ಮಾತು ತಪ್ಪಿದ ಬಿಎಸ್ವೈ ಸರ್ಕಾರ, ಘೋಷಿಸಿದ್ದು ರೂ.15 ಲಕ್ಷ, ಕೊಟ್ಟಿದ್ದು 5 ಮಾತ್ರ
ಕಳೆದ ಜೂನ್ 14ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೀರನಹಳ್ಳಿ ಕೆರೆಯಲ್ಲಿ ಬಟ್ಟೆ ತೊಳೆಯುವಾಗ ನೀರಿಗೆ ಜಾರಿ ಬಿದ್ದು ಜಲಸಮಾಧಿಯಾದ ಒಬ್ಬ ಮಹಿಳೆ ಹಾಗೂ ಆಕೆಯ ಎರಡು ಮಕ್ಕಳ ಕುಟುಂಬಕ್ಕೆ ತಲಾ ರೂ. 5 ಲಕ್ಷದಂತೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದ ಬಿ ಎಸ್ ಯಡಿಯೂರಪ್ಪನವರ ಸರ್ಕಾರ ಕೇವಲ ರೂ. 5 ಲಕ್ಷ ನೀಡಿ ಕೈತೊಳೆದುಕೊಂಡಿರುವಂತಿದೆ. ಗೀತಾ ಎನ್ನುವ ಮಹಿಳೆ, ಆಕೆಯ ಇಬ್ಬರು ಪುತ್ರಿಯರು ಕೆರೆಯಲ್ಲಿ ಮುಳುಗಿ ಮರಣಿಸಿದ್ದರು. ಆಕೆಯ ಕುಟುಂಬಕ್ಕೆ ರೂ. 15 ಲಕ್ಷ […]

ಕಳೆದ ಜೂನ್ 14ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೀರನಹಳ್ಳಿ ಕೆರೆಯಲ್ಲಿ ಬಟ್ಟೆ ತೊಳೆಯುವಾಗ ನೀರಿಗೆ ಜಾರಿ ಬಿದ್ದು ಜಲಸಮಾಧಿಯಾದ ಒಬ್ಬ ಮಹಿಳೆ ಹಾಗೂ ಆಕೆಯ ಎರಡು ಮಕ್ಕಳ ಕುಟುಂಬಕ್ಕೆ ತಲಾ ರೂ. 5 ಲಕ್ಷದಂತೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದ ಬಿ ಎಸ್ ಯಡಿಯೂರಪ್ಪನವರ ಸರ್ಕಾರ ಕೇವಲ ರೂ. 5 ಲಕ್ಷ ನೀಡಿ ಕೈತೊಳೆದುಕೊಂಡಿರುವಂತಿದೆ.
ಗೀತಾ ಎನ್ನುವ ಮಹಿಳೆ, ಆಕೆಯ ಇಬ್ಬರು ಪುತ್ರಿಯರು ಕೆರೆಯಲ್ಲಿ ಮುಳುಗಿ ಮರಣಿಸಿದ್ದರು. ಆಕೆಯ ಕುಟುಂಬಕ್ಕೆ ರೂ. 15 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದ ಸರ್ಕಾರ ಗುರುವಾರದಂದು ರೂ.5 ಲಕ್ಷಗಳ ಚೆಕ್ ನೀಡಿತು. ನಾಗಮಂಗಲ ತಹಶೀಲ್ದಾರ್ ಅವರು ಪರಿಹಾರದ ಚೆಕ್ ಹಸ್ತಾಂತರಿಸಿದರು.

ಸರ್ಕಾರದ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂತ್ರಸ್ತ ಕುಟುಂಬವು ಟಿವಿ9ನೊಂದಿಗೆ ತನ್ನ ದುಃಖ ತೋಡಿಕೊಳ್ಳುತ್ತಾ, ಉಳಿದ ರೂ. 10 ಲಕ್ಷ ಮೊತ್ತವನ್ನು ನಂತರ ಬಿಡುಗಡೆ ಮಾಡುವ ಭರವಸೆಯನ್ನು ಸರ್ಕಾರ ತಹಶೀಲ್ದಾರರ ಮೂಲಕ ನೀಡಿದೆ ಎಂದರು.




