AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ವರ್ಷದ ಬಳಿಕ ಪ್ರೇಯಸಿಗೆ ಕೈಕೊಟ್ಟ.. ಇನ್ನೊಬ್ಬಳ ಕೈಹಿಡಿದ! ಪ್ರಿಯಕರನಿಗಾಗಿ ಮಹಿಳೆ ಕಣ್ಣೀರು..

ಗದಗ: ಆಕೆ ಮದ್ವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿದ್ಲು. ಆದ್ರೆ ಪ್ರೀತಿಸಿದವ ಮಾತ್ರ ಸಂಸಾರ ಮಾಡೋಕೆ ಬಿಡದೆ ಆಕೆಯನ್ನ ತನ್ನ ಜೊತೆ ಕರೆದುಕೊಂಡು ಬಂದಿದ್ದ. ಬರೋಬ್ಬರಿ 9 ವರ್ಷ ಒಟ್ಟಿಗೆ ಜೀವನ ನಡೆಸಿದ್ರು. ಆದ್ರೀಗ ಪ್ರೀತಿಸಿದವಳಿಗೆ ಕೈಕೊಟ್ಟು ಬೇರೆಯವಳನ್ನ ಮದ್ವೆ ಆಗಿದ್ದಾನೆ. ಇದ್ರಿಂದ ಆತನನ್ನ ನಂಬಿ ಬಂದವಳ ಬದುಕು ಬೀದಿಗೆ ಬಂದಿದೆ. ಗಂಡ ಬೇಕು ಅಂತಾ ನೊಂದ ಮಹಿಳೆಯ ಕಣ್ಣೀರು..! ನನ್ನ ಗಂಡ ನಂಗೆ ಬೇಕು.. ಅವನಿಲ್ಲದೆ ಬದುಕೋಕೆ ಆಗಲ್ಲ ಅಂತಾ ಒಂದೇ ಸಮನೆ ಗೋಳಾಡ್ತಿರೋ ಈಕೆಯ […]

9 ವರ್ಷದ ಬಳಿಕ ಪ್ರೇಯಸಿಗೆ ಕೈಕೊಟ್ಟ.. ಇನ್ನೊಬ್ಬಳ ಕೈಹಿಡಿದ! ಪ್ರಿಯಕರನಿಗಾಗಿ ಮಹಿಳೆ ಕಣ್ಣೀರು..
Follow us
ಆಯೇಷಾ ಬಾನು
|

Updated on: Aug 13, 2020 | 7:22 AM

ಗದಗ: ಆಕೆ ಮದ್ವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿದ್ಲು. ಆದ್ರೆ ಪ್ರೀತಿಸಿದವ ಮಾತ್ರ ಸಂಸಾರ ಮಾಡೋಕೆ ಬಿಡದೆ ಆಕೆಯನ್ನ ತನ್ನ ಜೊತೆ ಕರೆದುಕೊಂಡು ಬಂದಿದ್ದ. ಬರೋಬ್ಬರಿ 9 ವರ್ಷ ಒಟ್ಟಿಗೆ ಜೀವನ ನಡೆಸಿದ್ರು. ಆದ್ರೀಗ ಪ್ರೀತಿಸಿದವಳಿಗೆ ಕೈಕೊಟ್ಟು ಬೇರೆಯವಳನ್ನ ಮದ್ವೆ ಆಗಿದ್ದಾನೆ. ಇದ್ರಿಂದ ಆತನನ್ನ ನಂಬಿ ಬಂದವಳ ಬದುಕು ಬೀದಿಗೆ ಬಂದಿದೆ.

ಗಂಡ ಬೇಕು ಅಂತಾ ನೊಂದ ಮಹಿಳೆಯ ಕಣ್ಣೀರು..! ನನ್ನ ಗಂಡ ನಂಗೆ ಬೇಕು.. ಅವನಿಲ್ಲದೆ ಬದುಕೋಕೆ ಆಗಲ್ಲ ಅಂತಾ ಒಂದೇ ಸಮನೆ ಗೋಳಾಡ್ತಿರೋ ಈಕೆಯ ಹೆಸ್ರು ಆಶಾ. ಗದಗ ತಾಲೂಕಿನ ಅಡವಿಸೋಮಪುರ ನಿವಾಸಿ. 9 ವರ್ಷದ ಹಿಂದೆ ಈಕೆಯನ್ನ ವಿಜಯಪುರಕ್ಕೆ ಕೊಟ್ಟು ಮದ್ವೆ ಮಾಡಲಾಗಿತ್ತು. ಆದ್ರೆ ಅಲ್ಲಿ ಈಕೆ ಗಂಡನ ಜೊತೆ ಸಂಸಾರ ಮಾಡಿದ್ದು ಜಸ್ಟ್ ನಾಲ್ಕೇ ತಿಂಗಳು. ಅಷ್ಟರಲ್ಲೇ ಹುಚ್ಚೀರಪ್ಪ ಅನ್ನೋ ಪಾಗಲ್ ಪ್ರೇಮಿ ನನ್ನ ಹುಡುಗಿ ನಂಗೆ ಬೇಕು ಅಂತಾ ಪಟ್ಟು ಹಿಡಿದಿದ್ನಂತೆ. ಆಶಾಳ ಗಂಡನ ಮನೆಗೆ ಹೋಗಿ ಗಲಾಟೆ ಮಾಡಿದ್ನಂತೆ.

ವಿಷ್ಯ ಗೊತ್ತಾದ ಮೇಲೆ ಗಂಡನ ಮನೆಯವ್ರು ಈಕೆಯನ್ನ ಬಿಟ್ಟು ಬಿಟ್ಟಿದ್ರಂತೆ. ಅಂದಿನಿಂದ ಹುಚ್ಚೀರಪ್ಪನ ಜೊತೆ ಈಕೆ ಸಂಸಾರ ಮಾಡ್ಕೊಂಡಿದ್ಲು. ಆದ್ರೀಗ ಐನಾತಿ ಆಸಾಮಿ ಬೇರೆಯವಳನ್ನ ಮದ್ವೆ ಆಗಿದ್ದು, ಮೋಸ ಹೋದ ಆಶಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಗಂಡ ಬೇಕು ಅಂತಾ ಕಣ್ಣೀರಾಕ್ತಿದ್ದಾಳೆ.

ಇನ್ನು ಇದಿಷ್ಟೇ ಅಲ್ಲದೆ ಹುಚ್ಚೀರಪ್ಪ 5 ತಿಂಗಳ ಗರ್ಭಿಣಿ ಇದ್ದಾಗ ಅಬಾರ್ಷನ್ ಮಾಡಿಸಿದ್ದ ಅಂತಾ ಮಹಿಳೆ ಆರೋಪಿಸಿದ್ದಾಳೆ. ಬಳಿಕ ಹೆಂಡ್ತಿ ಜೊತೆಗೆ ನಿನ್ನನ್ನೂ ಚೆನ್ನಾಗಿ ನೋಡಿಕೊಳ್ತೇನೆ ಅಂದಿದ್ನಂತೆ. ಹುಚ್ಚೀರಪ್ಪನ ಮಾತಿಗೆ ಮರುಳಾಗಿ ಆಶಾ ಮದ್ವೆಗೆ ಒಪ್ಪಿಗೆ ನೀಡಿದ್ಲಂತೆ. ಆದ್ರೀಗ ಹೆಂಡ್ತಿ ಬಂದ್ಮೇಲೆ ನನ್ನಿಂದ ದೂರ ಆಗಿದ್ದಾನೆ. ನನಗೆ ನ್ಯಾಯ ಬೇಕು ಅಂತಿದ್ದಾಳೆ. ಆದ್ರೆ ಪೊಲೀಸ್ರು ಮಾತ್ರ, ಆಶಾಳನ್ನ ಹುಚ್ಚೀರಪ್ಪ ಮದ್ವೆ ಆಗಿಲ್ಲ. ಹೀಗಾಗಿ ಇದನ್ನ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ. ಅಲ್ಲಿ ಇಬ್ಬರನ್ನ ಕರೆದು ಇತ್ಯರ್ಥ ಮಾಡ್ತಾರೆ ಅಂದ್ರು.

ಒಟ್ನಲ್ಲಿ ಪಾಗಲ್ ಪ್ರೇಮಿ ಮಾಡಿದ ಅವಾಂತರಕ್ಕೆ ಮಹಿಳೆಯೊಬ್ಬಳು ಬೀದಿಪಾಲಾಗಿದ್ದಾಳೆ. ಅತ್ತ ಗಂಡನ ಇಲ್ಲದೆ ಇತ್ತ ಪ್ರಿಯಕರನೂ ಇಲ್ಲದೆ ಕಣ್ಣೀರಾಕ್ತಿದ್ದಾಳೆ.

Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ
ಜೀವಂತ ಕ್ಷಿಪಣಿಯನ್ನು ಗಮನಿಸಿದ ಸ್ಥಳೀಯರಿಂದ ಸೇನೆಗೆ ಮಾಹಿತಿ
ಜೀವಂತ ಕ್ಷಿಪಣಿಯನ್ನು ಗಮನಿಸಿದ ಸ್ಥಳೀಯರಿಂದ ಸೇನೆಗೆ ಮಾಹಿತಿ