ಟಿ20 ಕ್ರಿಕೆಟ್​ ಒಲಂಪಿಕ್ ಕ್ರೀಡೆ ಯಾಕಾಗಬಾರದು? ರಾಹುಲ್ ದ್ರಾವಿಡ್ : Dravid bats for T20 Cricket to be Olympic sport

ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಬ್ಯಾಟ್​ ಮಾಡುವಾಗ ಹೇಗೆ ಸ್ಟ್ರೇಟ್​ಬ್ಯಾಟ್ ಉಪಯೋಗಿಸುತ್ತಿದರೋ ಅವರ ಮಾತುಗಳು ಸ್ಟ್ರೇಟ್ ಫಾರ್ವರ್ಡ್. ನೇರ ಮಾತು ಮತ್ತು ಯಾವುದೇ ವಿಷಯವನ್ನು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನ ಅವರದ್ದು. ದ್ರಾವಿಡ್ ಸಕ್ರಿಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದರೂ ಕ್ರೀಡೆಗೆ ಹಲವಾರು ವಿಧಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕೋಚ್ ಆಗಿ, ಐಪಿಎಲ್ ಟೀಮುಗಳಿಗೆ ಮೆಂಟರ್ ಅಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ವಿಷಯವಾಗಿ ಮಾತಾಡುತ್ತಿರುವುದಕ್ಕೆ ಕಾರಣಗಳೇ ಬೇಕಿಲ್ಲ. ಅದಕ್ಕೆ ಬೇಕಾದಷ್ಟು ಸರಕು ನಮಗೆ ಸಿಗುತ್ತದೆ. ಈಗಿನ […]

ಟಿ20 ಕ್ರಿಕೆಟ್​ ಒಲಂಪಿಕ್ ಕ್ರೀಡೆ ಯಾಕಾಗಬಾರದು? ರಾಹುಲ್ ದ್ರಾವಿಡ್ : Dravid bats for T20 Cricket to be Olympic sport
ಅರುಣ್​ ಕುಮಾರ್​ ಬೆಳ್ಳಿ

Updated on: Nov 13, 2020 | 10:38 PM

ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಬ್ಯಾಟ್​ ಮಾಡುವಾಗ ಹೇಗೆ ಸ್ಟ್ರೇಟ್​ಬ್ಯಾಟ್ ಉಪಯೋಗಿಸುತ್ತಿದರೋ ಅವರ ಮಾತುಗಳು ಸ್ಟ್ರೇಟ್ ಫಾರ್ವರ್ಡ್. ನೇರ ಮಾತು ಮತ್ತು ಯಾವುದೇ ವಿಷಯವನ್ನು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನ ಅವರದ್ದು.

ದ್ರಾವಿಡ್ ಸಕ್ರಿಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದರೂ ಕ್ರೀಡೆಗೆ ಹಲವಾರು ವಿಧಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕೋಚ್ ಆಗಿ, ಐಪಿಎಲ್ ಟೀಮುಗಳಿಗೆ ಮೆಂಟರ್ ಅಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅವರ ವಿಷಯವಾಗಿ ಮಾತಾಡುತ್ತಿರುವುದಕ್ಕೆ ಕಾರಣಗಳೇ ಬೇಕಿಲ್ಲ. ಅದಕ್ಕೆ ಬೇಕಾದಷ್ಟು ಸರಕು ನಮಗೆ ಸಿಗುತ್ತದೆ. ಈಗಿನ ಸಂದರ್ಭವೇನೆಂದರೆ. ಟಿ20 ಕ್ರಿಕೆಟನ್ನು ಒಲಂಪಿಕ್ಸ್​ಗೆ ಸೇರಿಸಬೇಕೆಂದು ದ್ರಾವಿಡ್ ವಾದಿಸುತ್ತಿದ್ದಾರೆ.

ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯ ಮಾಲೀಕರಲ್ಲೊಬ್ಬರಾಗಿರುವ ಮನೋಜ್ ಬದಾಲೆ ಅವರ, ‘ಎ ನ್ಯೂ ಇನ್ನಿಂಗ್ಸ್’ ಪುಸ್ತಕ ಲಾಂಚಿನ ವರ್ಚುಅಲ್ ಸೆಮಿನಾರ್​ನಲ್ಲಿ ಭಾಗವಹಿಸಿದ್ದ ದ್ರಾವಿಡ್, ‘ಟಿ20 ಫಾರ್ಮಾಟ್ ಕ್ರಿಕೆಟ್ ಒಲಂಪಿಕ್ಸ್​ನಲ್ಲಿ ಒಂದು ಕ್ರೀಡೆಯಾಗಿ ಸೇರ್ಪಡೆಯಾದರೆ ಅದಕ್ಕಿಂತ ಸಂತೋಷ ಮತ್ತೇನಿದೆ? ಆದರೆ, ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಅದಕ್ಕೇ ಆದ ಸವಾಲುಗಳಿವೆ. ಅದಕ್ಕೆ ನಿರ್ದಿಷ್ಟವಾದ ಕೆಲ ಸೌಲಭ್ಯಗಳು ಬೇಕಾಗುತ್ತವೆ,’ ಎಂದು ದ್ರಾವಿಡ್ ಹೇಳಿದರು.

ಮೊನ್ನೆಯಷ್ಟೇ ಸಂಪನ್ನಗೊಂಡ ಐಪಿಎಲ್ ಟೂರ್ನಿಯ ಅಭೂತಪೂರ್ವ ಯಶಸ್ಸಿಗೆ ಕ್ವಾಲಿಟಿ ಪಿಚ್​ಗಳೇ ಕಾರಣವೆಂದು ದ್ರಾವಿಡ್ ಹೇಳಿದರು.

‘‘ಈ ಸಲದ ಐಪಿಎಲ್ ಭರ್ಜರಿ ಯಶ ಕಂಡಿದ್ದು ಬಹಳ ಸಂತೋಷವಾಗಿದೆ. ಈ ಪ್ರಮಾಣದ ಯಶಸ್ಸು ಅದು ಕಾಣಲು ಸಾಧ್ಯವಾಗಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿನ ಕ್ವಾಲಿಟಿ ಪಿಚ್​ಗಳಿಂದ. ಸ್ವಲ್ಪ ಯೋಚಿಸಿ ನೋಡಿ, ಯುಎಈಯಂಥ ಪಿಚ್​ಗಳನ್ನು ಒಲಂಪಿಕ್ಸ್ ಆಯೋಜಿಸುವ ದೇಶ ಒದಗಿಸಬಹುದಾದರೆ, ಕ್ರಿಕೆಟ್ ಅನ್ನು ಯಾಕೆ ಸೇರಿಸಬಾರದು? ಕ್ರಿಕೆಟ್ ಹಾಗೆ ವಿಸ್ತರಣೆಯಾಗುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ಕ್ರಿಕೆಟ್​ಗೆ ಸಂಬಂಧಪಟ್ಟವರು, ಅದರ ಆಡಳಿತದಲ್ಲಿರುವವರು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡಬೇಕು,’’ ಎಂದು ದ್ರಾವಿಡ್ ಹೇಳಿದರು.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us