AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ವರ್ಷದ ಬಳಿಕ ಪ್ರೇಯಸಿಗೆ ಕೈಕೊಟ್ಟ.. ಇನ್ನೊಬ್ಬಳ ಕೈಹಿಡಿದ! ಪ್ರಿಯಕರನಿಗಾಗಿ ಮಹಿಳೆ ಕಣ್ಣೀರು..

ಗದಗ: ಆಕೆ ಮದ್ವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿದ್ಲು. ಆದ್ರೆ ಪ್ರೀತಿಸಿದವ ಮಾತ್ರ ಸಂಸಾರ ಮಾಡೋಕೆ ಬಿಡದೆ ಆಕೆಯನ್ನ ತನ್ನ ಜೊತೆ ಕರೆದುಕೊಂಡು ಬಂದಿದ್ದ. ಬರೋಬ್ಬರಿ 9 ವರ್ಷ ಒಟ್ಟಿಗೆ ಜೀವನ ನಡೆಸಿದ್ರು. ಆದ್ರೀಗ ಪ್ರೀತಿಸಿದವಳಿಗೆ ಕೈಕೊಟ್ಟು ಬೇರೆಯವಳನ್ನ ಮದ್ವೆ ಆಗಿದ್ದಾನೆ. ಇದ್ರಿಂದ ಆತನನ್ನ ನಂಬಿ ಬಂದವಳ ಬದುಕು ಬೀದಿಗೆ ಬಂದಿದೆ. ಗಂಡ ಬೇಕು ಅಂತಾ ನೊಂದ ಮಹಿಳೆಯ ಕಣ್ಣೀರು..! ನನ್ನ ಗಂಡ ನಂಗೆ ಬೇಕು.. ಅವನಿಲ್ಲದೆ ಬದುಕೋಕೆ ಆಗಲ್ಲ ಅಂತಾ ಒಂದೇ ಸಮನೆ ಗೋಳಾಡ್ತಿರೋ ಈಕೆಯ […]

9 ವರ್ಷದ ಬಳಿಕ ಪ್ರೇಯಸಿಗೆ ಕೈಕೊಟ್ಟ.. ಇನ್ನೊಬ್ಬಳ ಕೈಹಿಡಿದ! ಪ್ರಿಯಕರನಿಗಾಗಿ ಮಹಿಳೆ ಕಣ್ಣೀರು..
ಆಯೇಷಾ ಬಾನು
|

Updated on: Aug 13, 2020 | 7:22 AM

Share

ಗದಗ: ಆಕೆ ಮದ್ವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿದ್ಲು. ಆದ್ರೆ ಪ್ರೀತಿಸಿದವ ಮಾತ್ರ ಸಂಸಾರ ಮಾಡೋಕೆ ಬಿಡದೆ ಆಕೆಯನ್ನ ತನ್ನ ಜೊತೆ ಕರೆದುಕೊಂಡು ಬಂದಿದ್ದ. ಬರೋಬ್ಬರಿ 9 ವರ್ಷ ಒಟ್ಟಿಗೆ ಜೀವನ ನಡೆಸಿದ್ರು. ಆದ್ರೀಗ ಪ್ರೀತಿಸಿದವಳಿಗೆ ಕೈಕೊಟ್ಟು ಬೇರೆಯವಳನ್ನ ಮದ್ವೆ ಆಗಿದ್ದಾನೆ. ಇದ್ರಿಂದ ಆತನನ್ನ ನಂಬಿ ಬಂದವಳ ಬದುಕು ಬೀದಿಗೆ ಬಂದಿದೆ.

ಗಂಡ ಬೇಕು ಅಂತಾ ನೊಂದ ಮಹಿಳೆಯ ಕಣ್ಣೀರು..! ನನ್ನ ಗಂಡ ನಂಗೆ ಬೇಕು.. ಅವನಿಲ್ಲದೆ ಬದುಕೋಕೆ ಆಗಲ್ಲ ಅಂತಾ ಒಂದೇ ಸಮನೆ ಗೋಳಾಡ್ತಿರೋ ಈಕೆಯ ಹೆಸ್ರು ಆಶಾ. ಗದಗ ತಾಲೂಕಿನ ಅಡವಿಸೋಮಪುರ ನಿವಾಸಿ. 9 ವರ್ಷದ ಹಿಂದೆ ಈಕೆಯನ್ನ ವಿಜಯಪುರಕ್ಕೆ ಕೊಟ್ಟು ಮದ್ವೆ ಮಾಡಲಾಗಿತ್ತು. ಆದ್ರೆ ಅಲ್ಲಿ ಈಕೆ ಗಂಡನ ಜೊತೆ ಸಂಸಾರ ಮಾಡಿದ್ದು ಜಸ್ಟ್ ನಾಲ್ಕೇ ತಿಂಗಳು. ಅಷ್ಟರಲ್ಲೇ ಹುಚ್ಚೀರಪ್ಪ ಅನ್ನೋ ಪಾಗಲ್ ಪ್ರೇಮಿ ನನ್ನ ಹುಡುಗಿ ನಂಗೆ ಬೇಕು ಅಂತಾ ಪಟ್ಟು ಹಿಡಿದಿದ್ನಂತೆ. ಆಶಾಳ ಗಂಡನ ಮನೆಗೆ ಹೋಗಿ ಗಲಾಟೆ ಮಾಡಿದ್ನಂತೆ.

ವಿಷ್ಯ ಗೊತ್ತಾದ ಮೇಲೆ ಗಂಡನ ಮನೆಯವ್ರು ಈಕೆಯನ್ನ ಬಿಟ್ಟು ಬಿಟ್ಟಿದ್ರಂತೆ. ಅಂದಿನಿಂದ ಹುಚ್ಚೀರಪ್ಪನ ಜೊತೆ ಈಕೆ ಸಂಸಾರ ಮಾಡ್ಕೊಂಡಿದ್ಲು. ಆದ್ರೀಗ ಐನಾತಿ ಆಸಾಮಿ ಬೇರೆಯವಳನ್ನ ಮದ್ವೆ ಆಗಿದ್ದು, ಮೋಸ ಹೋದ ಆಶಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಗಂಡ ಬೇಕು ಅಂತಾ ಕಣ್ಣೀರಾಕ್ತಿದ್ದಾಳೆ.

ಇನ್ನು ಇದಿಷ್ಟೇ ಅಲ್ಲದೆ ಹುಚ್ಚೀರಪ್ಪ 5 ತಿಂಗಳ ಗರ್ಭಿಣಿ ಇದ್ದಾಗ ಅಬಾರ್ಷನ್ ಮಾಡಿಸಿದ್ದ ಅಂತಾ ಮಹಿಳೆ ಆರೋಪಿಸಿದ್ದಾಳೆ. ಬಳಿಕ ಹೆಂಡ್ತಿ ಜೊತೆಗೆ ನಿನ್ನನ್ನೂ ಚೆನ್ನಾಗಿ ನೋಡಿಕೊಳ್ತೇನೆ ಅಂದಿದ್ನಂತೆ. ಹುಚ್ಚೀರಪ್ಪನ ಮಾತಿಗೆ ಮರುಳಾಗಿ ಆಶಾ ಮದ್ವೆಗೆ ಒಪ್ಪಿಗೆ ನೀಡಿದ್ಲಂತೆ. ಆದ್ರೀಗ ಹೆಂಡ್ತಿ ಬಂದ್ಮೇಲೆ ನನ್ನಿಂದ ದೂರ ಆಗಿದ್ದಾನೆ. ನನಗೆ ನ್ಯಾಯ ಬೇಕು ಅಂತಿದ್ದಾಳೆ. ಆದ್ರೆ ಪೊಲೀಸ್ರು ಮಾತ್ರ, ಆಶಾಳನ್ನ ಹುಚ್ಚೀರಪ್ಪ ಮದ್ವೆ ಆಗಿಲ್ಲ. ಹೀಗಾಗಿ ಇದನ್ನ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ. ಅಲ್ಲಿ ಇಬ್ಬರನ್ನ ಕರೆದು ಇತ್ಯರ್ಥ ಮಾಡ್ತಾರೆ ಅಂದ್ರು.

ಒಟ್ನಲ್ಲಿ ಪಾಗಲ್ ಪ್ರೇಮಿ ಮಾಡಿದ ಅವಾಂತರಕ್ಕೆ ಮಹಿಳೆಯೊಬ್ಬಳು ಬೀದಿಪಾಲಾಗಿದ್ದಾಳೆ. ಅತ್ತ ಗಂಡನ ಇಲ್ಲದೆ ಇತ್ತ ಪ್ರಿಯಕರನೂ ಇಲ್ಲದೆ ಕಣ್ಣೀರಾಕ್ತಿದ್ದಾಳೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ