇ ಸಂತೂರ್​ ಕಲಿಕೆಯಲ್ಲೇ ಮುಂದುವರೆಯದಾಗಿ ನಿರ್ಧರಿಸಿದರು. 1955ರಲ್ಲಿ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಭಾಗವಹಿಸಿ, ಮೊದಲ ಸಲ ಸಂತೂರ್ ವಾದನ ಕಛೇರಿ ನೀಡಿದರು. ಆ ತನಕ ಜಾನಪದ ವಾದ್ಯವಾಗಿದ್ದ ಸಂತೂರ್ ಅನ್ನು ಶಾಸ್ತ್ರೀಯ ಸಂಗೀತದ ಮುಖ್ಯವಾಹಿನಿಗೆ ತರುವುದು ಹೇಗೆ ಎಂದೆಲ್ಲ ಆಲೋಚಿಸಿ, ಪ್ರಯೋಗಿಸುವಲ್ಲಿ ದಶಕಗಳ ಕಾಲ ತೊಡಗಿಕೊಂಡು ಅದರಲ್ಲಿ ಯಶ ಸಾಧಿಸಿದರು.

ಸಂಗೀತ ನಿರ್ದೇಶಕ ವಸಂತ್ ದೇಶಯಿ, ವಣಕುದುರೆ ಶಾಂತಾರಾಮ ಅವರ ‘ಝನಕ್ ಝನಕ್ ಪಾಯಲ್ ಬಾಜೇ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದರು. ಇವರ ಪ್ರಥಮ ಧ್ವನಿ ಮುದ್ರಿಕೆ ಹೊಮ್ಮಿದ್ದು ಎಚ್.ಎಮ್.ವಿ ಮೂಲಕ. ಹಿರಿಯ ಬಾನ್ಸುರಿವಾದಕ ಪಂ. ಹರಿಪ್ರಸಾದ್ ಚೌರಾಸಿಯಾ, ಪಂ. ಬ್ರಿಜ್ ಭೂಷಣ್ ಕಾಬ್ರಾ ಜೊತೆಗೂಡಿ ‘ಕಾಲ್ ಅಫ್ ದಿ ವ್ಯಾಲಿ’ ಧ್ವನಿಮುದ್ರಿಕೆ ಸಂಗೀತಾಸಕ್ತರನ್ನು ಸೂರೆಗೊಂಡು ಮಾರಾಟದ ದಾಖಲೆಯನ್ನೂ ನಿರ್ಮಿಸಿತು. 1980ರಲ್ಲಿ ಪಂ. ಹರಿಪ್ರಸಾದ್ ಚೌರಾಸಿಯ ಮತ್ತು ಶಿವ-ಹರಿ ಅವರೊಂದಿಗೆ ಯಶ್ ಛೋಪ್ರಾ ಅವರ ‘ಸಿಲ್ಸಿಲೇ’ ಚಿತ್ರಕ್ಕೆ ಸಂಗೀತ ನಿರ್ದೇಶನದಲ್ಲಿ ತೊಡಗಿಕೊಂಡರು. ಇವರಿಎ ಕೇಂದ್ರ ಸಂಗೀತ ಕಲಾ ಅಕಾಡೆಮಿ ಪ್ರಶಸ್ತಿ, ಅಮೆರಿಕೆಯ ಅಮೀರ್ ಖುಸ್ರೋ ಸೊಸೈಟಿಯ ‘ನಝ್ರ್ ಎ ಖುಸ್ರೋ’ ಪ್ರಶಸ್ತಿ, ಮಹಾರಾಷ್ಟ್ರ ಗೌರವ್ ಪುರಸ್ಕಾರ, ಶತತಂತ್ರಿ ಶಿರೋಮಣಿ ಬಿರುದು(ಜೋಧಪುರ), ಪದ್ಮಶ್ರೀ ಪ್ರಶಸ್ತಿ, ಜಮ್ಮು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, ಉಸ್ತಾದ ಹಾಫೀಜ್ ಅಲಿ ಖಾನ್ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿದ್ದವು.

ಇವರು ಪತ್ನಿ ಮನೋರಮಾ ಶರ್ಮಾ ಮತ್ತು ಪುತ್ರ ರಾಹುಲ್ ಶರ್ಮಾ ಅವರನ್ನು ಅಗಲಿದ್ಧಾರೆ. ಸಂಗೀತ ಕ್ಷೇತ್ರದ ಅನೇಕ ಹಿರಿಯರು ಮತ್ತು ಶ್ರೋತೃಗಳು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ : Lakshmibai Enagi Death : ಲಕ್ಷ್ಮೀಬಾಯಿ ಏಣಗಿಯವರ ‘ಕುಂಕುಮ’ ಕೀರ್ತಿಯ ಸಾಹಸಗಾಥೆ

ಇದನ್ನೂ ಓದಿ : Sharanappa Kanchyani: ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ವಿಧಿವಶ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ