ಭಿಕ್ಷೆ ಬೇಡಿ ಜೀವನ ನಿರ್ವಹಿಸ್ತಿದ್ದ ಮಗಳಿಗೆ ಕೊರೊನಾ, ಬೀದಿ ಪಾಲಾದ ತಾಯಿ..

ಕೊಪ್ಪಳ:ಕಿತ್ತು ತಿನ್ನೋ ಬಡತನ, ಯಾರೂ ನೋಡಿಕೊಳ್ಳುವವರಿಲ್ಲದೆ ಅನಾಥರಾಗಿದ್ದ ತಾಯಿ ಮಗಳು ಹೇಗೊ ಭಿಕ್ಷೆ ಬೇಡಿ, ಪ್ಲ್ಯಾಸ್ಟಿಕ್ ಸಂಗ್ರಹಿಸಿ ಜೀವನ ನೆಡೆಸುತ್ತಿದ್ದರು. ಆದರೆ ಈಗ ಮಗಳಿಗೆ ಕೊರೊನಾ ವಕ್ಕರಿಸಿದ್ದು ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವವರಿಲ್ಲದೆ ಅನಾಥೆಯಾಗಿದ್ದಾರೆ. ಮೂಲತಃ ಆಂಧ್ರದವರಾದ ತಾಯಿ ಮಗಳಿಗೆ ಇರಲು ಆಶ್ರಯವಿಲ್ಲದೆ ಆಂಧ್ರದಿಂದ ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮಕ್ಕೆ ವಲಸೆ ಬಂದಿದ್ದರು. ಭಿಕ್ಷೆ ಬೇಡಿ, ಪ್ಲಾಸ್ಟಿಕ್ ಸಂಗ್ರಹಿಸಿ ತಾಯಿಯೊಂದಿಗೆ ಜೀವನ ಮಾಡ್ತಿದ್ದ 19 ವರ್ಷದ ಯುವತಿಗೆ ಕೊರನಾ ಪಾಸಿಟಿವ್ ಬಂದಿದೆ. ಇದರಿಂದ ಯುವತಿ ಆಸ್ಪತ್ರೆ ಸೇರಿದ್ದು, ದುಡಿದು […]

ಭಿಕ್ಷೆ ಬೇಡಿ ಜೀವನ ನಿರ್ವಹಿಸ್ತಿದ್ದ ಮಗಳಿಗೆ ಕೊರೊನಾ, ಬೀದಿ ಪಾಲಾದ ತಾಯಿ..
ಸಾಧು ಶ್ರೀನಾಥ್​

Updated on: Jul 14, 2020 | 3:06 PM

ಕೊಪ್ಪಳ:ಕಿತ್ತು ತಿನ್ನೋ ಬಡತನ, ಯಾರೂ ನೋಡಿಕೊಳ್ಳುವವರಿಲ್ಲದೆ ಅನಾಥರಾಗಿದ್ದ ತಾಯಿ ಮಗಳು ಹೇಗೊ ಭಿಕ್ಷೆ ಬೇಡಿ, ಪ್ಲ್ಯಾಸ್ಟಿಕ್ ಸಂಗ್ರಹಿಸಿ ಜೀವನ ನೆಡೆಸುತ್ತಿದ್ದರು. ಆದರೆ ಈಗ ಮಗಳಿಗೆ ಕೊರೊನಾ ವಕ್ಕರಿಸಿದ್ದು ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವವರಿಲ್ಲದೆ ಅನಾಥೆಯಾಗಿದ್ದಾರೆ.

ಮೂಲತಃ ಆಂಧ್ರದವರಾದ ತಾಯಿ ಮಗಳಿಗೆ ಇರಲು ಆಶ್ರಯವಿಲ್ಲದೆ ಆಂಧ್ರದಿಂದ ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮಕ್ಕೆ ವಲಸೆ ಬಂದಿದ್ದರು. ಭಿಕ್ಷೆ ಬೇಡಿ, ಪ್ಲಾಸ್ಟಿಕ್ ಸಂಗ್ರಹಿಸಿ ತಾಯಿಯೊಂದಿಗೆ ಜೀವನ ಮಾಡ್ತಿದ್ದ 19 ವರ್ಷದ ಯುವತಿಗೆ ಕೊರನಾ ಪಾಸಿಟಿವ್ ಬಂದಿದೆ. ಇದರಿಂದ ಯುವತಿ ಆಸ್ಪತ್ರೆ ಸೇರಿದ್ದು, ದುಡಿದು ಸಾಕುವವರಿಲ್ಲದೆ ವೃದ್ಧೆ ಹಸಿವಿನಿಂದ ನರಳುತ್ತಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನೆಡೆದಿದೆ.

ಭಿಕ್ಷೆ ಬೇಡುತ್ತಿದ್ದ ಯುವತಿಗೆ ಕೊರನಾ ಪಾಸಿಟಿವ್ ಬಂದಿರುವುದರಿಂದ ಈಗ ಆಕೆ ಭಿಕ್ಷೆ ಬೇಡಿದ ಚುಕ್ಕನಕಲ್ ಗ್ರಾಮ ಸೇರಿ ನಾಲ್ಕೈದು ಗ್ರಾಮಗಳಲ್ಲಿ ಕೊರೊನಾ ಭೀತಿ ಎದುರಾಗಿದೆ. ಇಷ್ಟೆ ಅಲ್ಲದೆ ಸೋಂಕಿತೆಯ ತಾಯಿಯನ್ನು ಕ್ವಾರಂಟೈನ್ ಮಾಡದೇ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ ತೋರಿದೆ. ಇದರಿಂದ ಆತಂಕಗೊಂಡಿರುವ ಗ್ರಾಮಸ್ಥರು ವೃದ್ಧೆಯನ್ನು ಗ್ರಾಮದಿಂದ ಹೊರಹೋಗುವಂತೆ ಒತ್ತಾಯ ಮಾಡುತ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us