AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ವರ್ಷದ ಬಳಿಕ ಪ್ರೇಯಸಿಗೆ ಕೈಕೊಟ್ಟ.. ಇನ್ನೊಬ್ಬಳ ಕೈಹಿಡಿದ! ಪ್ರಿಯಕರನಿಗಾಗಿ ಮಹಿಳೆ ಕಣ್ಣೀರು..

ಗದಗ: ಆಕೆ ಮದ್ವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿದ್ಲು. ಆದ್ರೆ ಪ್ರೀತಿಸಿದವ ಮಾತ್ರ ಸಂಸಾರ ಮಾಡೋಕೆ ಬಿಡದೆ ಆಕೆಯನ್ನ ತನ್ನ ಜೊತೆ ಕರೆದುಕೊಂಡು ಬಂದಿದ್ದ. ಬರೋಬ್ಬರಿ 9 ವರ್ಷ ಒಟ್ಟಿಗೆ ಜೀವನ ನಡೆಸಿದ್ರು. ಆದ್ರೀಗ ಪ್ರೀತಿಸಿದವಳಿಗೆ ಕೈಕೊಟ್ಟು ಬೇರೆಯವಳನ್ನ ಮದ್ವೆ ಆಗಿದ್ದಾನೆ. ಇದ್ರಿಂದ ಆತನನ್ನ ನಂಬಿ ಬಂದವಳ ಬದುಕು ಬೀದಿಗೆ ಬಂದಿದೆ. ಗಂಡ ಬೇಕು ಅಂತಾ ನೊಂದ ಮಹಿಳೆಯ ಕಣ್ಣೀರು..! ನನ್ನ ಗಂಡ ನಂಗೆ ಬೇಕು.. ಅವನಿಲ್ಲದೆ ಬದುಕೋಕೆ ಆಗಲ್ಲ ಅಂತಾ ಒಂದೇ ಸಮನೆ ಗೋಳಾಡ್ತಿರೋ ಈಕೆಯ […]

9 ವರ್ಷದ ಬಳಿಕ ಪ್ರೇಯಸಿಗೆ ಕೈಕೊಟ್ಟ.. ಇನ್ನೊಬ್ಬಳ ಕೈಹಿಡಿದ! ಪ್ರಿಯಕರನಿಗಾಗಿ ಮಹಿಳೆ ಕಣ್ಣೀರು..
ಆಯೇಷಾ ಬಾನು
|

Updated on: Aug 13, 2020 | 7:22 AM

Share

ಗದಗ: ಆಕೆ ಮದ್ವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿದ್ಲು. ಆದ್ರೆ ಪ್ರೀತಿಸಿದವ ಮಾತ್ರ ಸಂಸಾರ ಮಾಡೋಕೆ ಬಿಡದೆ ಆಕೆಯನ್ನ ತನ್ನ ಜೊತೆ ಕರೆದುಕೊಂಡು ಬಂದಿದ್ದ. ಬರೋಬ್ಬರಿ 9 ವರ್ಷ ಒಟ್ಟಿಗೆ ಜೀವನ ನಡೆಸಿದ್ರು. ಆದ್ರೀಗ ಪ್ರೀತಿಸಿದವಳಿಗೆ ಕೈಕೊಟ್ಟು ಬೇರೆಯವಳನ್ನ ಮದ್ವೆ ಆಗಿದ್ದಾನೆ. ಇದ್ರಿಂದ ಆತನನ್ನ ನಂಬಿ ಬಂದವಳ ಬದುಕು ಬೀದಿಗೆ ಬಂದಿದೆ.

ಗಂಡ ಬೇಕು ಅಂತಾ ನೊಂದ ಮಹಿಳೆಯ ಕಣ್ಣೀರು..! ನನ್ನ ಗಂಡ ನಂಗೆ ಬೇಕು.. ಅವನಿಲ್ಲದೆ ಬದುಕೋಕೆ ಆಗಲ್ಲ ಅಂತಾ ಒಂದೇ ಸಮನೆ ಗೋಳಾಡ್ತಿರೋ ಈಕೆಯ ಹೆಸ್ರು ಆಶಾ. ಗದಗ ತಾಲೂಕಿನ ಅಡವಿಸೋಮಪುರ ನಿವಾಸಿ. 9 ವರ್ಷದ ಹಿಂದೆ ಈಕೆಯನ್ನ ವಿಜಯಪುರಕ್ಕೆ ಕೊಟ್ಟು ಮದ್ವೆ ಮಾಡಲಾಗಿತ್ತು. ಆದ್ರೆ ಅಲ್ಲಿ ಈಕೆ ಗಂಡನ ಜೊತೆ ಸಂಸಾರ ಮಾಡಿದ್ದು ಜಸ್ಟ್ ನಾಲ್ಕೇ ತಿಂಗಳು. ಅಷ್ಟರಲ್ಲೇ ಹುಚ್ಚೀರಪ್ಪ ಅನ್ನೋ ಪಾಗಲ್ ಪ್ರೇಮಿ ನನ್ನ ಹುಡುಗಿ ನಂಗೆ ಬೇಕು ಅಂತಾ ಪಟ್ಟು ಹಿಡಿದಿದ್ನಂತೆ. ಆಶಾಳ ಗಂಡನ ಮನೆಗೆ ಹೋಗಿ ಗಲಾಟೆ ಮಾಡಿದ್ನಂತೆ.

ವಿಷ್ಯ ಗೊತ್ತಾದ ಮೇಲೆ ಗಂಡನ ಮನೆಯವ್ರು ಈಕೆಯನ್ನ ಬಿಟ್ಟು ಬಿಟ್ಟಿದ್ರಂತೆ. ಅಂದಿನಿಂದ ಹುಚ್ಚೀರಪ್ಪನ ಜೊತೆ ಈಕೆ ಸಂಸಾರ ಮಾಡ್ಕೊಂಡಿದ್ಲು. ಆದ್ರೀಗ ಐನಾತಿ ಆಸಾಮಿ ಬೇರೆಯವಳನ್ನ ಮದ್ವೆ ಆಗಿದ್ದು, ಮೋಸ ಹೋದ ಆಶಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಗಂಡ ಬೇಕು ಅಂತಾ ಕಣ್ಣೀರಾಕ್ತಿದ್ದಾಳೆ.

ಇನ್ನು ಇದಿಷ್ಟೇ ಅಲ್ಲದೆ ಹುಚ್ಚೀರಪ್ಪ 5 ತಿಂಗಳ ಗರ್ಭಿಣಿ ಇದ್ದಾಗ ಅಬಾರ್ಷನ್ ಮಾಡಿಸಿದ್ದ ಅಂತಾ ಮಹಿಳೆ ಆರೋಪಿಸಿದ್ದಾಳೆ. ಬಳಿಕ ಹೆಂಡ್ತಿ ಜೊತೆಗೆ ನಿನ್ನನ್ನೂ ಚೆನ್ನಾಗಿ ನೋಡಿಕೊಳ್ತೇನೆ ಅಂದಿದ್ನಂತೆ. ಹುಚ್ಚೀರಪ್ಪನ ಮಾತಿಗೆ ಮರುಳಾಗಿ ಆಶಾ ಮದ್ವೆಗೆ ಒಪ್ಪಿಗೆ ನೀಡಿದ್ಲಂತೆ. ಆದ್ರೀಗ ಹೆಂಡ್ತಿ ಬಂದ್ಮೇಲೆ ನನ್ನಿಂದ ದೂರ ಆಗಿದ್ದಾನೆ. ನನಗೆ ನ್ಯಾಯ ಬೇಕು ಅಂತಿದ್ದಾಳೆ. ಆದ್ರೆ ಪೊಲೀಸ್ರು ಮಾತ್ರ, ಆಶಾಳನ್ನ ಹುಚ್ಚೀರಪ್ಪ ಮದ್ವೆ ಆಗಿಲ್ಲ. ಹೀಗಾಗಿ ಇದನ್ನ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ. ಅಲ್ಲಿ ಇಬ್ಬರನ್ನ ಕರೆದು ಇತ್ಯರ್ಥ ಮಾಡ್ತಾರೆ ಅಂದ್ರು.

ಒಟ್ನಲ್ಲಿ ಪಾಗಲ್ ಪ್ರೇಮಿ ಮಾಡಿದ ಅವಾಂತರಕ್ಕೆ ಮಹಿಳೆಯೊಬ್ಬಳು ಬೀದಿಪಾಲಾಗಿದ್ದಾಳೆ. ಅತ್ತ ಗಂಡನ ಇಲ್ಲದೆ ಇತ್ತ ಪ್ರಿಯಕರನೂ ಇಲ್ಲದೆ ಕಣ್ಣೀರಾಕ್ತಿದ್ದಾಳೆ.

ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ