ಕುಡಿದ ಮತ್ತಿನಲ್ಲಿ ಹಾವನ್ನು ಕತ್ತಿಗೆ ಸುತ್ತಿಕೊಂಡು ಕುಡುಕ ಮಾಡಿದ್ದೇನು?

ಕೋಲಾರ: ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಖುಷಿಯಲ್ಲಿ ಕುಡುಕರು ಮಾಡುವ ಅವಾಂತರಗಳು ಒಂದಾ ಎರಡಾ? ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಹಾವನ್ನ ಕುಡುಕನೊಬ್ಬ ಹಿಡಿದು ಕತ್ತಿಗೆ ಸುತ್ತಿಕೊಂಡಿರುವ ಘಟನೆ ನಡೆದಿದೆ. ಮುಷ್ಟೂರು ಗ್ರಾಮದ ಕುಮಾರ್ ಎಂಬಾತ ಎಣ್ಣೆ ಮತ್ತಲ್ಲಿ ಹಾವನ್ನು ಹಿಡಿದುಕೊಂಡು ಬಾಯಿಂದ ಕಚ್ಚಿ ಕಚ್ಚಿ ಸಾಯಿಸಿದ್ದಾನೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕುಡಿದ ಮತ್ತಿನಲ್ಲಿ ಹಾವನ್ನು ಕತ್ತಿಗೆ ಸುತ್ತಿಕೊಂಡು ಕುಡುಕ ಮಾಡಿದ್ದೇನು?
ಸಾಧು ಶ್ರೀನಾಥ್​

Updated on: May 05, 2020 | 1:12 PM

ಕೋಲಾರ: ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಖುಷಿಯಲ್ಲಿ ಕುಡುಕರು ಮಾಡುವ ಅವಾಂತರಗಳು ಒಂದಾ ಎರಡಾ? ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಹಾವನ್ನ ಕುಡುಕನೊಬ್ಬ ಹಿಡಿದು ಕತ್ತಿಗೆ ಸುತ್ತಿಕೊಂಡಿರುವ ಘಟನೆ ನಡೆದಿದೆ.

ಮುಷ್ಟೂರು ಗ್ರಾಮದ ಕುಮಾರ್ ಎಂಬಾತ ಎಣ್ಣೆ ಮತ್ತಲ್ಲಿ ಹಾವನ್ನು ಹಿಡಿದುಕೊಂಡು ಬಾಯಿಂದ ಕಚ್ಚಿ ಕಚ್ಚಿ ಸಾಯಿಸಿದ್ದಾನೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Loading...
Unable to load recommendations.
Follow Us