AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್ DRS ವಿರೋಧಿ, ಯಾಕೆ ಗೊತ್ತಾ?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾರ್ಡನ್ ಕ್ರಿಕೆಟ್​ನ ಎಲ್ಲಾ ತಂತ್ರಜ್ಞಾನವನ್ನೂ ಸ್ವಾಗತಿಸಿದ ಕ್ರಿಕೆಟಿಗ. ಆದ್ರೆ DRS ವಿಚಾರದಲ್ಲಿ ಸಚಿನ್ ಅದೇಕೋ ಮೊದಲಿನಿಂದಲೂ ಅಸಮಾಧಾನ ಹೊಂದಿದ್ರು. ಆದರೆ ಈಗ ಸಚಿನ್ ತಾವ್ಯಾಕೆ DRS ಸಿಸ್ಟಮ್​ನ ವಿರೋಧಿಸ್ತಾರೆ ಅನ್ನೋ ಸಂಗತಿಯನ್ನ ಬಾಯಿಬಿಟ್ಟಿದ್ದಾರೆ. DRSಗೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಜೊತೆ ನಡೆಸಿರುವ ಸಂಭಾಷಣೆಯ ವಿಡಿಯೋವನ್ನು ಸಚಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ DRS ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಚೆಂಡು ಯಾವ ಶೇಕಡಾ […]

ಸಚಿನ್ DRS ವಿರೋಧಿ, ಯಾಕೆ ಗೊತ್ತಾ?
KUSHAL V
|

Updated on:Jul 14, 2020 | 3:14 PM

Share

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾರ್ಡನ್ ಕ್ರಿಕೆಟ್​ನ ಎಲ್ಲಾ ತಂತ್ರಜ್ಞಾನವನ್ನೂ ಸ್ವಾಗತಿಸಿದ ಕ್ರಿಕೆಟಿಗ. ಆದ್ರೆ DRS ವಿಚಾರದಲ್ಲಿ ಸಚಿನ್ ಅದೇಕೋ ಮೊದಲಿನಿಂದಲೂ ಅಸಮಾಧಾನ ಹೊಂದಿದ್ರು. ಆದರೆ ಈಗ ಸಚಿನ್ ತಾವ್ಯಾಕೆ DRS ಸಿಸ್ಟಮ್​ನ ವಿರೋಧಿಸ್ತಾರೆ ಅನ್ನೋ ಸಂಗತಿಯನ್ನ ಬಾಯಿಬಿಟ್ಟಿದ್ದಾರೆ.

DRSಗೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಜೊತೆ ನಡೆಸಿರುವ ಸಂಭಾಷಣೆಯ ವಿಡಿಯೋವನ್ನು ಸಚಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ DRS ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ.

ಚೆಂಡು ಯಾವ ಶೇಕಡಾ ಆಧಾರದಲ್ಲಿ ಸ್ಟಂಪ್​ಗೆ ಬಡಿಯಿತು ಅನ್ನೋದು ಮುಖ್ಯವಲ್ಲ. DRS​ನಲ್ಲಿ ಬಾಲ್ ಸ್ಟಂಪ್​ಗೆ ಬಡಿದಿದ್ದು ಕಂಡುಬಂದರೆ ಆನ್ ಫೀಲ್ಡ್ ಅಂಪೈರ್ DRS ತೆಗೆದುಕೊಳ್ಳದೆ ಬ್ಯಾಟ್ಸ್​ಮನ್ ಔಟ್ ಆಗಿದ್ದಾನೆ ಎಂದು ತೀರ್ಪು ನೀಡಬೇಕು. DRS​ನಲ್ಲಿ ಈ ಬದಲಾವಣೆಯನ್ನು ತಂದರೆ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿದಂತಾಗುತ್ತದೆ. ಮನುಷ್ಯರಂತೆ ತಂತ್ರಜ್ಞಾನವೂ ಯಾವಾಗಲೂ ಕರೆಕ್ಟ್​​​ ಆಗಿರಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ. ಈ ಪರಿಕಲ್ಪನೆ ದೋಷಪೂರಿತವಾಗಿದೆ ಎಂದಿದ್ದಾರೆ. ICCಯೊಂದಿಗೆ ನಾನು ಒಪ್ಪದ ವಿಷಯದಲ್ಲಿ ಅದೂ ಇದೆ ಎಂದು ಬ್ರಿಯಾನ್ ಲಾರಾ ಬಳಿ ಸಚಿನ್ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ.

ಈ DRS ಅಂದ್ರೆ ಏನು? DRS ಅಂದ್ರೆ ಡಿಸೀಷನ್ ರಿವ್ಯೂ ಸಿಸ್ಟಮ್. ಬ್ಯಾಟ್ಸ್​ಮನ್​ ಔಟ್​ ಆಗಿದ್ದಾನೋ ಅನ್ನೋ ಅನುಮಾನವನ್ನ ಪರಿಹರಿಸಿಕೊಳ್ಳೋದಕ್ಕೆ ಈ ತಂತ್ರಜ್ಞಾನವನ್ನ ಬಳಸಿಕೊಳ್ಳಲಾಗುತ್ತೆ. LBW ಸಮಯದಲ್ಲಿ ಬಾಲ್ ಶೇಕಡಾ 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸ್ಟಂಪ್​ಗೆ ಬಡಿದಿದ್ರೆ, ಆಗ ಡಿಸೀಷನ್ ರಿವ್ಯೂ ಸಿಸ್ಟಮ್ ಅನ್ನ ಬಳಸಿಕೊಳ್ಳಲಾಗುತ್ತೆ. ಆದ್ರೆ ಇದರಿಂದ ಅನರ್ಥಗಳಾಗೋದೇ ಹೆಚ್ಚು ಅನ್ನೋದು ಸಚಿನ್ ವಾದ. ಸಚಿನ್ ಹೇಳಿರೋದ್ರಲ್ಲಿ ತಪ್ಪೇನು ಇಲ್ಲ. ಆಗಾಗ DRSಬಳಸಿ ಉಂಟಾಗೋ ಲೋಪಗಳಿಂದ ಮ್ಯಾಚ್​​ಗಳಲ್ಲಿ ವಿವಾದಗಳು ಆಗ್ತಾನೇ ಇರುತ್ತೆ.

Published On - 3:13 pm, Tue, 14 July 20

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್