AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ

ಭೋಪಾಲ್​: ಮಗನನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಂದೆಯೊಬ್ಬ ಸೈಕಲ್​ ಮೇಲೆ ಆತನನ್ನ ಹೊತ್ತು ಸರಿಸುಮಾರು 105 ಕಿಲೋಮೀಟರ್​ ಕ್ರಮಿಸಿರುವ ರೋಚಕ ಪ್ರಸಂಗ ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶೋಭಾರಾಂ ಎಂಬ ಬಡ ಕೂಲಿ ಕಾರ್ಮಿಕನ ಈ ಕಾರ್ಯಕ್ಕೆ ದೇಶದ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಧಾರ್​ ಜಿಲ್ಲೆಯ ಮನಾವರ್​ ತಾಲೂಕಿನ ಬಾಯಾಡಿಪುರ ನಿವಾಸಿಯಾದ ಶೋಭಾರಾಂನ ಮಗ ಆಶೀಶ್​ಗೆ ಕಳೆದ ಮಂಗಳವಾರದಿಂದ10ನೇ ಕ್ಲಾಸ್​ನ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷಾ ಕೇಂದ್ರವನ್ನ ಕಾರ್ಮಿಕನ ಗ್ರಾಮದಿಂದ ಸುಮಾರು 100 ಕಿಲೋಮೀಟರ್​ […]

ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ
KUSHAL V
|

Updated on: Aug 20, 2020 | 7:30 PM

Share

ಭೋಪಾಲ್​: ಮಗನನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಂದೆಯೊಬ್ಬ ಸೈಕಲ್​ ಮೇಲೆ ಆತನನ್ನ ಹೊತ್ತು ಸರಿಸುಮಾರು 105 ಕಿಲೋಮೀಟರ್​ ಕ್ರಮಿಸಿರುವ ರೋಚಕ ಪ್ರಸಂಗ ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶೋಭಾರಾಂ ಎಂಬ ಬಡ ಕೂಲಿ ಕಾರ್ಮಿಕನ ಈ ಕಾರ್ಯಕ್ಕೆ ದೇಶದ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಧಾರ್​ ಜಿಲ್ಲೆಯ ಮನಾವರ್​ ತಾಲೂಕಿನ ಬಾಯಾಡಿಪುರ ನಿವಾಸಿಯಾದ ಶೋಭಾರಾಂನ ಮಗ ಆಶೀಶ್​ಗೆ ಕಳೆದ ಮಂಗಳವಾರದಿಂದ10ನೇ ಕ್ಲಾಸ್​ನ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷಾ ಕೇಂದ್ರವನ್ನ ಕಾರ್ಮಿಕನ ಗ್ರಾಮದಿಂದ ಸುಮಾರು 100 ಕಿಲೋಮೀಟರ್​ ದೂರವಿರುವ ಜಿಲ್ಲಾಕೇಂದ್ರಲ್ಲಿ ಗೊತ್ತುಮಾಡಲಾಗಿತ್ತು. ಲಾಕ್​ಡೌನ್​ ಬಳಿಕ ಆತನ ಹಳ್ಳಿಯಿಂದ ಜಿಲ್ಲಾಕೇಂದ್ರಕ್ಕೆ ಬಸ್​ ವ್ಯವಸ್ಥೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ, ಹಳ್ಳಿಯ ಇತರ ಗ್ರಾಮಸ್ಥರ ಬಳಿ ಯಾವುದೇ ವಾಹನವಿಲ್ಲದ ಕಾರಣ ಶೋಭಾರಾಂ ಮಗನನ್ನು ಪರೀಕ್ಷೆಗೆ ಸೈಕಲ್​ ಮೇಲೆ ಕರೆದುಕೊಂಡು ಹೋಗಲು ನಿರ್ಧರಿಸಿದ.

ಸೈಕಲ್​ ಮೇಲೇ 105 ಕಿ.ಮಿ. ಪಯಣ ಭಾನುವಾರ ರಾತ್ರಿ ಸೈಕಲ್​ ಮೇಲೆ ಹೊರಟ ತಂದೆ ಮತ್ತು ಮಗ ಪರೀಕ್ಷೆ ಪ್ರಾರಂಭವಾಗಲು ಕೇವಲ 15 ನಿಮಿಷಗಳು ಬಾಕಿ ಇರುವಾಗ ಪರೀಕ್ಷಾ ಕೇಂದ್ರಕ್ಕೆ ತಲುಪಿದರು. ಇದೀಗ ಆಶೀಶ್​ ಪರೀಕ್ಷೆ ಪ್ರಾರಂಭವಾಗಿದ್ದು ಅತನ ಪರೀಕ್ಷೆ ಮುಗಿಯುವವರೆಗೂ ಶೋಭಾರಾಂ ಅಲ್ಲೇ ಉಳಿದುಕೊಳ್ಳಲು ಬೇಕಾದ ಅಗತ್ಯ ಅಕ್ಕಿ ಮತ್ತು ದಿನಸಿ ಪದಾರ್ಥಗಳನ್ನು ಮನೆಯಿಂದಲೇ ಹೊತ್ತು ತಂದಿದ್ದಾನೆ.

ಕಾರ್ಮಿಕನ ಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳು ಇನ್ನು ಈ ಸಂಗತಿ ಎಲ್ಲೆಡೆ ಹಬ್ಬುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಅಪ್ಪ ಹಾಗೂ ಮಗನಿಗೆ ಉಳಿದುಕೊಳ್ಳಲು ವಸತಿ ಮತ್ತು ಊಟದ ವ್ಯವಸ್ಥೆಯನ್ನ ಏರ್ಪಡಿಸಿದ್ದಾರೆ. ಜೊತೆಗೆ, ಪರೀಕ್ಷೆಯ ನಂತರ ವಾಪಸ್​ ಊರು ತಲುಪಲು ವ್ಯವಸ್ಥೆ ಸಹ ಮಾಡಿಕೊಟ್ಟಿದ್ದಾರೆ.

ನೀವು ಸೈಕಲ್​ ತುಳಿದುಕೊಂಡು ಮಗನನ್ನ ಕರೆದುಕೊಂಡು ಬರೋಕೆ ಹೇಗೆ ಸಾಧ್ಯವಾಯಿತು ಎಂದು ಕೇಳಿದ್ದಕ್ಕೆ ಶೋಭಾರಾಂ ನಾನಂತೂ ಓದೋಕಾಗಲಿಲ್ಲ. ಆದರೆ, ನನ್ನ ಮಗ ಚೆನ್ನಾಗಿ ಓದಿ ದೊಡ್ಡ ಆಫೀಸರ್​ ಆಗಬೇಕು ಎಂಬ ಆಸೆ ಇದೆ. ನನ್ನ ಮಗ ಒಳ್ಳೇ ವಿದ್ಯಾರ್ಥಿ. ಆದರೆ, ನಮ್ಮೂರಲ್ಲಿ ಶಾಲೆಯಿದ್ದರೂ ಶಿಕ್ಷಕರಿಲ್ಲ. ಟ್ಯೂಷನ್​ ಸೆಂಟರ್​ ಸಹ ಇಲ್ಲ. ಹಾಗಾಗಿ, ನನ್ನ ಮಗ ಮೂರು ವಿಷಯಗಳಲ್ಲಿ ಫೇಲ್​ ಆಗಿಬಿಟ್ಟ. ಪರೀಕ್ಷೆ ಮಿಸ್​ ಆಗಿದ್ರೇ ಒಂದು ವರ್ಷ ಕಳೆದುಕೊಳ್ಳುವನು. ಆದ್ದರಿಂದ ಅವನು ಶತಾಯಗತಾಯ ಪರೀಕ್ಷೆ ಬರೆಯಲೇ ಬೇಕೆಂದು ಕರೆದುಕೊಂಡು ಬಂದೆ ಎಂದಿದ್ದಾರೆ.

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ