AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ಕೋಪದಿಂದ ಕೊರೊನಾ ವೈರಸ್ ಸೃಷ್ಟಿಯಾಗಿದೆಯಂತೆ.. ಇದು ಉಗ್ರರ ‘ಭಯೋತ್ಪಾದಕತೆ’

ಕೊರೊನಾ ವೈರಸ್ ಎಂಬುದು ದೇವರ ಕೋಪದಿಂದ ಸೃಷ್ಟಿಯಾದಂತದ್ದು. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂರನ್ನು ನಾಶಪಡಿಸಿದವರಿಗೆ ದೇವರು ಶಿಕ್ಷೆ ವಿಧಿಸುತ್ತಿದ್ದಾರೆ ಎಂದು ಐಎಸ್ಐಎಲ್ ಮತ್ತು ಅಲ್-ಖೈದಾ ಭಯೋತ್ಪಾದಕ ಸಂಘಟನೆಗಳು ತನ್ನ ಅವೈಜ್ಞಾನಿಕ ಪಿತೂರಿ ಸಿದ್ದಾಂತಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಡಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಯೋತ್ಪಾದಕ ಸಂಘಟನೆಗಳು ಹೀಗೆ ಸಾಮಾಜಿಕ ಮಾಧ್ಯಮವನ್ನು ದುರುದ್ದೇಶಪೂರಕವಾಗಿ ಬಳಸಿಕೊಳ್ಳುತ್ತಿವೆ ಎಂದು ವಿಶ್ವಸಂಸ್ಥೆಯ ಅಂತರ್ಜಾಲ ಅಪರಾಧ ಮತ್ತು ನ್ಯಾಯ ಸಂಶೋಧನಾ ಸಂಸ್ಥೆ ಯುನಿಕ್ರಿ (UNICRI) ವರದಿ ಮಾಡಿದೆ. ಉಗ್ರಗಾಮಿಗಳು ತಮ್ಮ ಜಾಲವನ್ನು ಹೆಚ್ಚಿಸಲು, ಜನರಿಗಿರುವ ಸರ್ಕಾರದ ಮೇಲಿನ […]

ದೇವರ ಕೋಪದಿಂದ ಕೊರೊನಾ ವೈರಸ್ ಸೃಷ್ಟಿಯಾಗಿದೆಯಂತೆ.. ಇದು ಉಗ್ರರ ‘ಭಯೋತ್ಪಾದಕತೆ’
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 19, 2020 | 5:56 PM

Share

ಕೊರೊನಾ ವೈರಸ್ ಎಂಬುದು ದೇವರ ಕೋಪದಿಂದ ಸೃಷ್ಟಿಯಾದಂತದ್ದು. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂರನ್ನು ನಾಶಪಡಿಸಿದವರಿಗೆ ದೇವರು ಶಿಕ್ಷೆ ವಿಧಿಸುತ್ತಿದ್ದಾರೆ ಎಂದು ಐಎಸ್ಐಎಲ್ ಮತ್ತು ಅಲ್-ಖೈದಾ ಭಯೋತ್ಪಾದಕ ಸಂಘಟನೆಗಳು ತನ್ನ ಅವೈಜ್ಞಾನಿಕ ಪಿತೂರಿ ಸಿದ್ದಾಂತಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಡಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಯೋತ್ಪಾದಕ ಸಂಘಟನೆಗಳು ಹೀಗೆ ಸಾಮಾಜಿಕ ಮಾಧ್ಯಮವನ್ನು ದುರುದ್ದೇಶಪೂರಕವಾಗಿ ಬಳಸಿಕೊಳ್ಳುತ್ತಿವೆ ಎಂದು ವಿಶ್ವಸಂಸ್ಥೆಯ ಅಂತರ್ಜಾಲ ಅಪರಾಧ ಮತ್ತು ನ್ಯಾಯ ಸಂಶೋಧನಾ ಸಂಸ್ಥೆ ಯುನಿಕ್ರಿ (UNICRI) ವರದಿ ಮಾಡಿದೆ.

ಉಗ್ರಗಾಮಿಗಳು ತಮ್ಮ ಜಾಲವನ್ನು ಹೆಚ್ಚಿಸಲು, ಜನರಿಗಿರುವ ಸರ್ಕಾರದ ಮೇಲಿನ ನಂಬಿಕೆಯನ್ನು ಹಾಳು ಮಾಡಲು, ದೇವರ ಕೋಪದಿಂದ ಈ ಸಾಂಕ್ರಾಮಿಕ ರೋಗ ಹರಡುತ್ತಿದೆ ಎಂಬ ದುರುದ್ದೇಶದ ಸಂದೇಶವನ್ನು ಬಿತ್ತುವ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ.

ಐಸಿಸ್ ಅಥವಾ ದಾಶ್ ಭಯೋತ್ಪಾದಕ ಗುಂಪು, ಅಲ್-ಖೈದಾದೊಂದಿಗೆ ಸಂಬಂಧಿಸಿದ ಗುಂಪು ಮತ್ತು ಸಂಘಟಿತ ಅಪರಾಧ ಗುಂಪು ಎಂಬುದಾಗಿ ಮೂರು ಭಯೋತ್ಪಾದಕರ ಗುಂಪುಗಳಿವೆ. ಐಸಿಸ್ ಮತ್ತು ಅಲ್-ಖೈದಾಗೆ ಸಂಬಂಧಿಸಿದ ಗುಂಪುಗಳಿಂದ ಕೋವಿಡ್ ಸಂಬಂಧಿತ ಸಂದೇಶವನ್ನು ಪರಿಶೀಲಿಸಿದಾಗ, ಉದ್ದೇಶಪೂರ್ವಕವಾಗಿ ರೋಗವನ್ನು ಹರಡುವ ಮೂಲಕ ಜೈವಿಕ ಬಾಂಬ್​ಗಳಾಗಿ ಕಾರ್ಯ ನಿರ್ವಹಿಸಲು ಸಂಚು ಹೂಡಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಯುನಿಕ್ರಿ ಸಂಶೋಧನಾ ಸಂಸ್ಥೆ ನಿರ್ದೇಶಕಿ ಆಂಟೋನಿಯಾ ಮೇರಿ ಡಿ ವಿಯೋ ವರದಿಯಲ್ಲಿ ತಿಳಿಸಿರುವ ಪ್ರಕಾರ, ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರಗಾಮಿ ಗುಂಪುಗಳು ಸಾಮಾಜಿಕ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಳ್ಳಲು ಸಂಭಾವ್ಯ ಭಯೋತ್ಪಾದಕರನ್ನು ಹೆಚ್ಚಿಸಲು ಕೋವಿಡ್19 ಅನ್ನು ಹರಡಲು ಬಳಸಿದ ಜೈವಿಕ ಆಯುಧ ಎಂದು ತಿಳಿಸಿದ್ದಾರೆ.

ದತ್ತಾಂಶ ವಿಜ್ಞಾನ ಉಪಕರಣಗಳು, ಸತ್ಯ-ಪರಿಶೀಲನೆ ಅಪ್ಲಿಕೇಶನ್​ಗಳು ಕೃತಕ ಬುದ್ಧಿವಂತಿಕೆ ಸೇರಿದಂತೆ ತಪ್ಪು ಮಾಹಿತಿಗಳನ್ನು ತೆಗೆದು ಹಾಕಲು ಯುನಿಕ್ರಿ (UNICRI) ಸಂಶೋಧಕರು ಹಲವು ಬಗೆಯ ತಂತ್ರಗಳನ್ನು ಹೂಡಿದ್ದಾರೆ. ಆದರೆ ತಂತ್ರಜ್ಞಾನ ಪ್ರತಿರೋಧಗಳು ಮಾತ್ರ ಸಾಮಾಜಿಕ ಮಾಧ್ಯಮ ದುರುಪಯೋಗ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ