AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಸಕ್ರಮ ಮಾಡ್ತೀವಿ ಅಂತಾ BDA ಹೆಸರು, ನಕಲಿ ಸ್ಟಾಂಪ್ ಬಳಸಿ.. ಭೂ ಮಾಲೀಕರಿಗೆ ವಂಚನೆ

ಬೆಂಗಳೂರು: ಅಕ್ರಮ ಸಕ್ರಮ ಯೋಜನೆಯ ಸೋಗಿನಲ್ಲಿ ಪ್ರಾಧಿಕಾರದ ಹೆಸರು ಬಳಸಿ ವಂಚಕರು ಭೂ ಮಾಲೀಕರು ಮತ್ತು ಮನೆ ಮಾಲೀಕರಿಗೆ ದೋಖಾ ನೀಡುತ್ತಿರುವ ಪ್ರಕರಣಗಳು ವರದಿಯಾಗಿದೆ. ಅದರಲ್ಲೂ, ನಾಗರೀಕ ಸೌಲಭ್ಯ ನಿವೇಶನದಾರರು (CA ಸೈಟ್​ ಮಾಲೀಕರು), ಮನೆ ಮಾಲೀಕರು ಮತ್ತು ಭೂ ಮಾಲೀಕರನ್ನು ಟಾರ್ಗೆಟ್​ ಮಾಡಿ ವಂಚನೆ ಮಾಡಲಾಗಿದೆ ಎಂಬ ಮಾಹಿತಿ BDAಗೆ ಸಿಕ್ಕಿದೆ. ಪ್ರಾಧಿಕಾರದ ನಕಲಿ ಸೀಲು ಮತ್ತು ಸ್ಟಾಂಪ್​ಗಳನ್ನ ಬಳಸುವ ಜೊತೆಗೆ ಅಧಿಕಾರಿಗಳ ಸಹಿಯನ್ನ ಸಹ ನಕಲು ಮಾಡಿ ನಿವೇಶನದಾರರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. […]

ಅಕ್ರಮ ಸಕ್ರಮ ಮಾಡ್ತೀವಿ ಅಂತಾ BDA ಹೆಸರು, ನಕಲಿ ಸ್ಟಾಂಪ್ ಬಳಸಿ.. ಭೂ ಮಾಲೀಕರಿಗೆ ವಂಚನೆ
KUSHAL V
|

Updated on: Nov 21, 2020 | 2:05 PM

Share

ಬೆಂಗಳೂರು: ಅಕ್ರಮ ಸಕ್ರಮ ಯೋಜನೆಯ ಸೋಗಿನಲ್ಲಿ ಪ್ರಾಧಿಕಾರದ ಹೆಸರು ಬಳಸಿ ವಂಚಕರು ಭೂ ಮಾಲೀಕರು ಮತ್ತು ಮನೆ ಮಾಲೀಕರಿಗೆ ದೋಖಾ ನೀಡುತ್ತಿರುವ ಪ್ರಕರಣಗಳು ವರದಿಯಾಗಿದೆ. ಅದರಲ್ಲೂ, ನಾಗರೀಕ ಸೌಲಭ್ಯ ನಿವೇಶನದಾರರು (CA ಸೈಟ್​ ಮಾಲೀಕರು), ಮನೆ ಮಾಲೀಕರು ಮತ್ತು ಭೂ ಮಾಲೀಕರನ್ನು ಟಾರ್ಗೆಟ್​ ಮಾಡಿ ವಂಚನೆ ಮಾಡಲಾಗಿದೆ ಎಂಬ ಮಾಹಿತಿ BDAಗೆ ಸಿಕ್ಕಿದೆ. ಪ್ರಾಧಿಕಾರದ ನಕಲಿ ಸೀಲು ಮತ್ತು ಸ್ಟಾಂಪ್​ಗಳನ್ನ ಬಳಸುವ ಜೊತೆಗೆ ಅಧಿಕಾರಿಗಳ ಸಹಿಯನ್ನ ಸಹ ನಕಲು ಮಾಡಿ ನಿವೇಶನದಾರರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಆಯುಕ್ತರ ಸೂಚನೆ ಮೇರೆಗೆ ಅಕ್ರಮ ಸಕ್ರಮದಡಿ ನಿಮ್ಮ ಮನೆಯನ್ನ ಸಕ್ರಮಗೊಳಿಸುತ್ತೇವೆ ಅಂತಾ ಹೇಳಿ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವುದು ಸಹ ಬೆಳಕಿಗೆ ಬಂದಿದೆ. ಹಾಗಾಗಿ, ಇಂಥ ವಂಚನೆಯ ಬಗ್ಗೆ ಕೆಲವರಿಂದ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ದೂರು ಸಲ್ಲಿಸಲಾಗಿದೆ.

ಈ ನಿಟ್ಟಿನಲ್ಲಿ BDA ಈ ಕುರಿತು ಸ್ಪಷ್ಟನೆ ನೀಡಿದೆ. ಪ್ರಾಧಿಕಾರ ಈ ರೀತಿಯ ಯಾವುದೇ ಆದೇಶವನ್ನ ಹೊರಡಿಸಿಲ್ಲ. ಇದರ ಬಗ್ಗೆ ನಮ್ಮ ಜಾಗೃತ ದಳದಿಂದ ತನಿಖೆ ನಡೆಸಲಾಗುತ್ತಿದೆ. ಯಾರಿಗಾದರೂ ಈ ರೀತಿ ನೋಟಿಸ್ ಬಂದರೇ ಕೂಡಲೇ ಅಧಿಕಾರಿಗಳನ್ನ ಸಂಪರ್ಕಿಸಿ ಅಂತಾ BDA ಆಯುಕ್ತ ಹೆಚ್.ಆರ್.ಮಹಾದೇವ ಮನವಿ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!