ಸೆಲ್ಲಾರ್ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲವೆಂಬ ನೆಪ; 10 ಲಕ್ಷ ಲಂಚಕ್ಕೆ ಬೇಡಿಕೆ?

ಮೈಸೂರು: ಇಲ್ಲಿನ ಮಹಾನಗರ ಪಾಲಿಕೆ ಸದಸ್ಯರ ವಿರುದ್ಧ ಲಂಚ ವಸೂಲಿ ಆರೋಪ ಕೇಳಿಬಂದಿದೆ. ಆ​ರ್​ಟಿಐ ಕಾರ್ಯಕರ್ತ ಗಂಗರಾಜು ಎಂಬುವರು ಮಾಡಿರುವ ಈ ಆರೋಪಕ್ಕೆ ಪುಷ್ಟಿ ನೀಡುವಂತಹ ಆಡಿಯೋವೊಂದು ಬಿಡುಗಡೆಯಾಗಿದೆ. ಏನಿದು ಲಂಚಗುಳಿ ಘಟನೆ? ನಗರದ ರಾಜಕುಮಾರ್​ ರಸ್ತೆಯಲ್ಲಿ ರಮೇಶ್​ ಎಂಬುವರು 4 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದರು. ಆದರೆ ಅವರು ಸೆಲ್ಲಾರ್​ ನಿರ್ಮಿಸಲು ಅನುಮತಿ ಪಡೆದಿಲ್ಲ ಎಂಬ ನೆಪವೊಡ್ಡಿ ಮಹಾನಗರ ಪಾಲಿಕೆ ಸಮಿತಿ ಕಟ್ಟಡ ಧ್ವಂಸಕ್ಕೆ ಮುಂದಾಯಿತು. ಈ ಮಧ್ಯೆ, ಧ್ವಂಸ ಮಾಡಬಾರದು ಎಂದರೆ 10 ಲಕ್ಷ […]

ಸೆಲ್ಲಾರ್ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲವೆಂಬ ನೆಪ; 10 ಲಕ್ಷ ಲಂಚಕ್ಕೆ ಬೇಡಿಕೆ?
ಸಾಧು ಶ್ರೀನಾಥ್​ Edited By:

Updated on: Nov 20, 2020 | 1:36 PM

ಮೈಸೂರು: ಇಲ್ಲಿನ ಮಹಾನಗರ ಪಾಲಿಕೆ ಸದಸ್ಯರ ವಿರುದ್ಧ ಲಂಚ ವಸೂಲಿ ಆರೋಪ ಕೇಳಿಬಂದಿದೆ. ಆ​ರ್​ಟಿಐ ಕಾರ್ಯಕರ್ತ ಗಂಗರಾಜು ಎಂಬುವರು ಮಾಡಿರುವ ಈ ಆರೋಪಕ್ಕೆ ಪುಷ್ಟಿ ನೀಡುವಂತಹ ಆಡಿಯೋವೊಂದು ಬಿಡುಗಡೆಯಾಗಿದೆ.

ಏನಿದು ಲಂಚಗುಳಿ ಘಟನೆ?
ನಗರದ ರಾಜಕುಮಾರ್​ ರಸ್ತೆಯಲ್ಲಿ ರಮೇಶ್​ ಎಂಬುವರು 4 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದರು. ಆದರೆ ಅವರು ಸೆಲ್ಲಾರ್​ ನಿರ್ಮಿಸಲು ಅನುಮತಿ ಪಡೆದಿಲ್ಲ ಎಂಬ ನೆಪವೊಡ್ಡಿ ಮಹಾನಗರ ಪಾಲಿಕೆ ಸಮಿತಿ ಕಟ್ಟಡ ಧ್ವಂಸಕ್ಕೆ ಮುಂದಾಯಿತು. ಈ ಮಧ್ಯೆ, ಧ್ವಂಸ ಮಾಡಬಾರದು ಎಂದರೆ 10 ಲಕ್ಷ ರೂ. ಹಣ ಕೊಡಬೇಕು ಎಂದು ರಮೇಶ್​ ಬಳಿ ಪಾಲಿಕೆ ಸದಸ್ಯೆ ಲಕ್ಷ್ಮೀ ಶಿವಣ್ಣ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಲಕ್ಷ್ಮೀ ಶಿವಣ್ಣ ಮಾತನಾಡಿದ್ದಾರೆನ್ನಲಾದ ಆಡಿಯೋ ಕೂಡ ಬಿಡುಗಡೆಯಾಗಿದೆ. ಮಾಜಿ ಮೇಯರ್​ ಸಂದೇಶ್​ ಸ್ವಾಮಿಗೂ ಈ ಹಣದಲ್ಲಿ ಪಾಲಿದೆ ಎಂದು ಸದಸ್ಯೆ ಹೇಳಿದ್ದು, ಆಡಿಯೋದಲ್ಲಿ ಅದು ಕೇಳಿಬಂದಿದೆ.

ಪಾಲಿಕೆ ಸದಸ್ಯರು ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಎಸಿಬಿಗೆ ದೂರು ನೀಡಿದ್ದೆ. ಲಂಚ ಸ್ವೀಕರಿಸುವಾಗಲೇ ದಾಳಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರ ವಿರುದ್ಧವೂ ಪ್ರಕರಣ ದಾಖಲು ಮಾಡುತ್ತೇವೆ ಎಂದು ಕಟ್ಟಡ ಮಾಲೀಕ ರಮೇಶ್​ ತಿಳಿಸಿದ್ದಾರೆ.

ನಾವು ಅನುಮತಿ ಪಡೆಯದೆ ಸೆಲ್ಲಾರ್​ ನಿರ್ಮಾಣ ಮಾಡಿದ್ದು ಸತ್ಯ. ಆ ಬಗ್ಗೆ ಅವರು ಕಾನೂನಿನ ಅಡಿ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಲಂಚ ಕೇಳುತ್ತಾರೆ. ಈಗಾಗಲೇ ಎರಡು ಪಟ್ಟು ದಂಡದ ಜತೆ, ಕಂದಾಯ ಕಟ್ಟುತ್ತಿದ್ದೇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಗಂಗರಾಜು ಅವರೂ ಕೂಡ ರಮೇಶ್ ಜತೆ ಇದ್ದು, ಬೆಂಬಲ ಸೂಚಿಸಿದ್ದಾರೆ.

 

Loading...
Unable to load recommendations.
Follow Us