AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ!

ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾದ ಬಳಿಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಫಾರ್ಮ್ ಹೌಸ್​ನಲ್ಲಿ ಕೃಷಿ ಮಾಡೋದ್ರಲ್ಲಿ ಬ್ಯುಸಿಯಾಗಿರೋದು ನಿಮಗೆ ಗೊತ್ತಿರೋ ಸಂಗತಿ. 2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ! ಐಪಿಎಲ್ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಧೋನಿ ತಮ್ಮ ಫಾರ್ಮ್ ಹೌಸ್​ನಲ್ಲಿ ಖಡಕ್​ನಾಥ್ ತಳಿಯ ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಧೋನಿ ರಾಂಚಿಯಲ್ಲಿರೋ ತಮ್ಮ ಫಾರ್ಮ್ ಹೌಸ್​ನಲ್ಲಿರೋ ಫಾರಂಗೆ ಬರೊಬ್ಬರಿ 2 ಸಾವಿರ ಖಡಕನಾಥ್ ಕೋಳಿಗಳನ್ನ ಆರ್ಡರ್ ಮಾಡಿದ್ದಾರೆ. ಖಡಕ್​ನಾಥ್.. ಈ ಕೋಳಿಯ ಹೆಸರಲ್ಲೇ […]

2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ!
ಆಯೇಷಾ ಬಾನು
|

Updated on: Nov 14, 2020 | 7:06 AM

Share

ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾದ ಬಳಿಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಫಾರ್ಮ್ ಹೌಸ್​ನಲ್ಲಿ ಕೃಷಿ ಮಾಡೋದ್ರಲ್ಲಿ ಬ್ಯುಸಿಯಾಗಿರೋದು ನಿಮಗೆ ಗೊತ್ತಿರೋ ಸಂಗತಿ.

2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ! ಐಪಿಎಲ್ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಧೋನಿ ತಮ್ಮ ಫಾರ್ಮ್ ಹೌಸ್​ನಲ್ಲಿ ಖಡಕ್​ನಾಥ್ ತಳಿಯ ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಧೋನಿ ರಾಂಚಿಯಲ್ಲಿರೋ ತಮ್ಮ ಫಾರ್ಮ್ ಹೌಸ್​ನಲ್ಲಿರೋ ಫಾರಂಗೆ ಬರೊಬ್ಬರಿ 2 ಸಾವಿರ ಖಡಕನಾಥ್ ಕೋಳಿಗಳನ್ನ ಆರ್ಡರ್ ಮಾಡಿದ್ದಾರೆ.

ಖಡಕ್​ನಾಥ್.. ಈ ಕೋಳಿಯ ಹೆಸರಲ್ಲೇ ಏನೋ ಖದರ್ ಇದೆ ಅನ್ನಿಸುತ್ತೆ. ಅದು ನಿಜ ಕೂಡ ಹೌದು. ಈ ಖಡಕ್​ನಾಥ್ ಕೋಳಿಯಲ್ಲಿರೋ ವಿಶೇಷತೆಯೇ, ಮಹೇಂದ್ರ ಸಿಂಗ್ ಧೋನಿ ಮನಸ್ಸು ಸೂರೆಗೊಳ್ಳೊ ಹಾಗೇ ಮಾಡಿದ್ದು. ಇದೇ ಕಾರಣಕ್ಕೆ ಮಾಹಿ, ರಾಂಚಿಯಲ್ಲಿರೋ ತಮ್ಮ ಫಾರ್ಮ್ ಹೌಸ್​ಗೆ ಈ ಕಪ್ಪು ಸುಂದರಿಯನ್ನ ಕರೆ ತರೋದಕ್ಕೆ ಮುಂದಾಗಿದ್ದಾರೆ.

ಕಳೆದ ಕೆಲವು ತಿಂಗಳಿಂದ ಧೋನಿ ಈ ಖಡಕ್​ನಾಥ್ ತಳಿಯ ಕೋಳಿಗಳ ಬಗ್ಗೆ, ತಮ್ಮ ಗೆಳೆಯರ ಬಳಿ ಕೇಳಿ ತಿಳಿದುಕೊಳ್ತಾ ಇದ್ರು. ಈ ಕೋಳಿಯ ವಿಶೇಷತೆಗೆ ಮನಸೋತ ಮಾಹಿ, ತನ್ನ ಫಾರ್ಮ್ ಹೌಸ್​ನಲ್ಲೂ ಖಡಕ್​ನಾಥ್ ಕೋಳಿಗಳನ್ನ ಸಾಕಬೇಕು ಅಂತಾ ಮನಸ್ಸು ಮಾಡಿದ್ದಾರೆ. ಹೀಗೆ ಮನಸ್ಸು ಮಾಡಿದ್ದೇ ತಡ ಮಾಹಿ ಮದ್ಯಪ್ರದೇಶದ ಜಬುವಾದಲ್ಲಿರೋ ಖಡಕನಾಥ್ ತಳಿಯ ಸಾಕಾಣಿಕಾ ಕೇಂದ್ರವನ್ನ ಸಂಪರ್ಕಿಸಿ 2 ಸಾವಿರ ಕೋಳಿಗಳನ್ನ ಆರ್ಡರ್ ಮಾಡಿದ್ದಾರೆ.

ಮುಂದಿನ ತಿಂಗಳೇ ಧೋನಿ ಫಾರ್ಮ್​ಹೌಸ್​ಗೆ ಈ 2 ಸಾವಿರ ಖಡಕ್​ನಾಥ್ ತಳಿಯ ಕೋಳಿಗಳು ತಲುಪಲಿವೆ. ಖಡಕ್​ನಾಥ್ ಕೋಳಿ ಸಾಕಾಣಿಕೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಧೋನಿ ತಮ್ಮ ಫಾರ್ಮ್ ಹೌಸ್​ನಲ್ಲಿ ಮಾಡಿಕೊಂಡಿದ್ದಾರೆ.

ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್