Shiva Rajkumar
ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಶಿವರಾಜ್ಕುಮಾರ್ ಕೂಡ ಪ್ರಮುಖರು. ಸಿನಿಮಾ ರಂಗದಲ್ಲಿ ಅವರಿಗೆ ಇರುವ ಅನುಭವ ಅಪಾರ. 130ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಶಿವರಾಜ್ಕುಮಾರ್ ಜನಿಸಿದ್ದು 1962ರ ಜುಲೈ 12ರಂದು. ಡಾ. ರಾಜ್ಕುಮಾರ್ ಅವರ ಪುತ್ರನಾದರೂ ಕೂಡ ತಮ್ಮದೇ ಛಾಪನ್ನು ಶಿವರಾಜ್ಕುಮಾರ್ ಮೂಡಿಸಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ಆನಂದ್’ ಸೂಪರ್ ಹಿಟ್ ಆಯಿತು. ನಂತರದ ವರ್ಷಗಳಲ್ಲಿ ಅವರು ಕನ್ನಡ ಚಿತ್ರರಂಗದ ಪ್ರಮುಖ ಸ್ಟಾರ್ ನಟನಾಗಿ ಬೆಳೆದರು. ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಜನುಮದ ಜೋಡಿ, ಓಂ, ಜೋಗಿ, ಟಗರು, ತವರಿಗೆ ಬಾ ತಂಗಿ, ಮಫ್ತಿ ಮುಂತಾದವು ಶಿವರಾಜ್ಕುಮಾರ್ ನಟನೆಯ ಪ್ರಮುಖ ಸಿನಿಮಾಗಳು. ನಟನೆ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳಿಂದಲೂ ಶಿವರಾಜ್ಕುಮಾರ್ ಅವರು ಜನಮೆಚ್ಚುಗೆ ಪಡೆದಿದ್ದಾರೆ
100 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಯ್ತು ‘45’ ಸಿನಿಮಾ?
ಬಹುನಿರೀಕ್ಷಿತ ‘45’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಚಿತ್ರತಂಡ ಹೇಳಿದೆ. ಈ ಚಿತ್ರದ ಬಜೆಟ್ 100 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಡಿ.25ಕ್ಕೆ ‘45’ ರಿಲೀಸ್ ಆಗಲಿದೆ.
- Madan Kumar
- Updated on: Dec 3, 2025
- 7:23 pm
‘ನನ್ನ ಲುಕ್ಗೆ ಮಫ್ತಿ ಸಿನಿಮಾ ಸ್ಫೂರ್ತಿ’; ಶಿವಣ್ಣನ ಎದುರೇ ಹೇಳಿದ ಬಾಲಯ್ಯ
ನಂದಮೂರಿ ಬಾಲಕೃಷ್ಣರ 'ಅಖಂಡ 2' ಟ್ರೇಲರ್ ಲಾಂಚ್ ಚಿಂತಾಮಣಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಶಿವರಾಜ್ಕುಮಾರ್ ಆಗಮಿಸಿದ್ದರು. ಈ ವೇಳೆ ಅವರು ತಮ್ಮ 'ವೀರ ಸಿಂಹ ರೆಡ್ಡಿ' ಸಿನಿಮಾದ ಲುಕ್ ಶಿವರಾಜ್ಕುಮಾರ್ರ 'ಮಫ್ತಿ' ಚಿತ್ರದಿಂದ ಪ್ರೇರಿತ ಎಂದು ಬಹಿರಂಗಪಡಿಸಿದರು. ಇಬ್ಬರು ನಟರ ನಡುವಿನ ಆತ್ಮೀಯ ಬಾಂಧವ್ಯ ಈ ಸಂದರ್ಭದಲ್ಲಿ ಎದ್ದು ಕಾಣಿಸಿತು.
- Rajesh Duggumane
- Updated on: Nov 22, 2025
- 9:00 am
‘ಇವನೇ ಶ್ರೀನಿವಾಸ’ ಸಿನಿಮಾಗೆ ಹೀರೋ ಆದ ಪೌರಕಾರ್ಮಿಕ ಪ್ರತಾಪ್; ಬೆಂಬಲ ನೀಡಿದ ಶಿವಣ್ಣ
ಪೌರಕಾರ್ಮಿಕನಾಗಿ ಕೆಲಸ ಮಾಡುವ ಪ್ರತಾಪ್ ಅವರು ‘ಇವನೇ ಶ್ರೀನಿವಾಸ’ ಸಿನಿಮಾಗೆ ಹೀರೋ ಆಗಿದ್ದಾರೆ. ಈ ಸಿನಿಮಾ ಈಗ ಬಿಡುಗಡೆಗೆ ಸಿದ್ದವಾಗಿದೆ. ಜನವರಿ ವೇಳೆಗೆ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಶಿವರಾಜ್ಕುಮಾರ್ ಅವರು ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
- Madan Kumar
- Updated on: Nov 18, 2025
- 7:30 pm
ಶಿವರಾಜ್ ಕುಮಾರ್ ಭೇಟಿಯಾದ ದರ್ಶನ್ ಪುತ್ರ ವಿನೀಶ್: ವಿಡಿಯೋ ನೋಡಿ
Darshan Thoogudeepa: ನಟ ದರ್ಶನ್ ಪುತ್ರ ವಿನೀಶ್ ಇಂದು ಶಿವರಾಜ್ ಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಕುಂಬಳಗೋಡುವಿನ ಬಿಜಿಎಸ್ ಕ್ರಿಕೆಟ್ ಗ್ರೌಂಡ್ ನಲ್ಲಿ ಶಿವಣ್ಣ ನಟನೆಯ ‘ಡ್ಯಾಡ್’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿನೀಶ್ ಸಹ ಅಲ್ಲಿಗೆ ಬಂದಿದ್ದು, ಶಿವಣ್ಣ, ಎಂದಿನ ವಿನಯತೆಯಿಂದ ವಿನೀಶ್ ಅವರ ಕೈಕುಲುಕಿ, ಭುಜ ತಟ್ಟಿ ಮಾತನಾಡಿದ್ದಾರೆ. ಇಬ್ಬರ ಭೇಟಿಯ ವಿಡಿಯೋ ಇಲ್ಲಿದೆ ನೋಡಿ...
- Manjunatha C
- Updated on: Nov 18, 2025
- 5:30 pm
ಅನನ್ಯಾ ಅಮರ್ ಅಭಿಮಾನ ನೋಡಿ ಭಾವುಕರಾದ ಶಿವರಾಜ್ಕುಮಾರ್
"ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5" ವೇದಿಕೆ ಮೇಲೆ ನಟಿ ಅನನ್ಯಾ ಅಮರ್ ಶಿವಣ್ಣನ 'ಜೋಗಿ' ಹಾಡಿಗೆ ಅದ್ಭುತವಾಗಿ ನರ್ತಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಅವರ ಅಚಲ ಅಭಿಮಾನತ್ವದಿಂದ ಶಿವಣ್ಣ ಭಾವುಕರಾದರು. ಶಿವಣ್ಣರ ಮಾರ್ಗದರ್ಶನ ಸ್ಪರ್ಧಿಗಳಿಗೆ ಖುಷಿ ನೀಡಿದೆ. ಸದ್ಯ ಹಿರಿತೆರೆಯಲ್ಲಿ 'ಪೆದ್ದಿ' ಹಾಗೂ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.
- Shreelaxmi H
- Updated on: Nov 14, 2025
- 7:50 am
ಎರಡನೇ ಬೆಳೆಗೆ ತುಂಗಭದ್ರಾ ನೀರು ಹರಿಸುವ ಬಗ್ಗೆ ಡಿಕೆ ಶಿವಕುಮಾರ್ ಹೀಗ್ಯಾಕಂದ್ರು?
ರಾಯಚೂರು, ಕೊಪ್ಪಳ, ಬಳ್ಳಾರಿಯಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಸೇರಿಕೊಂಡು ಎರಡನೇ ಬೆಳೆಗೆ ನೀರು ಹರಿಸಲೇಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಈ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್, ತುಂಗಾಭದ್ರ ಅಣೆಕಟ್ಟು ಮುಖ್ಯವೋ? ಬೆಳೆ ಮುಖ್ಯವೋ? ಇದರ ಬಗ್ಗೆ ಆಲೋಚಿಸಬೇಕು ಎಂದು ರೈತರ ತೀರ್ಮಾನಕ್ಕೆ ಬಿಟ್ಟಿದ್ದಾರೆ.
- Ramesh B Jawalagera
- Updated on: Nov 9, 2025
- 9:18 pm
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್: ಸನ್ಮಾನ ಮಾಡಿದ ಶಿವಣ್ಣ
ಚಿತ್ರರಂಗದಲ್ಲಿ ಹಿರಿಯ ನಟ ಸಾಯಿ ಕುಮಾರ್ ಅವರು ಆ್ಯಕ್ಟೀವ್ ಆಗಿದ್ದಾರೆ. ಬಣ್ಣದ ಲೋಕದಲ್ಲಿ ಅವರು ಐವತ್ತು ವರ್ಷಗಳನ್ನು ಪೂರೈಸಿದ್ದಾರೆ. ಈಗ ಅವರು ‘ಹಲ್ಕಾ ಡಾನ್’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಶಿವರಾಜ್ಕುಮಾರ್ ಕೂಡ ಆಗಮಿಸಿದ್ದರು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: Oct 24, 2025
- 7:34 pm
ದೊಡ್ಡ ಬಳ್ಳಾಪುರದಲ್ಲಿ ಡಾ. ರಾಜ್ ಅಭಿಮಾನಿಗಳ ಸಾಗರ: ಪುತ್ಥಳಿ ಅನಾವರಣ ಮಾಡಿದ ಶಿವಣ್ಣ
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಇಂದು (ಅ.12) ದೊಡ್ಡ ಬಳ್ಳಾಪುರಕ್ಕೆ ತೆರಳಿದ್ದಾರೆ. ಡಾ. ರಾಜ್ಕುಮಾರ್ ಪುತ್ಥಳಿಯನ್ನು ಅನಾವರಣ ಮಾಡಿದ್ದಾರೆ. ಗೀತಾ ಶಿವರಾಜ್ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಅವರನ್ನು ನೋಡಲು ಜನಸಾಗರ ಸೇರಿತ್ತು. ಅಭಿಮಾನಿಗಳನ್ನು ಉದ್ದೇಶಿಸಿ ಶಿವರಾಜ್ಕುಮಾರ್ ಮಾತನಾಡಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
- Madan Kumar
- Updated on: Oct 12, 2025
- 9:17 pm
‘ಕಾಂತಾರ: ಚಾಪ್ಟರ್ 1’ ಸಿನಿಮಾ ಯಶಸ್ಸಿನ ಬಗ್ಗೆ ಶಿವರಾಜ್ಕುಮಾರ್ ಹೇಳಿದ್ದೇನು?
ರಿಷಬ್ ಶೆಟ್ಟಿ ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಚಿತ್ರದ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ. ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾ ರಂಗದ ಸೆಲೆಬ್ರಿಟಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ. ನಟ ಶಿವರಾಜ್ಕುಮಾರ್ ಅವರು ಈ ಕುರಿತು ತಮ್ಮ ಅನಿಸಿಕೆ ತಿಳಿಸಿದ್ದಾರೆ.
- Madan Kumar
- Updated on: Oct 12, 2025
- 6:14 pm
Geetha Shivarajkumar: ಚುನಾವಣಾ ರಾಜಕೀಯದ ಬಗ್ಗೆ ಗೀತಾ ಶಿವರಾಜ್ ಕುಮಾರ್ ಮಹತ್ವದ ಘೋಷಣೆ
ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ರಾಜಕೀಯದ ಬಗ್ಗೆ ಶನಿವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವ ಅವರು, ಪಕ್ಷದ ಪರ ಅಭಿಯಾನ ನಡೆಸುವುದಾಗಿಯೂ, ಮಹಿಳೆಯರ ಪರ ಕೆಲಸ ಮಾಡುವುದಾಗಿಯೂ ತಿಳಿಸಿದ್ದಾರೆ.
- Basavaraj Yaraganavi
- Updated on: Sep 27, 2025
- 5:11 pm