AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ

ಭೋಪಾಲ್​: ಮಗನನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಂದೆಯೊಬ್ಬ ಸೈಕಲ್​ ಮೇಲೆ ಆತನನ್ನ ಹೊತ್ತು ಸರಿಸುಮಾರು 105 ಕಿಲೋಮೀಟರ್​ ಕ್ರಮಿಸಿರುವ ರೋಚಕ ಪ್ರಸಂಗ ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶೋಭಾರಾಂ ಎಂಬ ಬಡ ಕೂಲಿ ಕಾರ್ಮಿಕನ ಈ ಕಾರ್ಯಕ್ಕೆ ದೇಶದ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಧಾರ್​ ಜಿಲ್ಲೆಯ ಮನಾವರ್​ ತಾಲೂಕಿನ ಬಾಯಾಡಿಪುರ ನಿವಾಸಿಯಾದ ಶೋಭಾರಾಂನ ಮಗ ಆಶೀಶ್​ಗೆ ಕಳೆದ ಮಂಗಳವಾರದಿಂದ10ನೇ ಕ್ಲಾಸ್​ನ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷಾ ಕೇಂದ್ರವನ್ನ ಕಾರ್ಮಿಕನ ಗ್ರಾಮದಿಂದ ಸುಮಾರು 100 ಕಿಲೋಮೀಟರ್​ […]

ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ
KUSHAL V
|

Updated on: Aug 20, 2020 | 7:30 PM

Share

ಭೋಪಾಲ್​: ಮಗನನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಂದೆಯೊಬ್ಬ ಸೈಕಲ್​ ಮೇಲೆ ಆತನನ್ನ ಹೊತ್ತು ಸರಿಸುಮಾರು 105 ಕಿಲೋಮೀಟರ್​ ಕ್ರಮಿಸಿರುವ ರೋಚಕ ಪ್ರಸಂಗ ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶೋಭಾರಾಂ ಎಂಬ ಬಡ ಕೂಲಿ ಕಾರ್ಮಿಕನ ಈ ಕಾರ್ಯಕ್ಕೆ ದೇಶದ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಧಾರ್​ ಜಿಲ್ಲೆಯ ಮನಾವರ್​ ತಾಲೂಕಿನ ಬಾಯಾಡಿಪುರ ನಿವಾಸಿಯಾದ ಶೋಭಾರಾಂನ ಮಗ ಆಶೀಶ್​ಗೆ ಕಳೆದ ಮಂಗಳವಾರದಿಂದ10ನೇ ಕ್ಲಾಸ್​ನ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷಾ ಕೇಂದ್ರವನ್ನ ಕಾರ್ಮಿಕನ ಗ್ರಾಮದಿಂದ ಸುಮಾರು 100 ಕಿಲೋಮೀಟರ್​ ದೂರವಿರುವ ಜಿಲ್ಲಾಕೇಂದ್ರಲ್ಲಿ ಗೊತ್ತುಮಾಡಲಾಗಿತ್ತು. ಲಾಕ್​ಡೌನ್​ ಬಳಿಕ ಆತನ ಹಳ್ಳಿಯಿಂದ ಜಿಲ್ಲಾಕೇಂದ್ರಕ್ಕೆ ಬಸ್​ ವ್ಯವಸ್ಥೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ, ಹಳ್ಳಿಯ ಇತರ ಗ್ರಾಮಸ್ಥರ ಬಳಿ ಯಾವುದೇ ವಾಹನವಿಲ್ಲದ ಕಾರಣ ಶೋಭಾರಾಂ ಮಗನನ್ನು ಪರೀಕ್ಷೆಗೆ ಸೈಕಲ್​ ಮೇಲೆ ಕರೆದುಕೊಂಡು ಹೋಗಲು ನಿರ್ಧರಿಸಿದ.

ಸೈಕಲ್​ ಮೇಲೇ 105 ಕಿ.ಮಿ. ಪಯಣ ಭಾನುವಾರ ರಾತ್ರಿ ಸೈಕಲ್​ ಮೇಲೆ ಹೊರಟ ತಂದೆ ಮತ್ತು ಮಗ ಪರೀಕ್ಷೆ ಪ್ರಾರಂಭವಾಗಲು ಕೇವಲ 15 ನಿಮಿಷಗಳು ಬಾಕಿ ಇರುವಾಗ ಪರೀಕ್ಷಾ ಕೇಂದ್ರಕ್ಕೆ ತಲುಪಿದರು. ಇದೀಗ ಆಶೀಶ್​ ಪರೀಕ್ಷೆ ಪ್ರಾರಂಭವಾಗಿದ್ದು ಅತನ ಪರೀಕ್ಷೆ ಮುಗಿಯುವವರೆಗೂ ಶೋಭಾರಾಂ ಅಲ್ಲೇ ಉಳಿದುಕೊಳ್ಳಲು ಬೇಕಾದ ಅಗತ್ಯ ಅಕ್ಕಿ ಮತ್ತು ದಿನಸಿ ಪದಾರ್ಥಗಳನ್ನು ಮನೆಯಿಂದಲೇ ಹೊತ್ತು ತಂದಿದ್ದಾನೆ.

ಕಾರ್ಮಿಕನ ಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳು ಇನ್ನು ಈ ಸಂಗತಿ ಎಲ್ಲೆಡೆ ಹಬ್ಬುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಅಪ್ಪ ಹಾಗೂ ಮಗನಿಗೆ ಉಳಿದುಕೊಳ್ಳಲು ವಸತಿ ಮತ್ತು ಊಟದ ವ್ಯವಸ್ಥೆಯನ್ನ ಏರ್ಪಡಿಸಿದ್ದಾರೆ. ಜೊತೆಗೆ, ಪರೀಕ್ಷೆಯ ನಂತರ ವಾಪಸ್​ ಊರು ತಲುಪಲು ವ್ಯವಸ್ಥೆ ಸಹ ಮಾಡಿಕೊಟ್ಟಿದ್ದಾರೆ.

ನೀವು ಸೈಕಲ್​ ತುಳಿದುಕೊಂಡು ಮಗನನ್ನ ಕರೆದುಕೊಂಡು ಬರೋಕೆ ಹೇಗೆ ಸಾಧ್ಯವಾಯಿತು ಎಂದು ಕೇಳಿದ್ದಕ್ಕೆ ಶೋಭಾರಾಂ ನಾನಂತೂ ಓದೋಕಾಗಲಿಲ್ಲ. ಆದರೆ, ನನ್ನ ಮಗ ಚೆನ್ನಾಗಿ ಓದಿ ದೊಡ್ಡ ಆಫೀಸರ್​ ಆಗಬೇಕು ಎಂಬ ಆಸೆ ಇದೆ. ನನ್ನ ಮಗ ಒಳ್ಳೇ ವಿದ್ಯಾರ್ಥಿ. ಆದರೆ, ನಮ್ಮೂರಲ್ಲಿ ಶಾಲೆಯಿದ್ದರೂ ಶಿಕ್ಷಕರಿಲ್ಲ. ಟ್ಯೂಷನ್​ ಸೆಂಟರ್​ ಸಹ ಇಲ್ಲ. ಹಾಗಾಗಿ, ನನ್ನ ಮಗ ಮೂರು ವಿಷಯಗಳಲ್ಲಿ ಫೇಲ್​ ಆಗಿಬಿಟ್ಟ. ಪರೀಕ್ಷೆ ಮಿಸ್​ ಆಗಿದ್ರೇ ಒಂದು ವರ್ಷ ಕಳೆದುಕೊಳ್ಳುವನು. ಆದ್ದರಿಂದ ಅವನು ಶತಾಯಗತಾಯ ಪರೀಕ್ಷೆ ಬರೆಯಲೇ ಬೇಕೆಂದು ಕರೆದುಕೊಂಡು ಬಂದೆ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್