ಆಹಾರ ಸಾಮಗ್ರಿ, ದನಕರುಗಳಿಗೆ ಮೇವು ನೀಡಿ: ಕಂಟೈನ್ಮೆಂಟ್ ಜೋನ್ ನಿವಾಸಿಗಳ ಅಳಲು

ಹಾವೇರಿ: ಆಹಾರ ಸಾಮಗ್ರಿ ಮತ್ತು ದನಕರುಗಳಿಗೆ ಮೇವು ನೀಡಲು ಆಗ್ರಹಿಸಿ ಕಂಟೈನ್ಮೆಂಟ್ ಜೋನ್ ನಿವಾಸಿಗಳು ಧರಣಿ ನಡೆಸಿರುವ ಘಟನೆ ಹಾವೇರಿ ತಾಲೂಕಿನ ಗುತ್ತಲದ ಬಳಿ ನಡೆದಿದೆ. ಜೂನ್ 5ರಂದು ಪಟ್ಟಣದ ಕಲಾಲ್ ಪ್ಲಾಟ್​ನ ಇಪ್ಪತ್ತೇಳು ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್​ಡೌನ್ ಮಾಡಿತ್ತು. ಸೀಲ್​ಡೌನ್ ಮಾಡಿ ಒಂದು ವಾರ ಕಳೆದ್ರೂ ಅಲ್ಲಿನ ಜನರಿಗೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಊಟ, ನೀರಿಗಾಗಿ ಜನ ಪರದಾಡುತ್ತಿದ್ದಾರೆ. ದನ-ಕರುಗಳಿಗೆ ಮೇವು […]

ಆಹಾರ ಸಾಮಗ್ರಿ, ದನಕರುಗಳಿಗೆ ಮೇವು ನೀಡಿ: ಕಂಟೈನ್ಮೆಂಟ್ ಜೋನ್ ನಿವಾಸಿಗಳ ಅಳಲು
ಆಯೇಷಾ ಬಾನು

Updated on: Jun 11, 2020 | 4:12 PM

ಹಾವೇರಿ: ಆಹಾರ ಸಾಮಗ್ರಿ ಮತ್ತು ದನಕರುಗಳಿಗೆ ಮೇವು ನೀಡಲು ಆಗ್ರಹಿಸಿ ಕಂಟೈನ್ಮೆಂಟ್ ಜೋನ್ ನಿವಾಸಿಗಳು ಧರಣಿ ನಡೆಸಿರುವ ಘಟನೆ ಹಾವೇರಿ ತಾಲೂಕಿನ ಗುತ್ತಲದ ಬಳಿ ನಡೆದಿದೆ.

ಜೂನ್ 5ರಂದು ಪಟ್ಟಣದ ಕಲಾಲ್ ಪ್ಲಾಟ್​ನ ಇಪ್ಪತ್ತೇಳು ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್​ಡೌನ್ ಮಾಡಿತ್ತು. ಸೀಲ್​ಡೌನ್ ಮಾಡಿ ಒಂದು ವಾರ ಕಳೆದ್ರೂ ಅಲ್ಲಿನ ಜನರಿಗೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ.

ಹೀಗಾಗಿ ಊಟ, ನೀರಿಗಾಗಿ ಜನ ಪರದಾಡುತ್ತಿದ್ದಾರೆ. ದನ-ಕರುಗಳಿಗೆ ಮೇವು ಸಹ ಸಿಗದೆ ಒದ್ದಾಡುತ್ತಿದ್ದಾರೆ. ಜಿಲ್ಲಾಡಳಿತದ ಬೇಜವಾಬ್ದಾರಿತನಕ್ಕೆ ಸಾಮಾಜಿಕ ಅಂತರವಿಲ್ಲದೆ ಆಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಸಿಗಬೇಕಾದ ಸೌಲಭ್ಯ ಕಲ್ಪಿಸೋವರೆಗೂ ಪ್ರತಿಭಟನೆ ಕೈಬಿಡದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

Published On - 12:54 pm, Thu, 11 June 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us