AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರ್ಜಿಯಾ ಮರುಎಣಿಕೆಯಲ್ಲೂ ಟ್ರಂಪ್​ಗೆ ಮುಖಭಂಗ; ಬೈಡೆನ್​ಗೆ​ ಐತಿಹಾಸಿಕ ಗೆಲುವು

ವಾಷಿಂಗ್ಟನ್​: ಅಮೆರಿಕ ಚುನಾವಣೆ ಫಲಿತಾಂಶ ಈ ಬಾರಿ ಡೆಮಾಕ್ರಟಿಕ್​ ಪಕ್ಷದ ಜೋ ಬೈಡನ್​​ ಪರವಾಗಿ ಬಂದಿದ್ದರೂ ದಕ್ಷಿಣ ಅಮೆರಿಕದ ಜಾರ್ಜಿಯಾ ರಾಜ್ಯ ಇನ್ನೂ ಕುತೂಹಲ ಉಳಿಸಿಕೊಂಡಿತ್ತು. ಅಲ್ಲಿ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ಗಿಂತ ಬಿಡೆನ್​ ತುಂಬ ಕಡಿಮೆ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರಿಂದ ಮರುಎಣಿಕೆಗೆ ಆದೇಶ ನೀಡಲಾಗಿತ್ತು. ಇದೀಗ ಜಾರ್ಜಿಯಾದ ಮತ ಎಣಿಕೆಯೂ ಮುಗಿದಿದ್ದು ಅಲ್ಲಿ ಕೂಡ ಜೋ ಬೈಡನ್​​​ ಅವರೇ ಗೆದ್ದಿದ್ದಾರೆ. ಬೈಡನ್​ಗೆ 12,284 ಮತಗಳ ಅಂತರದ ಗೆಲುವು.. ಸುಮಾರು 5 ಮಿಲಿಯನ್​ ಮತ ಚಲಾವಣೆ […]

ಜಾರ್ಜಿಯಾ ಮರುಎಣಿಕೆಯಲ್ಲೂ ಟ್ರಂಪ್​ಗೆ ಮುಖಭಂಗ; ಬೈಡೆನ್​ಗೆ​ ಐತಿಹಾಸಿಕ ಗೆಲುವು
ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್
ಪೃಥ್ವಿಶಂಕರ
| Edited By: ಸಾಧು ಶ್ರೀನಾಥ್​|

Updated on: Nov 20, 2020 | 1:46 PM

Share

ವಾಷಿಂಗ್ಟನ್​: ಅಮೆರಿಕ ಚುನಾವಣೆ ಫಲಿತಾಂಶ ಈ ಬಾರಿ ಡೆಮಾಕ್ರಟಿಕ್​ ಪಕ್ಷದ ಜೋ ಬೈಡನ್​​ ಪರವಾಗಿ ಬಂದಿದ್ದರೂ ದಕ್ಷಿಣ ಅಮೆರಿಕದ ಜಾರ್ಜಿಯಾ ರಾಜ್ಯ ಇನ್ನೂ ಕುತೂಹಲ ಉಳಿಸಿಕೊಂಡಿತ್ತು. ಅಲ್ಲಿ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ಗಿಂತ ಬಿಡೆನ್​ ತುಂಬ ಕಡಿಮೆ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರಿಂದ ಮರುಎಣಿಕೆಗೆ ಆದೇಶ ನೀಡಲಾಗಿತ್ತು. ಇದೀಗ ಜಾರ್ಜಿಯಾದ ಮತ ಎಣಿಕೆಯೂ ಮುಗಿದಿದ್ದು ಅಲ್ಲಿ ಕೂಡ ಜೋ ಬೈಡನ್​​​ ಅವರೇ ಗೆದ್ದಿದ್ದಾರೆ.

ಬೈಡನ್​ಗೆ 12,284 ಮತಗಳ ಅಂತರದ ಗೆಲುವು.. ಸುಮಾರು 5 ಮಿಲಿಯನ್​ ಮತ ಚಲಾವಣೆ ಆಗಿದ್ದ ಜಾರ್ಜಿಯಾದಲ್ಲಿ  ಎರಡನೇ ಬಾರಿಗೆ ಮ್ಯಾನ್ಯುಯಲ್​ ಆಗಿ ಮತಎಣಿಕೆ ಮಾಡಲಾಗಿದ್ದು, ಬೈಡನ್​ 12,284 ಮತಗಳ ಅಂತರದಿಂದ ಟ್ರಂಪ್ ವಿರುದ್ಧ ಗೆಲುವು ಸಾಧಿಸಿದ್ದಾರೆ.  ಮೊದಲ ಬಾರಿ ಎಣಿಕೆ ಪೂರ್ಣಗೊಂಡಾಗ ಬೈಡನ್ 14,000 ಮತಗಳಿಂದ ಮುನ್ನಡೆ ಸಾಧಿಸಿದ್ದರು ಎಂದು ಜಾರ್ಜಿಯಾದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಜಿಯಾದಲ್ಲಿ ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಗೆದ್ದಿದ್ದೇ ಇಲ್ಲ.. 1992ರಿಂದಲೂ ಜಾರ್ಜಿಯಾದಲ್ಲಿ ರಿಪಬ್ಲಿಕನ್​ ಪಕ್ಷದ ಪಾರುಪತ್ಯವೇ ಇತ್ತು. ಅವತ್ತಿಂದಲೂ ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಗೆದ್ದಿದ್ದೇ ಇಲ್ಲ. ಆದರೆ ಈ ಬಾರಿ ಉಲ್ಟಾ ಆಗಿದೆ. ನವೆಂಬರ್​ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ವಂಚನೆ, ಜನರ ಹಾದಿ ತಪ್ಪಿಸುವ ಕೆಲಸಗಳು ಆಗಿಲ್ಲ ಎಂದು ಸ್ಥಳೀಯ ಲೆಕ್ಕಪರಿಶೋಧನಾ ಸಂಸ್ಥೆ ದೃಢಪಡಿಸಿದೆ. ಈ ಐತಿಹಾಸಿಕ ಗೆಲವು ದಕ್ಕಿದ್ದು ಜಾರ್ಜಿಯಾದಲ್ಲಿರುವ ನಮ್ಮ ಪಕ್ಷದ ಕಾರ್ಯಕರ್ತರು, ಚುನಾವಣಾ ಅಧಿಕಾರಿಗಳ ಕಠಿಣ ಪರಿಶ್ರಮದಿಂದ. ಅವರಿಗೆ ಮನ್ನಣೆ ನೀಡಲೇಬೇಕು ಎಂದು ರಿಪಬ್ಲಿಕನ್​ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ