ಕಾರ್ಪೊರೇಟರ್​ ಪಾಷಾನ್ನ ವಿಕ್ಟೋರಿಯಾಗೆ ಕರೆದೊಯ್ಯಲು ಬಂತು ಆ್ಯಂಬುಲೆನ್ಸ್​

ಬೆಂಗಳೂರು: ಪಾದರಾಯನಪುರ ಕಾರ್ಪೊರೇಟರ್ ಆರೀಫ್​ ಪಾಷಾ‌ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲು ಮನೆ ಬಳಿ ಆ್ಯಂಬುಲೆನ್ಸ್ ಆಗಮಿಸಿದೆ. ಪಾದರಾಯನಪುರದ ಕಾರ್ಪೊರೇಟರ್​ ನಿವಾಸಕ್ಕೆ ಆ್ಯಂಬುಲೆನ್ಸ್​ನಲ್ಲಿ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಬಂದಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗಲು ಕಾರ್ಪೊರೇಟರ್‌ ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಕಾರ್ಪೊರೇಟರ್ ನಿವಾಸದ ಬಳಿ ದೊಡ್ಡ ಹೈಡ್ರಾಮಾ ನಡೆಯುತ್ತಿದೆ. ಸ್ವತಃ ಸ್ಥಳೀಯ ಶಾಸಕ ಜಮೀರ್  ಅಹಮದ್ ಸಹ ಕಾರ್ಪೊರೇಟರ್‌ ನಿವಾಸಕ್ಕೆ ಆಗಮಿಸಿದ್ದಾರೆ. ಕೊರೊನಾ ತಗುಲಿದ್ದು ಗೊತ್ತಿದ್ದರೂ ಗಲಾಟೆಯಲ್ಲಿ ತಂದೆ ಭಾಗಿ: ಪಾದರಾಯನಪುರದ ಕಾರ್ಪೊರೇಟರ್‌ಗೆ ಕೊರೊನಾ […]

ಕಾರ್ಪೊರೇಟರ್​ ಪಾಷಾನ್ನ ವಿಕ್ಟೋರಿಯಾಗೆ ಕರೆದೊಯ್ಯಲು ಬಂತು ಆ್ಯಂಬುಲೆನ್ಸ್​
ಸಾಧು ಶ್ರೀನಾಥ್​ Edited By:

Updated on: May 30, 2020 | 1:23 PM

ಬೆಂಗಳೂರು: ಪಾದರಾಯನಪುರ ಕಾರ್ಪೊರೇಟರ್ ಆರೀಫ್​ ಪಾಷಾ‌ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲು ಮನೆ ಬಳಿ ಆ್ಯಂಬುಲೆನ್ಸ್ ಆಗಮಿಸಿದೆ. ಪಾದರಾಯನಪುರದ ಕಾರ್ಪೊರೇಟರ್​ ನಿವಾಸಕ್ಕೆ ಆ್ಯಂಬುಲೆನ್ಸ್​ನಲ್ಲಿ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಬಂದಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗಲು ಕಾರ್ಪೊರೇಟರ್‌ ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

ಸದ್ಯ ಕಾರ್ಪೊರೇಟರ್ ನಿವಾಸದ ಬಳಿ ದೊಡ್ಡ ಹೈಡ್ರಾಮಾ ನಡೆಯುತ್ತಿದೆ. ಸ್ವತಃ ಸ್ಥಳೀಯ ಶಾಸಕ ಜಮೀರ್  ಅಹಮದ್ ಸಹ ಕಾರ್ಪೊರೇಟರ್‌ ನಿವಾಸಕ್ಕೆ ಆಗಮಿಸಿದ್ದಾರೆ.

ಕೊರೊನಾ ತಗುಲಿದ್ದು ಗೊತ್ತಿದ್ದರೂ ಗಲಾಟೆಯಲ್ಲಿ ತಂದೆ ಭಾಗಿ:
ಪಾದರಾಯನಪುರದ ಕಾರ್ಪೊರೇಟರ್‌ಗೆ ಕೊರೊನಾ ತಗುಲಿರುವುದು ಗೊತ್ತಿದ್ದರೂ ನಿನ್ನೆ ಮಹಿಳೆಯರ ಗಲಾಟೆಯಲ್ಲಿ ತಂದೆ ಭಾಗಿಯಾಗಿದ್ದಾರೆ. ಗಲಾಟೆಯಲ್ಲಿ ನೂರಾರು ಮಹಿಳೆಯರು ಭಾಗಿ ಆಗಿದ್ದರು. ಸ್ಥಳಕ್ಕೆ ಹೋಗಿ ಮಹಿಳೆಯರನ್ನ ಆರೀಫ್​ ಪಾಷಾ ಸಮಾಧಾನಪಡಿಸಿದ್ದರು. ಈ ವೇಳೆ ಆರೀಫ್​ ಪಾಷಾ ಹಲವರನ್ನ ಮುಟ್ಟಿದ್ದರು. ನಿನ್ನೆ ಕೆಲ ರಸ್ತೆ ತೆರವುಗೊಳಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಜೊತೆ ಮಹಿಳೆಯರು ವಾಗ್ವಾದ ಸಹ ನಡೆಸಿದ್ದರು.

Published On - 11:59 am, Sat, 30 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us