CBIನಿಂದ ವಿನಯ್​ ಕುಲಕರ್ಣಿ ಅರೆಸ್ಟ್​, ನಾಳೆ ಸಂಜೆಯವರೆಗೆ ನ್ಯಾಯಾಂಗ ಬಂಧನ

ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ CBIನಿಂದ ಮಾಜಿ ಸಚಿವ ವಿನಯ್​ ಕುಲಕರ್ಣಿ ಬಂಧನವಾಗಿದೆ. ವಿನಯ್​ ಕುಲಕರ್ಣಿಯನ್ನು ಬಂಧಿಸಿದ ಸಿಬಿಐ ತಂಡ ವೈದ್ಯಕೀಯ ತಪಾಸಣೆಗೆ ಕರೆತಂದ ಬಳಿಕ ಧಾರವಾಡದ 3ನೇ ಹೆಚ್ಚುವರಿ ಸೆಷನ್ಸ್​​​ ಕೋರ್ಟ್​​ಗೆ ಹಾಜರುಪಡಿಸಿದರು. ವಿನಯ್​ ಕುಲಕರ್ಣಿಯನ್ನು 3ನೇ ಹೆಚ್ಚುವರಿ ಸೆಷನ್ಸ್​​​ ಕೋರ್ಟ್​​ನ ನ್ಯಾಯಾಧೀಶೆ H.ಪಂಚಾಕ್ಷರಿ ಎದುರು ಅಧಿಕಾರಿಗಳು ಹಾಜರುಪಡಿಸಿದರು. ನಾಳೆ ಸಂಜೆಯವರೆಗೆ ವಿನಯ್‌ಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಸೆಷನ್ಸ್​​​ ಕೋರ್ಟ್‌ನ ಜಡ್ಜ್ ನ್ಯಾ.ಹೆಚ್‌.ಪಂಚಾಕ್ಷರಿ ಆದೇಶ ಹೊರಡಿಸಿದ್ದಾರೆ. ಸದ್ಯ, ಮಾಜಿ ಸಚಿವರನ್ನು […]

CBIನಿಂದ ವಿನಯ್​ ಕುಲಕರ್ಣಿ ಅರೆಸ್ಟ್​, ನಾಳೆ ಸಂಜೆಯವರೆಗೆ ನ್ಯಾಯಾಂಗ ಬಂಧನ
ಮಾಜಿ ಸಚಿವ ವಿನಯ್​ ಕುಲಕರ್ಣಿ
Updated By: Skanda

Updated on: Nov 30, 2020 | 5:24 PM

ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ CBIನಿಂದ ಮಾಜಿ ಸಚಿವ ವಿನಯ್​ ಕುಲಕರ್ಣಿ ಬಂಧನವಾಗಿದೆ. ವಿನಯ್​ ಕುಲಕರ್ಣಿಯನ್ನು ಬಂಧಿಸಿದ ಸಿಬಿಐ ತಂಡ ವೈದ್ಯಕೀಯ ತಪಾಸಣೆಗೆ ಕರೆತಂದ ಬಳಿಕ ಧಾರವಾಡದ 3ನೇ ಹೆಚ್ಚುವರಿ ಸೆಷನ್ಸ್​​​ ಕೋರ್ಟ್​​ಗೆ ಹಾಜರುಪಡಿಸಿದರು.

ವಿನಯ್​ ಕುಲಕರ್ಣಿಯನ್ನು 3ನೇ ಹೆಚ್ಚುವರಿ ಸೆಷನ್ಸ್​​​ ಕೋರ್ಟ್​​ನ ನ್ಯಾಯಾಧೀಶೆ H.ಪಂಚಾಕ್ಷರಿ ಎದುರು ಅಧಿಕಾರಿಗಳು ಹಾಜರುಪಡಿಸಿದರು. ನಾಳೆ ಸಂಜೆಯವರೆಗೆ ವಿನಯ್‌ಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಸೆಷನ್ಸ್​​​ ಕೋರ್ಟ್‌ನ ಜಡ್ಜ್ ನ್ಯಾ.ಹೆಚ್‌.ಪಂಚಾಕ್ಷರಿ ಆದೇಶ ಹೊರಡಿಸಿದ್ದಾರೆ. ಸದ್ಯ, ಮಾಜಿ ಸಚಿವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗುವುದು. ನಾಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶೆ ಹೆಚ್‌.ಪಂಚಾಕ್ಷರಿ ವಿನಯ್‌ ವಿಚಾರಣೆ ನಡೆಸುವರು ಎಂದು ಹೇಳಲಾಗಿದೆ. ವಿನಯ್​ ಕುಲಕರ್ಣಿ ಬೆಂಬಲಿಗರಿಂದ ಪ್ರತಿಭಟನೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅವರನ್ನು ಬೆಳಗಾವಿಗೆ ಶಿಫ್ಟ್‌ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

Published On - 6:18 pm, Thu, 5 November 20