AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಲಿಕೆಯಲ್ಲಿ ಶಾಸಕ-ಕಾರ್ಪೊರೇಟರ್ ಮಧ್ಯೆ ಮಾತಿನ ಚಕಮಕಿ, ವಿಷಯ ಏನು?

ಬೆಂಗಳೂರು: ಜೆಡಿಎಸ್ ಶಾಸಕ ಹಾಗೂ ಹಿರಿಯ ಬಿಜೆಪಿ ಕಾರ್ಪೊರೇಟರ್ ನಡುವೆ ಆಂಬ್ಯುಲೆನ್ಸ್​ಗಳ ವಿಷಯದಲ್ಲಿ ಶುರುವಾದ ವಾಗ್ವಾದ, ಹೊಡೆದಾಟದ ಹಂತ ತಲುಪಿದ ಪ್ರಸಂಗ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಮಂಗಳವಾರದಂದು ನಡೆಯಿತು. ವಾಸ್ತವದಲ್ಲಿ, ವಾದ-ವಿವಾದ ಆರಂಭಗೊಂಡಿದ್ದು ಶಾಸಕ ರಮೇಶ್ ಗೌಡ ಹಾಗೂ ಮೇಯರ್ ಗೌತಮ್ ಕುಮಾರ್ ಮಧ್ಯೆ. ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದಾಗ ರಮೇಶ್, ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆಯಲ್ಲಿ ಆಂಬುಲೆನ್ಸ್​ಗಳಿಲ್ಲ ಎಂದು ಹೇಳಿದರು. ಆವರ ಆರೋಪದಿಂದ ಕೊಂಚ ಸಂಯಮ ಕಳೆದುಕೊಂಡ ಮೇಯರ್, ಪಾಲಿಕೆಯಲ್ಲಿ 700 ಆಂಬುಲೆನ್ಸ್​ಗಳಿವೆ […]

ಪಾಲಿಕೆಯಲ್ಲಿ ಶಾಸಕ-ಕಾರ್ಪೊರೇಟರ್ ಮಧ್ಯೆ ಮಾತಿನ ಚಕಮಕಿ, ವಿಷಯ ಏನು?
Follow us
ಸಾಧು ಶ್ರೀನಾಥ್​
| Updated By:

Updated on:Jul 30, 2020 | 3:08 PM

ಬೆಂಗಳೂರು: ಜೆಡಿಎಸ್ ಶಾಸಕ ಹಾಗೂ ಹಿರಿಯ ಬಿಜೆಪಿ ಕಾರ್ಪೊರೇಟರ್ ನಡುವೆ ಆಂಬ್ಯುಲೆನ್ಸ್​ಗಳ ವಿಷಯದಲ್ಲಿ ಶುರುವಾದ ವಾಗ್ವಾದ, ಹೊಡೆದಾಟದ ಹಂತ ತಲುಪಿದ ಪ್ರಸಂಗ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಮಂಗಳವಾರದಂದು ನಡೆಯಿತು.

ವಾಸ್ತವದಲ್ಲಿ, ವಾದ-ವಿವಾದ ಆರಂಭಗೊಂಡಿದ್ದು ಶಾಸಕ ರಮೇಶ್ ಗೌಡ ಹಾಗೂ ಮೇಯರ್ ಗೌತಮ್ ಕುಮಾರ್ ಮಧ್ಯೆ. ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದಾಗ ರಮೇಶ್, ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆಯಲ್ಲಿ ಆಂಬುಲೆನ್ಸ್​ಗಳಿಲ್ಲ ಎಂದು ಹೇಳಿದರು. ಆವರ ಆರೋಪದಿಂದ ಕೊಂಚ ಸಂಯಮ ಕಳೆದುಕೊಂಡ ಮೇಯರ್, ಪಾಲಿಕೆಯಲ್ಲಿ 700 ಆಂಬುಲೆನ್ಸ್​ಗಳಿವೆ ಎಂದು ಜೋರು ದನಿಯಲ್ಲಿ ಹೇಳಿದರು.

‘ಸುಮ್ಸುಮ್ನೆ ಓಳು ಬಿಡಬೇಡಿ, ತಂದು ನಿಲ್ಲಿಸಿ ನೋಡೋಣ’ ಎಂದು ರಮೇಶ್ ಗೌಡ ಸವಾಲು ಹಾಕಿದರು. ಗೌಡರ ಮಾತಿನಿಂದ ರೊಚ್ಚಿಗೆದ್ದ ಪಾಲಿಕೆಯ ಹಿರಿಯ ಬಿಜೆಪಿ ಸದಸ್ಯ ಪದ್ಮನಾಭರೆಡ್ಡಿ, ಅವರ ಮೇಲೆ ಏರಿಹೋದರು. ತನ್ನನ್ನು ತಡೆಯಲು ಬಂದವರ ಮೇಲೂ ಕೋಪ ಕಾರಿದರು. ಅವರಿಬ್ಬರ ನಡುವೆ ಶುರುವಾದ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವ ಹಂತ ಸಹ ತಲುಪಿತ್ತು. ಕೂಡಲೇ ಮಧ್ಯೆ ಪ್ರವೇಶಿಸಿದ ಇತರ ಸದಸ್ಯರು, ಆವೇಶದಿಂದ ಕೂಗಾಡುತ್ತಿದ್ದ ಗೌಡ ಹಾಗೂ ರೆಡ್ಡಿಯನ್ನು ಸಮಾಧಾನಪಡಿಸಿದರು.

Published On - 6:13 pm, Tue, 28 July 20

ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ