AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿತ ಕಳ್ಳನನ್ನು 15ದಿನ ಕಸ್ಟಡಿಯಲ್ಲಿಟ್ಟು ಎಡವಟ್ಟು, ಪೊಲೀಸ್ ಸಿಬ್ಬಂದಿಗೆ ಶುರುವಾಯ್ತು ಆತಂಕ

ಹುಬ್ಬಳ್ಳಿ: ಕೊರೊನಾ ನಮಗೆ ಅರಿವೇ ಇಲ್ಲದೆ ನಮ್ಮ ಒಳಗೆ ಸೇರಿಕೊಂಡಿರುತ್ತೆ. ಸುಳಿವೂ ಕೊಡದೆ ನಮ್ಮ ಉಸಿರು ನಿಲ್ಲಿಸುತ್ತೆ. ಮಹಾಮಾರಿ ಕೊರೊನಾ ಜನರನ್ನು ಕಪಿಮುಷ್ಠಿಯಲ್ಲಿ ಬಂಧಿಸಿದೆ. ಹೀಗಾಗಿ ಜನ ತುಂಬ ಮುನ್ನೆಚ್ಚರಿಕೆಯಿಂದಿರಬೇಕು. ಆದರೆ ಇಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸರು ಆತನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸದೆ 15ದಿನಗಳ ಕಾಲ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ. ಈ ಎಡವಟ್ಟಿನಿಂದ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ಕಳ್ಳತನ ಕೇಸ್​ನಲ್ಲಿ ಬಂಧಿಸಿದ್ದ ಗದಗ ಮೂಲದ ವ್ಯಕ್ತಿಯನ್ನು ಹುಬ್ಬಳ್ಳಿಯ ಉಪನಗರ ಇನ್ಸ್ಪೆಕ್ಟರ್ ಎಸ್.ಕೆ ಹೊಳೆಣ್ಣವರ್ ಟೆಸ್ಟ್​ಗೆ ಒಳಪಡಿಸದೇ ಕಳೆದ 15 […]

ಸೋಂಕಿತ ಕಳ್ಳನನ್ನು 15ದಿನ ಕಸ್ಟಡಿಯಲ್ಲಿಟ್ಟು ಎಡವಟ್ಟು, ಪೊಲೀಸ್ ಸಿಬ್ಬಂದಿಗೆ ಶುರುವಾಯ್ತು ಆತಂಕ
ಆಯೇಷಾ ಬಾನು
|

Updated on: Jul 01, 2020 | 8:27 AM

Share

ಹುಬ್ಬಳ್ಳಿ: ಕೊರೊನಾ ನಮಗೆ ಅರಿವೇ ಇಲ್ಲದೆ ನಮ್ಮ ಒಳಗೆ ಸೇರಿಕೊಂಡಿರುತ್ತೆ. ಸುಳಿವೂ ಕೊಡದೆ ನಮ್ಮ ಉಸಿರು ನಿಲ್ಲಿಸುತ್ತೆ. ಮಹಾಮಾರಿ ಕೊರೊನಾ ಜನರನ್ನು ಕಪಿಮುಷ್ಠಿಯಲ್ಲಿ ಬಂಧಿಸಿದೆ. ಹೀಗಾಗಿ ಜನ ತುಂಬ ಮುನ್ನೆಚ್ಚರಿಕೆಯಿಂದಿರಬೇಕು. ಆದರೆ ಇಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸರು ಆತನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸದೆ 15ದಿನಗಳ ಕಾಲ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ. ಈ ಎಡವಟ್ಟಿನಿಂದ ದೊಡ್ಡ ಸಂಕಷ್ಟವೊಂದು ಎದುರಾಗಿದೆ.

ಕಳ್ಳತನ ಕೇಸ್​ನಲ್ಲಿ ಬಂಧಿಸಿದ್ದ ಗದಗ ಮೂಲದ ವ್ಯಕ್ತಿಯನ್ನು ಹುಬ್ಬಳ್ಳಿಯ ಉಪನಗರ ಇನ್ಸ್ಪೆಕ್ಟರ್ ಎಸ್.ಕೆ ಹೊಳೆಣ್ಣವರ್ ಟೆಸ್ಟ್​ಗೆ ಒಳಪಡಿಸದೇ ಕಳೆದ 15 ದಿನದಿಂದ ಠಾಣೆ ಪಕ್ಕದ ಲಾಡ್ಜ್​ನಲ್ಲಿ ಇರಿಸಿದ್ದರು. 15 ದಿನಗಳ ಬಳಿಕ ಕೊವಿಡ್ ಟೆಸ್ಟ್ ಮಾಡಿದಾಗ ಆತನಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಹೀಗಾಗಿ ಈಗ ಸುಮಾರು 24ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಕೊರೊನಾ ಆತಂಕ ಉಂಟಾಗಿದೆ. ಇಷ್ಟಾದ್ರು ಪೊಲೀಸರನ್ನ ಕೊವಿಡ್ ಟೆಸ್ಟ್ ಮಾಡಲು ಹಿಂದೇಟು ಹಾಕಲಾಗಿದೆ. ಕೊರೊನಾ ಗುಣ ಲಕ್ಷಣ ಕಂಡ್ರೆ ಮಾತ್ರ ಟೆಸ್ಟ್ ಮಾಡೋದಾಗಿ ಹೇಳಿದ್ದಾರಂತೆ. ಇದರಿಂದಾಗಿ ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಆತಂಕ ಶುರುವಾಗಿದೆ.

ಸೋಂಕಿತ ಕಳ್ಳನ ಜೊತೆ 24 ಸಿಬ್ಬಂದಿ ಸಂಪರ್ಕದಲ್ಲಿದ್ದರು. ಜೊತೆಗೆ ಇನ್ಸ್ಪೆಕ್ಟರ್ ಕೂಡಾ ಕಳ್ಳನನ್ನ ವಿಚಾರಣೆ ಮಾಡಿದ್ದರು. ಅಲ್ಲದೆ ಪೊಲೀಸ್ ಕಮೀಷನರ್ ಕಚೇರಿಗೂ ಭೇಟಿ ನೀಡಿದ್ದರು. ಇಷ್ಟೆಲ್ಲಾ ಆದ್ರು ಪೊಲೀಸರ ಕೊವಿಡ್ ಟೆಸ್ಟ್ ಮಾಡದೇ ಇರೋದೆ ಆತಂಕ ಸೃಷ್ಟಿಸಿದೆ. ಇನ್ಸ್ಪೆಕ್ಟರ್ ಮಾಡಿದ ಏಡವಟ್ಟಿಗೆ ಇಡೀ ಠಾಣೆಯೇ ಸಿಬ್ಬಂದಿಗೆ ಆತಂಕದಲ್ಲಿದ್ದಾರೆ. ಅಲ್ಲದೆ ಆತ‌ ಕದ್ದ ವಸ್ತುಗಳನ್ನ ರಿಕವರಿ ಮಾಡಲು ಕೊರೊನಾ ರೋಗಿಯನ್ನ ಕರೆದುಕೊಂಡು ಬೇರೆ ಬೇರೆ ಊರಿಗೆ ಪೊಲೀಸರು‌ ಹೊಗಿದ್ದರು.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್