ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯ ಆರೋಪ: ಮೊಬೈಲ್ ಟವರ್ ಏರಿದ ದಂಪತಿ, ಯಾವೂರಲ್ಲಿ?

ಹಾಸನ: ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿರುವುದಾಗಿ ಆರೋಪ ಮಾಡಿ ದಂಪತಿಗಳು ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ಹಾಸನ ಜಿಲ್ಲೆ ಬೇಲೂರಿನ ನೆಹರು ನಗರದಲ್ಲಿ ನಡೆದಿದೆ. ನಾರಾಯಣಪುರದ ಮೋಹನ್ ರಾಜ್, ಚಂದನ ದಂಪತಿಗಳು ಮೊಬೈಲ್​ ಟವರ್ ಏರಿ ಈ ರಂಪಾಟ ಮಾಡಿದ್ದಾರೆ. ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಇಂದ ಮನೆ ನೀಡುವ ಭರವಸೆ ನೀಡಿದ್ದರು. ಇದಕ್ಕಾಗಿ ಗ್ರಾಮಸ್ಥರಿಂದ ತಲಾ 1 ಸಾವಿರ ರೂ.ಹಣ ವಸೂಲಿ ಮಾಡಿದ್ದಾರೆ ಎಂದು ದಂಪತಿಗಳು ಆರೋಪ ಮಾಡುತ್ತಿದ್ದಾರೆ. ಮುಂಜಾನೆಯಿಂದ ಟವರ್ ಏರಿ […]

ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯ ಆರೋಪ: ಮೊಬೈಲ್ ಟವರ್ ಏರಿದ ದಂಪತಿ, ಯಾವೂರಲ್ಲಿ?

Updated on: Nov 13, 2020 | 10:10 AM

ಹಾಸನ: ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿರುವುದಾಗಿ ಆರೋಪ ಮಾಡಿ ದಂಪತಿಗಳು ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ಹಾಸನ ಜಿಲ್ಲೆ ಬೇಲೂರಿನ ನೆಹರು ನಗರದಲ್ಲಿ ನಡೆದಿದೆ.

ನಾರಾಯಣಪುರದ ಮೋಹನ್ ರಾಜ್, ಚಂದನ ದಂಪತಿಗಳು ಮೊಬೈಲ್​ ಟವರ್ ಏರಿ ಈ ರಂಪಾಟ ಮಾಡಿದ್ದಾರೆ. ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಇಂದ ಮನೆ ನೀಡುವ ಭರವಸೆ ನೀಡಿದ್ದರು. ಇದಕ್ಕಾಗಿ ಗ್ರಾಮಸ್ಥರಿಂದ ತಲಾ 1 ಸಾವಿರ ರೂ.ಹಣ ವಸೂಲಿ ಮಾಡಿದ್ದಾರೆ ಎಂದು ದಂಪತಿಗಳು ಆರೋಪ ಮಾಡುತ್ತಿದ್ದಾರೆ.

ಮುಂಜಾನೆಯಿಂದ ಟವರ್ ಏರಿ ಕುಳಿತಿರುವ ದಂಪತಿಗಳು ನಮಗೆ ನ್ಯಾಯಬೇಕು ಎಂದು ರಂಪಾಟ ಶುರು ಮಾಡಿದ್ದಾರೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಕೆಳಗೆ ಇಳಿಯಲ್ಲ ಎಂದು ಪಟ್ಟು ಹಿಡಿದಿರುವ ದಂಪತಿಗಳು ಯಾರ ಮನವಿಗೂ ಸ್ಪಂದಿಸದೆ ಮೊಬೈಲ್​ ಟವರ್​ ಮೇಲೆಯೆ ಕುಳಿತಿದ್ದಾರೆ. ಘಟನಾ ಸ್ಥಳಕ್ಕೆ ಬೇಲೂರು ಪೊಲೀಸರು ಬೇಟಿ ನೀಡಿ ದಂಪತಿಗಳ ಮನವೋಲಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ.