AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಿಂದ ಬಂದ 30 ಜನ ಕ್ವಾರಂಟೈನ್ ಆಗದೆ ಎಸ್ಕೇಪ್, ಎಲ್ಲೆಲ್ಲಿಗೆ ಪರಾರಿಯಾದ್ರು ಗೊತ್ತಾ?

ದಕ್ಷಿಣ ಕನ್ನಡ: ದುಬೈನಿಂದ ಭಾರತಕ್ಕೆ ಹಿಂದರುಗಿದ ರಾಜ್ಯದ 30 ಜನರು ಕ್ವಾರಂಟೈನ್ ಆಗದೆ ಎಸ್ಕೇಪ್ ಆಗಿರುವ ಘಟನೆ ನೆರೆ ರಾಜ್ಯ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ತಪ್ಪಿಸಿಕೊಂಡವರು ಕೊಡಗು ಹಾಗೂ ಮಂಗಳೂರಿನತ್ತ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೊಡಗು ಹಾಗೂ ಮಂಗಳೂರಿನಲ್ಲಿ ಆತಂಕ ಶುರುವಾಗಿದೆ. ದುಬೈನಲ್ಲಿ ಸಿಲುಕಿಕೊಂಡಿದ್ದ 180 ಕನ್ನಡಿಗರ ತಂಡವೊಂದು ಖಾಸಗಿ ವಿಮಾನದಲ್ಲಿ ಭಾರತಕ್ಕೆ ಮೊನ್ನೆ ಬಂದಿಳಿದಿದ್ದರು. ಕರ್ನಾಟಕದಲ್ಲಿ ಲ್ಯಾಂಡ್​ ಮಾಡಲು ಅನುಮತಿ ಸಿಗದ ಕಾರಣ ಕೇರಳದ ಕಣ್ಣೂರಿಗೆ ಬಂದಿಳಿದಿದ್ದರು. ವಿದೇಶದಿಂದ ಮರಳಿದವರು ಎಂಬ ಕಾರಣದಿಂದ ಅವರನ್ನು […]

ದುಬೈನಿಂದ ಬಂದ 30 ಜನ ಕ್ವಾರಂಟೈನ್ ಆಗದೆ ಎಸ್ಕೇಪ್, ಎಲ್ಲೆಲ್ಲಿಗೆ ಪರಾರಿಯಾದ್ರು ಗೊತ್ತಾ?
KUSHAL V
|

Updated on:Jun 29, 2020 | 9:36 AM

Share

ದಕ್ಷಿಣ ಕನ್ನಡ: ದುಬೈನಿಂದ ಭಾರತಕ್ಕೆ ಹಿಂದರುಗಿದ ರಾಜ್ಯದ 30 ಜನರು ಕ್ವಾರಂಟೈನ್ ಆಗದೆ ಎಸ್ಕೇಪ್ ಆಗಿರುವ ಘಟನೆ ನೆರೆ ರಾಜ್ಯ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ತಪ್ಪಿಸಿಕೊಂಡವರು ಕೊಡಗು ಹಾಗೂ ಮಂಗಳೂರಿನತ್ತ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೊಡಗು ಹಾಗೂ ಮಂಗಳೂರಿನಲ್ಲಿ ಆತಂಕ ಶುರುವಾಗಿದೆ.

ದುಬೈನಲ್ಲಿ ಸಿಲುಕಿಕೊಂಡಿದ್ದ 180 ಕನ್ನಡಿಗರ ತಂಡವೊಂದು ಖಾಸಗಿ ವಿಮಾನದಲ್ಲಿ ಭಾರತಕ್ಕೆ ಮೊನ್ನೆ ಬಂದಿಳಿದಿದ್ದರು. ಕರ್ನಾಟಕದಲ್ಲಿ ಲ್ಯಾಂಡ್​ ಮಾಡಲು ಅನುಮತಿ ಸಿಗದ ಕಾರಣ ಕೇರಳದ ಕಣ್ಣೂರಿಗೆ ಬಂದಿಳಿದಿದ್ದರು. ವಿದೇಶದಿಂದ ಮರಳಿದವರು ಎಂಬ ಕಾರಣದಿಂದ ಅವರನ್ನು ಕಾಸರಗೋಡಿನಲ್ಲಿ ಕ್ವಾರಂಟೈನ್ ಆಗಲು ಸೂಚಿಸಲಾಗಿತ್ತು. ಆದರೆ, ಅದರಲ್ಲಿ ಕೆಲವರು ಸೇವಾ ಸಿಂಧು ಌಪ್​ನಲ್ಲಿ ತಮ್ಮನ್ನು ನೋಂದಾಯಿಸಿಕೊಂಡು ಕಾಸರಗೋಡಿನಲ್ಲಿ ಕ್ವಾರಂಟೈನ್ ಆಗದೆ ಸೀದಾ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

30 ಜನರ ಪೈಕಿ 20 ಜನ ಕೊಡಗಿಗೆ, 10 ಜನ ಮಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಖಾಸಗಿ ವಿಮಾನದ ವ್ಯವಸ್ಥೆ ಮಾಡಿದ್ದ ಕಂಪನಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗಿದೆ.

ಉಳಿದ ಕನ್ನಡಿಗರ ನೆರವಿಗೆ ಬಂದ ಶಾಸಕ ಖಾದರ್ ಈ ಮಧ್ಯೆ ಕೇರಳದಲ್ಲಿ ಸಿಲುಕಿಕೊಂಡಿದ್ದ ಉಳಿದ ದುಬೈ ಕನ್ನಡಿಗರ ನೆರವಿಗೆ ಶಾಸಕ ಯು.ಟಿ.ಖಾದರ್‌ ಮುಂದಾದರು. ಅಗತ್ಯ ಸುರಕ್ಷತೆ ಇಲ್ಲದ ಕಾರಣ ಉಳಿದ ಕನ್ನಡಿಗರು ಕಾಸರಗೋಡಿನ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆಗಲು ನಿರಾಕರಿಸಿದ್ದರು. ಹೀಗಾಗಿ ಮಂಗಳೂರಿಗೆ ತೆರಳುವಂತೆ ಸೂಚಿಸಿದ ಕಾಸರಗೋಡು ಜಿಲ್ಲಾಡಳಿತ ಬಸ್​ಗಳ ವ್ಯವಸ್ಥೆ ಮಾಡಿತ್ತು. ಆದ್ರೆ ಕರ್ನಾಟಕಕ್ಕೆ ಬರಲು ಅನುಮತಿಯಿಲ್ಲದ ಕಾರಣ ಪರದಾಡುತ್ತಿದ್ದವರಿಗೆ ಶಾಸಕ ಖಾದರ್‌ ಸೂಕ್ತ ವ್ಯವಸ್ಥೆ ಕಲ್ಪಿಸಿ ಮಂಗಳೂರಿನ 3 ಹೋಟೆಲ್‌ಗಳಲ್ಲಿ ಕ್ವಾರಂಟೈನ್​ ಆಗಲು ಅನುಕೂಲ ಮಾಡಿಕೊಟ್ಟಿದ್ದಾರೆ.

Published On - 9:31 am, Mon, 29 June 20

Follow Us
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?