AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ಕೋಪದಿಂದ ಕೊರೊನಾ ವೈರಸ್ ಸೃಷ್ಟಿಯಾಗಿದೆಯಂತೆ.. ಇದು ಉಗ್ರರ ‘ಭಯೋತ್ಪಾದಕತೆ’

ಕೊರೊನಾ ವೈರಸ್ ಎಂಬುದು ದೇವರ ಕೋಪದಿಂದ ಸೃಷ್ಟಿಯಾದಂತದ್ದು. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂರನ್ನು ನಾಶಪಡಿಸಿದವರಿಗೆ ದೇವರು ಶಿಕ್ಷೆ ವಿಧಿಸುತ್ತಿದ್ದಾರೆ ಎಂದು ಐಎಸ್ಐಎಲ್ ಮತ್ತು ಅಲ್-ಖೈದಾ ಭಯೋತ್ಪಾದಕ ಸಂಘಟನೆಗಳು ತನ್ನ ಅವೈಜ್ಞಾನಿಕ ಪಿತೂರಿ ಸಿದ್ದಾಂತಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಡಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಯೋತ್ಪಾದಕ ಸಂಘಟನೆಗಳು ಹೀಗೆ ಸಾಮಾಜಿಕ ಮಾಧ್ಯಮವನ್ನು ದುರುದ್ದೇಶಪೂರಕವಾಗಿ ಬಳಸಿಕೊಳ್ಳುತ್ತಿವೆ ಎಂದು ವಿಶ್ವಸಂಸ್ಥೆಯ ಅಂತರ್ಜಾಲ ಅಪರಾಧ ಮತ್ತು ನ್ಯಾಯ ಸಂಶೋಧನಾ ಸಂಸ್ಥೆ ಯುನಿಕ್ರಿ (UNICRI) ವರದಿ ಮಾಡಿದೆ. ಉಗ್ರಗಾಮಿಗಳು ತಮ್ಮ ಜಾಲವನ್ನು ಹೆಚ್ಚಿಸಲು, ಜನರಿಗಿರುವ ಸರ್ಕಾರದ ಮೇಲಿನ […]

ದೇವರ ಕೋಪದಿಂದ ಕೊರೊನಾ ವೈರಸ್ ಸೃಷ್ಟಿಯಾಗಿದೆಯಂತೆ.. ಇದು ಉಗ್ರರ ‘ಭಯೋತ್ಪಾದಕತೆ’
ಸಾಧು ಶ್ರೀನಾಥ್​
|

Updated on: Nov 19, 2020 | 5:56 PM

Share

ಕೊರೊನಾ ವೈರಸ್ ಎಂಬುದು ದೇವರ ಕೋಪದಿಂದ ಸೃಷ್ಟಿಯಾದಂತದ್ದು. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂರನ್ನು ನಾಶಪಡಿಸಿದವರಿಗೆ ದೇವರು ಶಿಕ್ಷೆ ವಿಧಿಸುತ್ತಿದ್ದಾರೆ ಎಂದು ಐಎಸ್ಐಎಲ್ ಮತ್ತು ಅಲ್-ಖೈದಾ ಭಯೋತ್ಪಾದಕ ಸಂಘಟನೆಗಳು ತನ್ನ ಅವೈಜ್ಞಾನಿಕ ಪಿತೂರಿ ಸಿದ್ದಾಂತಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಡಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಯೋತ್ಪಾದಕ ಸಂಘಟನೆಗಳು ಹೀಗೆ ಸಾಮಾಜಿಕ ಮಾಧ್ಯಮವನ್ನು ದುರುದ್ದೇಶಪೂರಕವಾಗಿ ಬಳಸಿಕೊಳ್ಳುತ್ತಿವೆ ಎಂದು ವಿಶ್ವಸಂಸ್ಥೆಯ ಅಂತರ್ಜಾಲ ಅಪರಾಧ ಮತ್ತು ನ್ಯಾಯ ಸಂಶೋಧನಾ ಸಂಸ್ಥೆ ಯುನಿಕ್ರಿ (UNICRI) ವರದಿ ಮಾಡಿದೆ.

ಉಗ್ರಗಾಮಿಗಳು ತಮ್ಮ ಜಾಲವನ್ನು ಹೆಚ್ಚಿಸಲು, ಜನರಿಗಿರುವ ಸರ್ಕಾರದ ಮೇಲಿನ ನಂಬಿಕೆಯನ್ನು ಹಾಳು ಮಾಡಲು, ದೇವರ ಕೋಪದಿಂದ ಈ ಸಾಂಕ್ರಾಮಿಕ ರೋಗ ಹರಡುತ್ತಿದೆ ಎಂಬ ದುರುದ್ದೇಶದ ಸಂದೇಶವನ್ನು ಬಿತ್ತುವ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ.

ಐಸಿಸ್ ಅಥವಾ ದಾಶ್ ಭಯೋತ್ಪಾದಕ ಗುಂಪು, ಅಲ್-ಖೈದಾದೊಂದಿಗೆ ಸಂಬಂಧಿಸಿದ ಗುಂಪು ಮತ್ತು ಸಂಘಟಿತ ಅಪರಾಧ ಗುಂಪು ಎಂಬುದಾಗಿ ಮೂರು ಭಯೋತ್ಪಾದಕರ ಗುಂಪುಗಳಿವೆ. ಐಸಿಸ್ ಮತ್ತು ಅಲ್-ಖೈದಾಗೆ ಸಂಬಂಧಿಸಿದ ಗುಂಪುಗಳಿಂದ ಕೋವಿಡ್ ಸಂಬಂಧಿತ ಸಂದೇಶವನ್ನು ಪರಿಶೀಲಿಸಿದಾಗ, ಉದ್ದೇಶಪೂರ್ವಕವಾಗಿ ರೋಗವನ್ನು ಹರಡುವ ಮೂಲಕ ಜೈವಿಕ ಬಾಂಬ್​ಗಳಾಗಿ ಕಾರ್ಯ ನಿರ್ವಹಿಸಲು ಸಂಚು ಹೂಡಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಯುನಿಕ್ರಿ ಸಂಶೋಧನಾ ಸಂಸ್ಥೆ ನಿರ್ದೇಶಕಿ ಆಂಟೋನಿಯಾ ಮೇರಿ ಡಿ ವಿಯೋ ವರದಿಯಲ್ಲಿ ತಿಳಿಸಿರುವ ಪ್ರಕಾರ, ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರಗಾಮಿ ಗುಂಪುಗಳು ಸಾಮಾಜಿಕ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಳ್ಳಲು ಸಂಭಾವ್ಯ ಭಯೋತ್ಪಾದಕರನ್ನು ಹೆಚ್ಚಿಸಲು ಕೋವಿಡ್19 ಅನ್ನು ಹರಡಲು ಬಳಸಿದ ಜೈವಿಕ ಆಯುಧ ಎಂದು ತಿಳಿಸಿದ್ದಾರೆ.

ದತ್ತಾಂಶ ವಿಜ್ಞಾನ ಉಪಕರಣಗಳು, ಸತ್ಯ-ಪರಿಶೀಲನೆ ಅಪ್ಲಿಕೇಶನ್​ಗಳು ಕೃತಕ ಬುದ್ಧಿವಂತಿಕೆ ಸೇರಿದಂತೆ ತಪ್ಪು ಮಾಹಿತಿಗಳನ್ನು ತೆಗೆದು ಹಾಕಲು ಯುನಿಕ್ರಿ (UNICRI) ಸಂಶೋಧಕರು ಹಲವು ಬಗೆಯ ತಂತ್ರಗಳನ್ನು ಹೂಡಿದ್ದಾರೆ. ಆದರೆ ತಂತ್ರಜ್ಞಾನ ಪ್ರತಿರೋಧಗಳು ಮಾತ್ರ ಸಾಮಾಜಿಕ ಮಾಧ್ಯಮ ದುರುಪಯೋಗ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ