AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಪೊರೇಟರ್ ಪಾಷಾ ವಿಕ್ಟೋರಿಯಾ ಪಾಲು, ಜೆ.ಜೆ.ನಗರ ಪೊಲೀಸರಿಗೂ ಶುರುವಾಯ್ತು ಭೀತಿ!

ಬೆಂಗಳೂರು: ಅತ್ತ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್​​ ಪಾಷಾ‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆಯೇ ಇತ್ತ ಜೆ.ಜೆ.ನಗರ ಪೊಲೀಸರಿಗೂ ಕೊರೊನಾ ಭೀತಿ ಶುರುವಾಗಿದೆ. ಸ್ಥಳೀಯ ಕಾರ್ಪೊರೇಟರ್ ಪಾಷಾ ಮೇ 27ರಂದು ಪೊಲೀಸರಿಗೆ ಆಹಾರ ವಿತರಿಸಿದ್ದ. ಸ್ವತಃ ಇಮ್ರಾನ್,​​ ಠಾಣೆಯ 30ಕ್ಕೂ ಹೆಚ್ಚು ಸಿಬ್ಬಂದಿಗೆ ಊಟ ಬಡಿಸಿದ್ದ ಎಂಬುದು ಇನ್ನೂ ಆತಂಕ ತಂದೊಡ್ಡಿದೆ. ಇದರಿಂದ ಜೆ.ಜೆ ನಗರ ಪೊಲೀಸರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ. ಜೆಜೆ ನಗರ ಪೊಲೀಸರಿಗೆ ಹಾಗಾಗದಿರಲಿ.. ಗಮನಾರ್ಹ ಸಂಗತಿಯೆಂದ್ರೆ ಈ […]

ಕಾರ್ಪೊರೇಟರ್ ಪಾಷಾ ವಿಕ್ಟೋರಿಯಾ ಪಾಲು, ಜೆ.ಜೆ.ನಗರ ಪೊಲೀಸರಿಗೂ  ಶುರುವಾಯ್ತು ಭೀತಿ!
ಸಾಧು ಶ್ರೀನಾಥ್​
|

Updated on:May 30, 2020 | 2:39 PM

Share

ಬೆಂಗಳೂರು: ಅತ್ತ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್​​ ಪಾಷಾ‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆಯೇ ಇತ್ತ ಜೆ.ಜೆ.ನಗರ ಪೊಲೀಸರಿಗೂ ಕೊರೊನಾ ಭೀತಿ ಶುರುವಾಗಿದೆ. ಸ್ಥಳೀಯ ಕಾರ್ಪೊರೇಟರ್ ಪಾಷಾ ಮೇ 27ರಂದು ಪೊಲೀಸರಿಗೆ ಆಹಾರ ವಿತರಿಸಿದ್ದ.

ಸ್ವತಃ ಇಮ್ರಾನ್,​​ ಠಾಣೆಯ 30ಕ್ಕೂ ಹೆಚ್ಚು ಸಿಬ್ಬಂದಿಗೆ ಊಟ ಬಡಿಸಿದ್ದ ಎಂಬುದು ಇನ್ನೂ ಆತಂಕ ತಂದೊಡ್ಡಿದೆ. ಇದರಿಂದ ಜೆ.ಜೆ ನಗರ ಪೊಲೀಸರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಜೆಜೆ ನಗರ ಪೊಲೀಸರಿಗೆ ಹಾಗಾಗದಿರಲಿ.. ಗಮನಾರ್ಹ ಸಂಗತಿಯೆಂದ್ರೆ ಈ ಹಿಂದೆ ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್​ ಮೇಲೆ ಸ್ಥಳೀಯ ಪುಂಡರು ಭಾರೀ ಹಲ್ಲೆ ನಡೆಸಿ, ಪುಂಡಾಟ ಮೆರೆದಿದ್ದರು. ಅಲ್ಲಿಂದೀಚೆಗೆ ಪೊಲೀಸರು ಪಾದರಾಯನಪುರದ ಮೇಲೆ ಹದ್ದಿನಕಣ್ಣಿಟ್ಟಿದ್ದು, ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದರು.

ಜೊತೆಗೆ ಅದೇ ಪುಂಡರನ್ನು ರಾಮನಗರದವರೆಗೂ ಕರೆದುಕೊಂಡು ಹೋಗಿ ಬಂದಿದ್ದರು. ಈ ಪ್ರಕ್ರಿಯೆಗಳ ವೇಳೆ ಯಾವುದೇ ಪೊಲೀಸ್​ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಆದ್ರೆ ಈಗ ಏನೋ ಎಂತೋ ಎಂಬಂತಾಗಿದೆ ಸ್ಥಳೀಯ ಪೊಲೀಸರ ಪರಿಸ್ಥಿತಿ.

ಪ್ರೈಮರಿ ಕಾಂಟ್ಯಾಕ್ಟ್ ಪಾಷಾ, ಜೊತೆಗೆ 3 ಸಂಬಂಧಿಗಳೂ ಆಸ್ಪತ್ರೆಗೆ! ಇಮ್ರಾನ್ ಪಾಷ ನನ್ನು ಪ್ರೈಮರಿ ಕಾಂಟ್ಯಾಕ್ಟ್ ಎಂದು ಪರಿಗಣಿಸಿರುವ ಬಿಬಿಎಂಪಿ ವೈದ್ಯಾಧಿಕಾರಿಗಳು ಪಾಷಾ ಜೊತೆಯಲ್ಲಿದ್ದ ಇತರೆ ಮೂವರನ್ನು ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ. ಇಮ್ರಾನ್ ಪಾಷಾ ಸಂಬಂಧಿಕರಾದ ಆ ಮೂವರನ್ನೂ ಬಿಬಿಎಂಪಿ ಸಿಬ್ಬಂದಿ ವಿಕ್ಟೋರಿಯಾ ಕೊವಿಡ್ ವಾರ್ಡ್​ಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.

Published On - 1:12 pm, Sat, 30 May 20

ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ವಿಡಿಯೋ ವೈರಲ್
ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ವಿಡಿಯೋ ವೈರಲ್
ಕೆಂಪೇಗೌಡ ಏರ್​ಪೋರ್ಟಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು
ಕೆಂಪೇಗೌಡ ಏರ್​ಪೋರ್ಟಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?