ಮಳೆ: ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಿದ CM BSY, ಹೊಸ ಪುಸ್ತಕ ಜೊತೆಗೆ ಆರ್ಥಿಕ ನೆರವು

ಬೆಂಗಳೂರು: ನಗರದ ಹೊಸಕೆರೆಹಳ್ಳಿಯಲ್ಲಿ ಇತ್ತೀಚೆಗೆ ಭಾರಿ ಮಳೆಯಾಗಿ ಅಲ್ಲಿನ ನಿವಾಸಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಹಲವಾರು ಮನೆಗಳಿಗೆ ನೀರು ನುಗ್ಗಿ ದಿನಬಳಕೆಯ ವಸ್ತುಗಳು ಹಾಗೂ ಉಪಕರಣಗಳು ಹಾಳಾಗಿದ್ದವು. ಬಡಾವಣೆಯ ವಿದ್ಯಾರ್ಥಿಗಳ ನೋಟ್​ಬುಕ್ ಸಹ ನೀರಿನಲ್ಲಿ ಕೊಚ್ಚಿಹೋಗಿದ್ದವು. ಇದನ್ನು ಗಮನಿಸಿದ್ದ ಸಿಎಂ ಬಿ.ಎಸ್‌. ಯಡಿಯೂರಪ್ಪ ಇಂದು ಬಡಾವಣೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದರು. ನೋಟ್​ಬುಕ್ ಜೊತೆಗೆ ಸಿಎಂ ಬಿಎಸ್‌ವೈರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸಹ ದೊರೆಯಿತು. ಸಿಎಂ ಅಧಿಕೃತ ನಿವಾಸವಾದ ಕಾವೇರಿಗೆ ವಿದ್ಯಾರ್ಥಿಗಳನ್ನ ಕರೆಸಿ ನೋಟ್ ಬುಕ್‌ಗಳ ವಿತರಣೆ ಜೊತೆಗೆ […]

ಮಳೆ: ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಿದ CM BSY, ಹೊಸ ಪುಸ್ತಕ ಜೊತೆಗೆ ಆರ್ಥಿಕ ನೆರವು
Updated By: ಸಾಧು ಶ್ರೀನಾಥ್​

Updated on: Oct 27, 2020 | 4:22 PM

ಬೆಂಗಳೂರು: ನಗರದ ಹೊಸಕೆರೆಹಳ್ಳಿಯಲ್ಲಿ ಇತ್ತೀಚೆಗೆ ಭಾರಿ ಮಳೆಯಾಗಿ ಅಲ್ಲಿನ ನಿವಾಸಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಹಲವಾರು ಮನೆಗಳಿಗೆ ನೀರು ನುಗ್ಗಿ ದಿನಬಳಕೆಯ ವಸ್ತುಗಳು ಹಾಗೂ ಉಪಕರಣಗಳು ಹಾಳಾಗಿದ್ದವು. ಬಡಾವಣೆಯ ವಿದ್ಯಾರ್ಥಿಗಳ ನೋಟ್​ಬುಕ್ ಸಹ ನೀರಿನಲ್ಲಿ ಕೊಚ್ಚಿಹೋಗಿದ್ದವು.

ಇದನ್ನು ಗಮನಿಸಿದ್ದ ಸಿಎಂ ಬಿ.ಎಸ್‌. ಯಡಿಯೂರಪ್ಪ ಇಂದು ಬಡಾವಣೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದರು. ನೋಟ್​ಬುಕ್ ಜೊತೆಗೆ ಸಿಎಂ ಬಿಎಸ್‌ವೈರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸಹ ದೊರೆಯಿತು. ಸಿಎಂ ಅಧಿಕೃತ ನಿವಾಸವಾದ ಕಾವೇರಿಗೆ ವಿದ್ಯಾರ್ಥಿಗಳನ್ನ ಕರೆಸಿ ನೋಟ್ ಬುಕ್‌ಗಳ ವಿತರಣೆ ಜೊತೆಗೆ ಆರ್ಥಿಕ ನೆರವು ಸಹ ನೀಡಿದರು.