AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI- Help: ಭೀಮ್ ಆ್ಯಪ್ ಮೂಲಕ ಸಲೀಸಾಗಲಿದೆ ಸಮಸ್ಯೆಗೆ ಪರಿಹಾರ

ಡಿಜಿಟಲ್ ಪಾವತಿಯಲ್ಲಿ ಆಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಯುಪಿಐ- ಹೆಲ್ಪ್ ಸಹಾಯ ಪಡೆದುಕೊಳ್ಳಬಹುದು. ಈ ಅಪ್ಲಿಕೇಷನ್ ನಿಮಗೆ ಹೇಗೆ ಸಹಾಯ ಆಗಲಿದೆ ಎಂದು ತಿಳಿಯುವುದಕ್ಕೆ ಇಲ್ಲಿದೆ ಲೇಖನ.

UPI- Help: ಭೀಮ್ ಆ್ಯಪ್ ಮೂಲಕ ಸಲೀಸಾಗಲಿದೆ ಸಮಸ್ಯೆಗೆ ಪರಿಹಾರ
ಪ್ರಾತಿನಿಧಿಕ ಚಿತ್ರ
Srinivas Mata
|

Updated on:Mar 16, 2021 | 7:37 PM

Share

ಮುಂಬೈ: ಭೀಮ್ ಆ್ಯಪ್ ಬಳಸಿಕೊಂಡು ಬಳಕೆದಾರರು ಈಗ ಏಕೀಕೃತ ಪಾವತಿ ಇಂಟರ್​ಫೇಸ್ (ಯುಪಿಐ) ಪ್ಲಾಟ್‌ಫಾರ್ಮ್ ವಹಿವಾಟಿನ ಬಗ್ಗೆ ವ್ಯಾಜ್ಯಗಳನ್ನು ಸಲ್ಲಿಸಬಹುದು ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೇಳಿದೆ. ಮೊದಲಿಗೆ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಎನ್‌ಪಿಸಿಐ ಭೀಮ್ ಅಪ್ಲಿಕೇಶನ್‌ನ ಈ ಸೌಲಭ್ಯ ದೊರೆಯಲಿದೆ. ಪೇಟಿಎಂ ಪಾವತಿ ಬ್ಯಾಂಕ್ ಹಾಗೂ ಟಿಜೆಎಸ್​ಬಿ ಸಹಕಾರಿ ಬ್ಯಾಂಕ್​ಗಳು ಸಹ ಶೀಘ್ರದಲ್ಲೇ ಯುಪಿಐ- ಹೆಲ್ಪ್​ನ ಸಹಾಯವನ್ನು ಶೀಘ್ರದಲ್ಲೇ ಪಡೆಯಲಿವೆ.

ಮುಂಬರುವ ತಿಂಗಳುಗಳಲ್ಲಿ ಇತರ ಬ್ಯಾಂಕ್​ಗಳಿಗೆ ಈ ಸೇವೆ ದೊರೆಯಲಿದೆ. ಅಲ್ಲದೆ, ಬ್ಯಾಂಕ್​ಗಳು ಮತ್ತು ಫಿನ್‌ಟೆಕ್‌ಗಳು ತಮ್ಮ ಒಡೆತನದ ಅಪ್ಲಿಕೇಶನ್‌ಗಳಲ್ಲಿ ಹೆಲ್ಪ್ ವೈಶಿಷ್ಟ್ಯವನ್ನು ಒದಗಿಸುತ್ತವೆ. ಡಿಜಿಟಲ್ ಪಾವತಿಯಲ್ಲಿ ವಿಶ್ವಾಸ ಹೆಚ್ಚಾಗಬೇಕು ಎಂಬ ಕಾರಣಕ್ಕೆ ಕುಂದು-ಕೊರತೆ ನಿವಾರಣೆಗೆ ಇನ್-ಆಪ್ ವ್ಯವಸ್ಥೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕಡ್ಡಾಯ ಮಾಡಲಾಗಿದೆ. ಡಿಜಿ- ಸಹಾಯ ಅಭಿಯಾನದ ಭಾಗವಾಗಿ ಎನ್​ಪಿಸಿಐನಿಂದ ಯುಪಿಐ- ಹೆಲ್ಪ್ ಆರಂಭಿಸಲಾಗಿದೆ.

ಈ ಹೊಸ ಫೀಚರ್​ನಿಂದಾಗಿ ಬಳಕೆದಾರರು ತಮ್ಮ ಬಾಕಿ ಇರುವ ವಹಿವಾಟಿನ ಸ್ಥಿತಿಗತಿಯನ್ನು ಪರೀಕ್ಷಿಸಬಹುದು. ಪ್ರಕ್ರಿಯೆ ಪೂರ್ಣಗೊಳ್ಳದ ವಹಿವಾಟಿನ ಬಗ್ಗೆ ಅಥವಾ ಯಾರ ಖಾತೆಗೆ ಹಣ ಕಳುಹಿಸಲಾಗಿದೆಯೋ ಅವರಿಗೆ ಹಣ ತಲುಪದಿದ್ದಲ್ಲಿ ದೂರು ಸಲ್ಲಿಸಬಹುದು. ವರ್ತಕರ ಜತೆಗಿನ ವಹಿವಾಟುಗಳಿಗೆ ಸಂಬಂಧಿಸಿದಂತೆಯೂ ದೂರು ನೀಡಬಹುದು. ಒಂದು ವೇಳೆ ಬಾಕಿ ಇರುವ ವಹಿವಾಟುಗಳ ಬಗ್ಗೆ ಬಳಕೆದಾರ ಯಾವುದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಯುಪಿಐ- ಹೆಲ್ಪ್ ತಾನಾಗಿಯೇ ಅಪ್​ಡೇಟ್ ನೀಡುತ್ತದೆ ಹಾಗೂ ಅಂತಿಮವಾಗಿ ಆ ವಹಿವಾಟಿನ ಅಂತಿಮ ಸ್ಥಿತಿಯನ್ನು ತಿಳಿಸುತ್ತದೆ.

ಇದನ್ನೂ ಓದಿ: ಭಾರತದ ಯುಪಿಐ ವ್ಯವಸ್ಥೆಯನ್ನು ಹಾಡಿ ಹೊಗಳಿದ ಬಿಲ್ ಗೇಟ್ಸ್

Published On - 7:34 pm, Tue, 16 March 21

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು