India vs England | ರಾಹುಲ್ ಒಬ್ಬ ಮ್ಯಾಚ್​ವಿನ್ನರ್, ಒಂದೆರಡು ವೈಫಲ್ಯಗಳಿಂದ ಅವರನ್ನು ಕಳಪೆ ಅನ್ನಲಾಗದು: ಆಕಾಶ್ ಚೋಪ್ರಾ

‘ತಾನೊಬ್ಬ ಮ್ಯಾಚ್ ವಿನ್ನರ್ ಎಂದು ಸಾಬೀತು ಮಾಡಿರುವ ಆಟಗಾರ ಒಂದರೆಡು ಇನ್ನಿಂಗ್ಸ್​ಗಳಲ್ಲಿ ಫೇಲಾದ ತಕ್ಷಣ ಅವನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದರೆ ನಾವು ವಿಶ್ವಕಪ್​ ಗೆಲ್ಲುವ ಟೀಮನ್ನು ಕಟ್ಟಲಾಗುವುದಿಲ್ಲ’ ಎಂದು ಚೋಪ್ರಾ ಹೇಳಿದ್ದಾರೆ.

India vs England | ರಾಹುಲ್ ಒಬ್ಬ ಮ್ಯಾಚ್​ವಿನ್ನರ್, ಒಂದೆರಡು ವೈಫಲ್ಯಗಳಿಂದ ಅವರನ್ನು ಕಳಪೆ ಅನ್ನಲಾಗದು: ಆಕಾಶ್ ಚೋಪ್ರಾ
ಕೆ ಎಲ್ ರಾಹುಲ್
Follow us
|

Updated on:Mar 16, 2021 | 5:19 PM

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾದ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಜನರು ಮನಬಂದಂತೆ ಟೀಕಿಸುತ್ತಿರುವುದು ಭಾರತದ ಮಾಜಿ ಆರಂಭ ಆಟಗಾರ ಮತ್ತು ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಅವರನ್ನು ಕೆರಳಿಸಿದೆ. ರಾಹುಲ್ ಮೊದಲ ಪಂದ್ಯದಲ್ಲಿ ಸೊನ್ನೆ ಮತ್ತು ಎರಡನೇ ಪಂದ್ಯದಲ್ಲಿ 1 ರನ್ ಗಳಿಸಿ ಔಟಾದರು. ಸರಣಿ ಆರಂಭಕ್ಕೆ ಮುನ್ನ ಐಸಿಸಿ ಟಿ20ಐ ಕ್ರಿಕೆಟ್ ಬ್ಯಾಟ್ಸ್​ಮನ್​ಗಳ ರ‍್ಯಾಂಕಿಂಗ್​ನಲ್ಲಿ ಎರಡನೇ ಸ್ಥಾನದಲ್ಲಿದ್ದ ರಾಹುಲ್ ಈ ಎರಡು ವೈಫಲ್ಯಗಳಿಂದಾಗಿ ಮೂರನೇ ಸ್ಥಾನಕ್ಕಿಳಿದಿದ್ದಾರೆ. ರಾಹುಲ್ ಸ್ಪರ್ಶ ಕಳೆದುಕೊಂಡಿರುವುದು ವಿದಿತವಾಗಿದ್ದರೂ ಚೋಪ್ರಾ ಆರಂಭ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.

‘ತಾನೊಬ್ಬ ಮ್ಯಾಚ್ ವಿನ್ನರ್ ಎಂದು ಸಾಬೀತು ಮಾಡಿರುವ ಆಟಗಾರ ಒಂದರೆಡು ಇನ್ನಿಂಗ್ಸ್​ಗಳಲ್ಲಿ ಫೇಲಾದ ತಕ್ಷಣ ಅವನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದರೆ ನಾವು ವಿಶ್ವಕಪ್​ ಗೆಲ್ಲುವ ಟೀಮನ್ನು ಕಟ್ಟಲಾಗುವುದಿಲ್ಲ. ಇಂದು ರಾಹುಲ್ ಫೇಲಾಗಿದ್ದಾರೆ, ನಾಳೆ ಪಂತ್ ವಿಫಲರಾಗಬಹುದು ಮತ್ತು ನಾಳಿದ್ದು ಕಿಷನ್. ಟೀಕಿಸುವುದು ಮುಂದುವರೆದರೆ ತಮ್ಮ ಸ್ಥಾನಗಳ ಬಗ್ಗೆ ಅಭದ್ರತೆಯ ಭಾವ ಇಟ್ಟುಕೊಂಡಿರುವ ಆಟಗಾರರ ತಂಡವನ್ನು ಕಟ್ಟಬೇಕಾದೀತು’ ಎಂದು ಚೋಪ್ರಾ ಹೇಳಿದ್ದಾರೆ.

ತಮ್ಮ ವೃತ್ತಿ ಬದುಕಿನಲ್ಲಿ 28ರ ಪ್ರಾಯದ ರಾಹುಲ್, ಓಪನರ್​ನಿಂದ ಹಿಡಿದು ಬೇರೆಬೇರೆ ಕ್ರಮಾಂಕಗಳಲ್ಲಿ ಬ್ಯಾಟ್ ಮಾಡಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಅವರು 2 ಶತಕಗಳನ್ನು ಬಾರಿಸಿದ್ದು ಅವರ ಸರಾಸರಿ 41ಕ್ಕಿಂತ ಜಾಸ್ತಿ ಮತ್ತು ಅವರ ಸ್ಟ್ರೈಕ್ ರೇಟ್ 143.67. 2020 ರ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಪಂಜಾಬ್ ಕಿಂಗ್ಸ್ ಟೀಮಿನ ನಾಯಕರಾಗಿರುವ ರಾಹುಲ್ ಗರಿಷ್ಠ ರನ್​ಗಳಿಕೆಯ ಹಿರಿಮೆಗೆ ಪಾತ್ರರಾದರು.

ವಿಕೆಟ್​ಕೀಪರ್​ ಆಗಿಯೂ ರಾಹುಲ್ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ರಿಷಭ್ ಪಂತ್ ಅವರನ್ನು ಟೀಮಿನಿಂದ ಡ್ರಾಪ್ ಮಾಡಿದಾಗ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೀಮಿತ ಓವರ್​ಗಳ ಸರಣಿಗಳಲ್ಲಿ ಅವರು ವಿಕೆಟ್​ಕೀಪರ್​ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದರು.

ಕರೀಯರ್​ನಲ್ಲಿ ಸ್ಥಿರ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ರಾಹುಲ್ ರಾಷ್ಟ್ರೀಯ ತಂಡಕ್ಕೆ ಆಡುವಾಗ ವಿಫಲರಾಗಿರುವ ಸಂದರ್ಭಗಳು ಬಹಳ ಕಡಿಮೆ. ಅಲ್ಲದೆ ಬಹಳ ದಿನಗಳ ನಂತರ ಮೈದಾನಕ್ಕಿಳಿದಿರುವುದು ಫೇಲಾಗಿರುವುದಕ್ಕೆ ಕಾರಣವಾಗಿರಬಹುದು. ಡಿಸೆಂಬರ್ 8ರಂದು ಆಸ್ಟ್ರೇಲಿಯಾದ ವಿರುದ್ಧ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಆಡಿದ ನಂತರ ಅವರು ಮತ್ತೆ ಬ್ಯಾಟ್​ ಹಿಡಿದು ಕ್ರೀಸಿಗೆ ಬಂದಿದ್ದು ಮಾರ್ಚ್ 12 ರಂದು, ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಟಿ20ಐ ಪಂದ್ಯದಲ್ಲಿ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಗಳಲ್ಲಿ ಅವರಿಗೆ ಆಡುವ ಇಲೆವೆನ್​ನಲ್ಲಿ ಅವಕಾಶ ಸಿಗಲಿಲ್ಲ.

ಮೊದಲೆರಡು ಪಂದ್ಯಗಳಿಗೆ ರೋಹಿತ್ ಶರ್ಮ ಅವರನ್ನು ರೆಸ್ಟ್​ ಮಾಡಿಸಲಾಗಿದೆ ಎಂದು ನಾಯಕ ವಿರಾಟ್​ ಕೊಹ್ಲಿ ಹೇಳಿದ್ದರು. ಮಂಗಳವಾರದಂದು ನಡೆಯುವ ಮೂರನೇ ಪಂದ್ಯಕ್ಕೆ ಅವರು ರೋಹಿತ್​ ಅವರನ್ನು ಆಡಿಸುತ್ತಾರೆಯೇ ಇಲ್ಲವೇ ರಾಹುಲ್​ಗೆ ಮತ್ತೊಂದು ಅವಕಾಶ ಕಲ್ಪಿಸುತ್ತಾರೆಯೇ ಅಂತ ಕಾದು ನೋಡಬೇಕು.

ಇದನ್ನೂ ಓದಿ: India vs England: ವೈಯಕ್ತಿಕ ಉದಾರಣೆಯೊಂದಿಗೆ ಟೀಮಿನ ಆತ್ಮವಿಶ್ವಾಸ ಹೆಚ್ಚಿಸಿರುವ ಕೊಹ್ಲಿ

Published On - 5:18 pm, Tue, 16 March 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ