AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್ ಶಿಕ್ಷಣ ಬಂದ್ ಆಯ್ತು, ಮುಂದೆ ಮಕ್ಕಳ ಭವಿಷ್ಯವೇನು?

ಬೆಂಗಳೂರು: ರಾಜ್ಯ ಸರ್ಕಾರ ಆನ್​ಲೈನ್ ಶಿಕ್ಷಣವನ್ನು ಬಂದ್ ಮಾಡಿದೆ. ಮಕ್ಕಳಿಗೂ ಆನ್ ಲೈನ್ ಆಪತ್ತು ತಪ್ಪಿ ಹೋಯ್ತು. ಆದರೆ ಮತ್ತೊಂದು ಕಡೆ ಶಾಲೆ ತೆರೆಯೋದು ಸದ್ಯಕ್ಕೆ ಡೌಟ್. ಹೀಗಿರುವಾಗ ಮಕ್ಕಳು ಕಲಿಕೆ ಮುಂದುವರಿಸೋದು ಹೇಗೆ? ಆನ್ ಲೈನ್ ಪಾಠ ನಿಂತ ಮೇಲೆ ಮಕ್ಕಳಿಗೆ ಪರ್ಯಾಯ ಕಲಿಕೆ ಏನು? ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಪರ್ಯಾಯ ದಾರಿ ಹುಡುಕಿದ್ಯಾ ಇಲ್ವಾ? ಎನ್ನುವ ಹತ್ತು ಹಲವು ಪ್ರಶ್ನೆಗಳು ಪೋಷಕರಿಗೆ ಕಾಡುತ್ತಿವೆ. ಆನ್‌ಲೈನ್ ಶಿಕ್ಷಣವನ್ನ ಸರ್ಕಾರ ಹಿಂಪಡೆಿದಿದ್ದು ಯಾಕೆ? ಮೂರು ಕಾರಣಗಳು? 1. ಆನ್​ಲೈನ್ […]

ಆನ್​ಲೈನ್ ಶಿಕ್ಷಣ ಬಂದ್ ಆಯ್ತು, ಮುಂದೆ ಮಕ್ಕಳ ಭವಿಷ್ಯವೇನು?
ಆಯೇಷಾ ಬಾನು
| Updated By: Digi Tech Desk|

Updated on:Jun 23, 2021 | 1:28 PM

Share

ಬೆಂಗಳೂರು: ರಾಜ್ಯ ಸರ್ಕಾರ ಆನ್​ಲೈನ್ ಶಿಕ್ಷಣವನ್ನು ಬಂದ್ ಮಾಡಿದೆ. ಮಕ್ಕಳಿಗೂ ಆನ್ ಲೈನ್ ಆಪತ್ತು ತಪ್ಪಿ ಹೋಯ್ತು. ಆದರೆ ಮತ್ತೊಂದು ಕಡೆ ಶಾಲೆ ತೆರೆಯೋದು ಸದ್ಯಕ್ಕೆ ಡೌಟ್. ಹೀಗಿರುವಾಗ ಮಕ್ಕಳು ಕಲಿಕೆ ಮುಂದುವರಿಸೋದು ಹೇಗೆ? ಆನ್ ಲೈನ್ ಪಾಠ ನಿಂತ ಮೇಲೆ ಮಕ್ಕಳಿಗೆ ಪರ್ಯಾಯ ಕಲಿಕೆ ಏನು? ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಪರ್ಯಾಯ ದಾರಿ ಹುಡುಕಿದ್ಯಾ ಇಲ್ವಾ? ಎನ್ನುವ ಹತ್ತು ಹಲವು ಪ್ರಶ್ನೆಗಳು ಪೋಷಕರಿಗೆ ಕಾಡುತ್ತಿವೆ.

ಆನ್‌ಲೈನ್ ಶಿಕ್ಷಣವನ್ನ ಸರ್ಕಾರ ಹಿಂಪಡೆಿದಿದ್ದು ಯಾಕೆ? ಮೂರು ಕಾರಣಗಳು? 1. ಆನ್​ಲೈನ್ ಶಿಕ್ಷಣ, ಸಾಮಾನ್ಯ ಪಠ್ಯಕ್ರಮಕ್ಕೆ ಪರ್ಯಾಯವಲ್ಲ ಅನ್ನೋದು ಮನದಟ್ಟಾಗಿದೆ. ಶಾಲೆಯಲ್ಲಿ ಹೇಳಿಕೊಡೋ ಪಠ್ಯವನ್ನ ಆನ್​ಲೈನ್​ನಲ್ಲಿ ಹೇಳಿಕೊಡೋಕೆ ಸಾಧ್ಯವಿಲ್ಲ. ಆನ್​ಲೈನ್ ಮೂಲಕ ಪಾಠ ಹೇಳಿಕೊಟ್ರೆ ಕಲಿಕೆ ಸಾಮರ್ಥ್ಯ ಕಡಿಮೆಯಾಗುತ್ತೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯದ ಮೇಲೂ ಕೂಡಾ ಹೊರೆಯಾಗ್ತಿದೆ

2. ಆನ್​ಲೈನ್ ಶಿಕ್ಷಣದ ಹೆಸರಲ್ಲಿ ನಡೀತಾ ಇರೋ ಫೀಸ್ ವಸೂಲಿ ನಿಲ್ಲಿಸೋದು. ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್​ಲೈನ್ ಕ್ಲಾಸ್​ಗೆ ಹಣ ಪಡೆದುಕೊಳ್ತಾ ಇವೆ. ಆ ಮೂಲಕ ಪೋಷಕರಿಂದ ಸಾವಿರಾರು ರೂಪಾಯಿ ತೆಗೆದುಕೊಳ್ತಾ ಇವೆ. ಇಂಥದ್ದೊಂದು ಫೀಸ್ ದಂಧೆಗೆ ಬ್ರೇಕ್ ಹಾಕೋ ಉದ್ದೇಶದಿಂದಲೂ ಆನ್​ಲೈನ್ ಶಿಕ್ಷಣ ಬಂದ್ ಮಾಡಲಾಗಿದೆ.

3. ಖಾಸಗಿ ಶಾಲೆ ಮಕ್ಕಳು ಆನ್​ಲೈನ್​ನಲ್ಲಿ ಪಠ್ಯ ಕೇಳಿಸಿಕೊಳ್ಳೋಕೆ ಅನುಕೂಲ ಇದೆ. ಆದ್ರೆ ಸರ್ಕಾರಿ ಶಾಲೆಯ ಮಕ್ಕಳಿಗೆ ಇದು ಸಾಧ್ಯವಿಲ್ಲ. ಇದು ತಾರತಮ್ಯವಾಗೋ ಹಿನ್ನೆಲೆಯಲ್ಲಿ ಒಂದೇ ತರಗತಿಯಲ್ಲಿ ಓದುವ ಭಿನ್ನ ಮಾಧ್ಯಮದ ಶಾಲೆಯ ಮಕ್ಕಳಲ್ಲಿ ತಾರತಮ್ಯ ಸರಿಯಲ್ಲ. ಸಾಮಾಜಿಕ ನ್ಯಾಯದ ಆಧಾರದಲ್ಲಿ ಸರ್ವರಿಗೂ ಶಿಕ್ಷಣ ಆಶಯ ಈಡೇರುತ್ತಾ ಇಲ್ಲ ಇಂಥಾ ಒಂದು ಕೂಗು ಎದ್ದೇಳಬಹುದು ಅಂದುಕೊಂಡು ಆನ್​ಲೈನ್ ಶಿಕ್ಷಣ ಹಿಂಪಡೆಯಲಾಗಿದೆ. ಕಲಿಕಾ ಹಂತದಲ್ಲೇ ತಾರತಮ್ಯ ಶುರುವಾಗಿ ವ್ಯತಿರಿಕ್ತವಾಗಿ ತಿರುಗಿದ್ರೆ ನಿಭಾಯಿಸೋದು ಕಷ್ಟ.

ಶಾಲೆ ಓಪನ್​ಗೆ ಇನ್ನೆಷ್ಟು ಸಮಯ ಬೇಕಾಗುತ್ತೆ ಅನ್ನೋದು ಗೊತ್ತಿಲ್ಲ. ಆನ್​ಲೈನ್ ಶಿಕ್ಷಣ ಇಲ್ಲದೆ ಇರೋದ್ರಿಂದ ಮಕ್ಕಳಿಗೆ ಕಲಿಕೆ ಇನ್ನಷ್ಟು ಕಷ್ಟವಾಗಬಹುದು. ವೈಜ್ಞಾನಿಕವಾಗಿ ಆನ್​ಲೈನ್ ಕ್ಲಾಸ್ ನಡೆಸಲು ಪ್ಲ್ಯಾನ್ ನಡೀತಿದೆ. ಆನ್​ಲೈನ್ ಪಠ್ಯ ಹೊರತುಪಡಿಸಿ ಇತರೆ ಆಸಕ್ತಿಕರ ಚಟುವಟಿಕೆಗೆಳು ಬಗ್ಗೆ ಶಿಕ್ಷಣ ಇಲಾಖೆ ಚಿಂತಿಸುತ್ತಿದೆ. ಇದೆ ಮಕ್ಕಳ ಕಲಿಕೆಗೆ ಪರ್ಯಾಯ ಮಾರ್ಗದ ಬಗ್ಗೆ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ಆದರೆ ಸದ್ಯ ಆನ್​ಲೈನ್ ಕ್ಲಾಸ್ ಬಂದ್ ಆಗಿದ್ದು, ಮಕ್ಕಳ ಕಲಿಕೆಗೆ ಪೆಟ್ಟುಬಿದ್ದಂತಾಗಿದೆ.

Published On - 11:07 am, Thu, 11 June 20

ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?