AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೋಳಿಯೊಂದಿಗೇ ಹುಳು ಬಂತು’ ಎಂದ ಹೋಟೆಲ್ ಸಿಬ್ಬಂದಿ: ಜಗಳಕ್ಕಿಳಿದ ಗ್ರಾಹಕರು!

ದಕ್ಷಿಣ ಕನ್ನಡ: ಏನ್ರೀ, ನೀವು ಕೊಟ್ಟ ಚಿಕನ್ ಕಬಾಬ್​ನಲ್ಲಿ ಹುಳುಗಳಿವೆ ಎಂದು ಗ್ರಾಹಕರ ವಾದ. ಇದರಲ್ಲಿ ನಮ್ಮ ತಪ್ಪೇನಿಲ್ಲ, ಕೋಳಿ ಮಾರಿದವರದ್ದು ತಪ್ಪು ಎಂದು ಹೋಟೆಲ್ ಸಿಬ್ಬಂದಿಯ ಸಮಜಾಯಿಷಿ. ಈ ವಾಗ್ವಾದ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಹೋಟೆಲ್ ಒಂದರಲ್ಲಿ. ಎಂದಿನಂತೆ ಮಧ್ಯಾಹ್ನ ಊಟಕ್ಕೆ ಹೋಟೆಲಿಗೆ ಬಂದಿದ್ದ ಗ್ರಾಹಕರೊಬ್ಬರು ಚಿಕನ್ ಕಬಾಬ್ ಆರ್ಡರ್ ಮಾಡಿದ್ದರು. ಕಬಾಬ್ ಬರುತ್ತಿದ್ದಂತೆ ಹಸಿದ ಹೊಟ್ಟೆಗೆ ಬಿಸಿಬಿಸಿ ಕೋಳಿ ಎಂದು ಖುಷಿಪಡುತ್ತಾ ಕಬಾಬ್ ಒಂದನ್ನು ಮುರಿದು ಸವಿಯಲು ಮುಂದಾದರು. ಆದರೆ ಅಷ್ಟರಲ್ಲೇ ಇವರಿಗೆ ಕಂಡಿದ್ದು ಕಬಾಬ್ನಲ್ಲಿದ್ದ ಸತ್ತ ಹುಳು. ಶಾಕ್ ಆದ […]

‘ಕೋಳಿಯೊಂದಿಗೇ ಹುಳು ಬಂತು’ ಎಂದ ಹೋಟೆಲ್ ಸಿಬ್ಬಂದಿ: ಜಗಳಕ್ಕಿಳಿದ ಗ್ರಾಹಕರು!
ಸಾಧು ಶ್ರೀನಾಥ್​
|

Updated on:Jun 13, 2020 | 4:01 PM

Share

ದಕ್ಷಿಣ ಕನ್ನಡ: ಏನ್ರೀ, ನೀವು ಕೊಟ್ಟ ಚಿಕನ್ ಕಬಾಬ್​ನಲ್ಲಿ ಹುಳುಗಳಿವೆ ಎಂದು ಗ್ರಾಹಕರ ವಾದ. ಇದರಲ್ಲಿ ನಮ್ಮ ತಪ್ಪೇನಿಲ್ಲ, ಕೋಳಿ ಮಾರಿದವರದ್ದು ತಪ್ಪು ಎಂದು ಹೋಟೆಲ್ ಸಿಬ್ಬಂದಿಯ ಸಮಜಾಯಿಷಿ. ಈ ವಾಗ್ವಾದ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಹೋಟೆಲ್ ಒಂದರಲ್ಲಿ.

ಎಂದಿನಂತೆ ಮಧ್ಯಾಹ್ನ ಊಟಕ್ಕೆ ಹೋಟೆಲಿಗೆ ಬಂದಿದ್ದ ಗ್ರಾಹಕರೊಬ್ಬರು ಚಿಕನ್ ಕಬಾಬ್ ಆರ್ಡರ್ ಮಾಡಿದ್ದರು. ಕಬಾಬ್ ಬರುತ್ತಿದ್ದಂತೆ ಹಸಿದ ಹೊಟ್ಟೆಗೆ ಬಿಸಿಬಿಸಿ ಕೋಳಿ ಎಂದು ಖುಷಿಪಡುತ್ತಾ ಕಬಾಬ್ ಒಂದನ್ನು ಮುರಿದು ಸವಿಯಲು ಮುಂದಾದರು. ಆದರೆ ಅಷ್ಟರಲ್ಲೇ ಇವರಿಗೆ ಕಂಡಿದ್ದು ಕಬಾಬ್ನಲ್ಲಿದ್ದ ಸತ್ತ ಹುಳು. ಶಾಕ್ ಆದ ಗ್ರಾಹಕರು ಇನ್ನೊಂದು ಕಬಾಬ್ ಚೂರನ್ನು ಮುರಿದು ನೋಡಿದಾಗ ಅದರಲ್ಲೂ ಹುಳು ಸಿಗಬೇಕೇ!

ತಪ್ಪು ನಮ್ಮದಲ್ಲ, ಕೋಳಿ ಮಾರಿದವರದ್ದು ಎಂದ ಹೋಟೆಲ್ ಸಿಬ್ಬಂದಿ ಸಿಟ್ಟಾದ ಗ್ರಾಹಕ ಕೂಡಲೇ ಸಪ್ಲೈಯರ್ ಮತ್ತು ಆತನ ಮ್ಯಾನೇಜರ್ರನ್ನು ಕರೆಸಿ ಹುಳುಗಳನ್ನು ತೋರಿಸಿದರು. ಹೋಟೆಲ್ ಸಿಬ್ಬಂದಿಯಿಂದ ‘ಸಾರಿ ಸಾರ್.. ತಪ್ಪಾಯ್ತು.. ಮತ್ತೆ ಹೀಗೆ ಆಗೋದಿಲ್ಲ’ ಅಂತಾ ಉತ್ತರ ಬಯಸುತ್ತಿದ್ದ ಗ್ರಾಹಕನಿಗೆ ‘ಇದರಲ್ಲಿ ನಮ್ಮ ತಪ್ಪೇನಿಲ್ಲ.. ಕೋಳಿ ಮಾರಿದವರದ್ದು ತಪ್ಪು’ ಎಂದು ಹೋಟೆಲ್ ಸಿಬ್ಬಂದಿಯ ಉತ್ತರ ಕೇಳಿದಾಗ ಗ್ರಾಹಕ ಫುಲ್ ಥಂಡಾ. ಒಂದು ಸೆಕೆಂಡ್ ಚೇತರಿಸಿಕೊಂಡ ಗ್ರಾಹಕ ಕೂಡಲೇ ವಾಗ್ವಾದಕ್ಕಿಳಿದರು. ಆದರೆ ಸಿಬ್ಬಂದಿ ಮಾತ್ರ ತಮ್ಮ ವಾದದಿಂದ ಹಿಂದೆ ಸರಿಯಲಿಲ್ಲ. ಕೊನೆಗೂ ಪಟ್ಟು ಬಿಡದ ಗ್ರಾಹಕರು ಬಿಲ್ಕುಲ್ ಬಿಲ್ ಪಾವತಿಸಲ್ಲ ಎಂದು ಹೇಳಿ ಹೊರನಡೆದರು. 

Published On - 4:00 pm, Sat, 13 June 20

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​