
Shiva Rajkumar
ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಶಿವರಾಜ್ಕುಮಾರ್ ಕೂಡ ಪ್ರಮುಖರು. ಸಿನಿಮಾ ರಂಗದಲ್ಲಿ ಅವರಿಗೆ ಇರುವ ಅನುಭವ ಅಪಾರ. 130ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಶಿವರಾಜ್ಕುಮಾರ್ ಜನಿಸಿದ್ದು 1962ರ ಜುಲೈ 12ರಂದು. ಡಾ. ರಾಜ್ಕುಮಾರ್ ಅವರ ಪುತ್ರನಾದರೂ ಕೂಡ ತಮ್ಮದೇ ಛಾಪನ್ನು ಶಿವರಾಜ್ಕುಮಾರ್ ಮೂಡಿಸಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ಆನಂದ್’ ಸೂಪರ್ ಹಿಟ್ ಆಯಿತು. ನಂತರದ ವರ್ಷಗಳಲ್ಲಿ ಅವರು ಕನ್ನಡ ಚಿತ್ರರಂಗದ ಪ್ರಮುಖ ಸ್ಟಾರ್ ನಟನಾಗಿ ಬೆಳೆದರು. ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಜನುಮದ ಜೋಡಿ, ಓಂ, ಜೋಗಿ, ಟಗರು, ತವರಿಗೆ ಬಾ ತಂಗಿ, ಮಫ್ತಿ ಮುಂತಾದವು ಶಿವರಾಜ್ಕುಮಾರ್ ನಟನೆಯ ಪ್ರಮುಖ ಸಿನಿಮಾಗಳು. ನಟನೆ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳಿಂದಲೂ ಶಿವರಾಜ್ಕುಮಾರ್ ಅವರು ಜನಮೆಚ್ಚುಗೆ ಪಡೆದಿದ್ದಾರೆ
‘ಆನಂದ್’ ಸಿನಿಮಾದ ಸಾಂಗ್ ಶೂಟಿಂಗ್ ವೇಳೆ ನಡೆದಿತ್ತು ಫನ್ನಿ ಘಟನೆ; ವಿವರಿಸಿದ ಸುಧಾರಾಣಿ
Anand Movie: ಸುಧಾರಾಣಿ ಅವರು ಆನಂದ್ ಚಿತ್ರದ ‘ನೀಲ ಮೇಘ..’ ಹಾಡಿನ ಚಿತ್ರೀಕರಣದ ವೇಳೆ ನಡೆದ ಒಂದು ಫನ್ನಿ ಘಟನೆಯನ್ನು ವಿವರಿಸಿದ್ದಾರೆ. ಶಿವರಾಜ್ ಕುಮಾರ್ ಅವರೊಂದಿಗಿನ ದೃಶ್ಯದಲ್ಲಿ ಅವರು ತಡವಾಗಿ ಅರ್ಥಮಾಡಿಕೊಂಡ ಒಂದು ವಿಷಯ ಮತ್ತು ನಿರ್ದೇಶಕರ ಸಹಾಯದ ಬಗ್ಗೆ ಮಾತನಾಡಿದ್ದಾರೆ.
- Shreelaxmi H
- Updated on: Jun 25, 2025
- 8:19 am
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಜನರು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ‘ಉತ್ತರಕಾಂಡ’ ಚಿತ್ರದ ಶೂಟಿಂಗ್ ಸದ್ಯಕ್ಕೆ ನಿಂತಿವೆ. ಅದಕ್ಕೆ ಕಾರಣವೇನು ಎಂಬುದನ್ನು ನಿರ್ದೇಶಕ ರೋಹಿತ್ ಪದಕಿ ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ ಅವರು ವಿವರಿಸಿದ್ದಾರೆ. ಈ ಚಿತ್ರದ ಪಾತ್ರವರ್ಗದಲ್ಲಿ ಡಾಲಿ ಧನಂಜಯ, ಶಿವರಾಜ್ಕುಮಾರ್ ಮುಂತಾದವರಿಗೆ ಪ್ರಮುಖ ಪಾತ್ರವಿದೆ.
- Madan Kumar
- Updated on: Jun 19, 2025
- 7:50 pm
ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್
ನಟ ಮಡೆನೂರು ಮನು ಅವರು ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗಿದ್ದಾರೆ. ಕನ್ನಡ ಚಿತ್ರರಂಗ ಖ್ಯಾತ ಹೀರೋಗಳ ಬಗ್ಗೆ ಮನು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಒಂದು ಆಡಿಯೋ ವೈರಲ್ ಆಗಿದೆ. ಆ ಕುರಿತು ‘ಮಾದೇವ’ ಸಿನಿಮಾದ ನಟ ವಿನೋದ್ ಪ್ರಭಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
- Madan Kumar
- Updated on: Jun 15, 2025
- 9:13 am
‘45’ ಸಿನಿಮಾ ಹಾಡಿನಲ್ಲಿ ಶಿವಣ್ಣ, ಉಪ್ಪಿ, ರಾಜ್ ಶೆಟ್ಟಿ ಜತೆ ಉಗಾಂಡ ಮಕ್ಕಳ ಡ್ಯಾನ್ಸ್
ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ‘45’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಈಗ ಈ ಚಿತ್ರಕ್ಕೆ ಬಹಳ ಅದ್ದೂರಿಯಾಗಿ ಪ್ರಮೋಷನಲ್ ಸಾಂಗ್ ಶೂಟಿಂಗ್ ಮಾಡಲು ಸಿದ್ಧತೆ ನಡೆದಿದೆ. ಈ ಹಾಡಿನಲ್ಲಿ ಶಿವರಾಜ್ಕುಮಾರ್, ರಾಜ್ ಬಿ. ಶೆಟ್ಟಿ, ಉಪೇಂದ್ರ ಜೊತೆ ಉಗಾಂಡದ ಡ್ಯಾನ್ಸರ್ಸ್ ಹೆಜ್ಜೆ ಹಾಕಲಿರುವುದು ವಿಶೇಷ.
- Madan Kumar
- Updated on: Jun 13, 2025
- 5:37 pm
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ ಸರ್ಜಾ
ನಟ ಶಿವರಾಜ್ಕುಮಾರ್ ಅವರು ಸ್ಯಾಂಡಲ್ವುಡ್ಗೆ ಕಾಲಿಟ್ಟು 40 ವರ್ಷ ಕಳೆದಿದೆ. ಅದಕ್ಕಾಗಿ ಧ್ರುವ ಸರ್ಜಾ ಶುಭ ಹಾರೈಸಿದ್ದಾರೆ. ವಿಡಿಯೋ ಮೂಲಕ ಧ್ರುವ ಸರ್ಜಾ ಅವರು ಪ್ರೀತಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಬೇರೆ ಬೇರೆ ಭಾಷೆಯ ಚಿತ್ರರಂಗದ ಕಲಾವಿದರು, ನಿರ್ದೇಶಕರು ಕೂಡ ಶಿವಣ್ಣಗೆ ಅಭಿನಂದನೆ ತಿಳಿಸುತ್ತಿದ್ದಾರೆ.
- Madan Kumar
- Updated on: Jun 10, 2025
- 9:07 pm
ಶಿವಣ್ಣ ಸಿನಿಮಾ ಜರ್ನಿಗೆ 40 ವರ್ಷ; ಶುಭಕೋರಿದ ಪರಭಾಷೆಯ ಸ್ಟಾರ್ ಕಲಾವಿದರು
ಶಿವರಾಜ್ಕುಮಾರ್ ಎಂದರೆ ಕರ್ನಾಟಕ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳಿಗೂ ತುಂಬ ಅಭಿಮಾನ. ಅವರ ಜೊತೆ ಎಲ್ಲರೂ ಉತ್ತಮ ಒಡನಾಟ ಹೊಂದಿದ್ದಾರೆ. ಬಣ್ಣದ ಲೋಕದಲ್ಲಿ 40 ವರ್ಷ ಪೂರೈಸುತ್ತಿರುವ ಶಿವಣ್ಣ ಅವರಿಗೆ ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ.
- Madan Kumar
- Updated on: Jun 10, 2025
- 5:35 pm
‘ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು’; ಶಿವಣ್ಣ ಭಾವುಕ ಪೋಸ್ಟ್
ಬೆಂಗಳೂರಿನಲ್ಲಿ ಆರ್ಸಿಬಿ ಗೆಲುವಿನ ಸಂಭ್ರಮದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. ಶಿವರಾಜ್ ಕುಮಾರ್, ರಕ್ಷಿತಾ ಪ್ರೇಮ್, ನಿಶ್ವಿಕಾ ನಾಯ್ಡು ಮತ್ತು ಕಮಲ್ ಹಾಸನ್ ಸೇರಿದಂತೆ ಅನೇಕರು ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾಗಿರುವ ಜನರು ಸರ್ಕಾರವನ್ನು ದೂಷಿಸುತ್ತಿದ್ದಾರೆ.
- Rajesh Duggumane
- Updated on: Jun 5, 2025
- 7:31 am
ಅಂಥ ಟ್ರಿಕ್ಸ್ ನನ್ನ ಹತ್ರ ಬೇಡ: ಮಾಧ್ಯಮಗಳ ಎದುರು ಶಿವಣ್ಣ ಗರಂ
ಕಮಲ್ ಹಾಸನ್ ಅವರ ಮಾತಿಗೆ ಶಿವಣ್ಣ ಚಪ್ಪಾಳೆ ಹೊಡೆದರು ಎಂಬ ರೀತಿ ಕೆಲವು ಕಡೆಗಳಲ್ಲಿ ತೋರಿಸಲಾಗುತ್ತಿದೆ. ಅದನ್ನು ಶಿವರಾಜ್ಕುಮಾರ್ ಖಂಡಿಸಿದ್ದಾರೆ. ‘ಅಂಥ ಟ್ರಿಕ್ಸ್ ನನ್ನ ಎದುರು ತೋರಿಸಬೇಡಿ. ನಾನು ಕೂಡ ಒಬ್ಬ ನಟ. ಅದನ್ನೆಲ್ಲ ನಾನು ಪತ್ತೆಹಚ್ಚಬಲ್ಲೆ’ ಎಂದು ಶಿವರಾಜ್ಕುಮಾರ್ ಅವರು ಮಾಧ್ಯಮಗಳ ಎದುರು ಗರಂ ಆಗಿದ್ದಾರೆ.
- Madan Kumar
- Updated on: Jun 1, 2025
- 10:40 am
ಸುರೇಶ್ ರೈನಾಗೆ ಓಂ ಸಿನಿಮಾ ರೀತಿ ಲಾಂಗ್ ಹಿಡಿಯೋದು ಕಲಿಸಿದ ಶಿವಣ್ಣ
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಹಾಗೂ ಕ್ರಿಕೆಟರ್ ಸುರೇಶ್ ರೈನಾ ಅವರು ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಕ್ಷಣ ತುಂಬ ವಿಶೇಷವಾಗಿತ್ತು. ‘ಓಂ’ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ಲಾಂಗ್ ಹಿಡಿದ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅದನ್ನು ಈಗ ಸುರೇಶ್ ರೈನಾಗೆ ಶಿವಣ್ಣ ಕಲಿಸಿಕೊಟ್ಟಿದ್ದಾರೆ.
- Madan Kumar
- Updated on: Jun 1, 2025
- 9:35 am
ಶಿವಣ್ಣನ ಬಳಿ ಅವಕಾಶಕ್ಕಾಗಿ ಬೇಡಿಕೆ ಇಟ್ಟ ಟಾಲಿವುಡ್ ಹಿರಿಯ ನಟ; ಹೀರೋ ಪ್ರತಿಕ್ರಿಯೆ ಏನು?
ಟಾಲಿವುಡ್ ನಟ ಮೋಹನ್ ಬಾಬು ಅವರು ಶಿವರಾಜ್ ಕುಮಾರ್ ಜೊತೆ ನಟಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ರಾಜ್ ಕುಮಾರ್ ಜೊತೆ ನಟಿಸುವ ಅವರ ಆಸೆ ಈಡೇರದ ಕಾರಣ, ಶಿವರಾಜ್ ಕುಮಾರ್ ಜೊತೆ ನಟಿಸುವ ಆಸೆ ಹೊಂದಿದ್ದಾರೆ. ಶಿವರಾಜ್ ಕುಮಾರ್ ಅವರು ಮೋಹನ್ ಬಾಬು ಅವರಿಗೆ ವಿಲನ್ ಪಾತ್ರವಲ್ಲದೆ ವಿಶೇಷ ಪಾತ್ರ ನೀಡುವುದಾಗಿ ತಿಳಿಸಿದ್ದಾರೆ.
- Rajesh Duggumane
- Updated on: May 31, 2025
- 3:11 pm