AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಿಂದ ಬಂದ 30 ಜನ ಕ್ವಾರಂಟೈನ್ ಆಗದೆ ಎಸ್ಕೇಪ್, ಎಲ್ಲೆಲ್ಲಿಗೆ ಪರಾರಿಯಾದ್ರು ಗೊತ್ತಾ?

ದಕ್ಷಿಣ ಕನ್ನಡ: ದುಬೈನಿಂದ ಭಾರತಕ್ಕೆ ಹಿಂದರುಗಿದ ರಾಜ್ಯದ 30 ಜನರು ಕ್ವಾರಂಟೈನ್ ಆಗದೆ ಎಸ್ಕೇಪ್ ಆಗಿರುವ ಘಟನೆ ನೆರೆ ರಾಜ್ಯ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ತಪ್ಪಿಸಿಕೊಂಡವರು ಕೊಡಗು ಹಾಗೂ ಮಂಗಳೂರಿನತ್ತ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೊಡಗು ಹಾಗೂ ಮಂಗಳೂರಿನಲ್ಲಿ ಆತಂಕ ಶುರುವಾಗಿದೆ. ದುಬೈನಲ್ಲಿ ಸಿಲುಕಿಕೊಂಡಿದ್ದ 180 ಕನ್ನಡಿಗರ ತಂಡವೊಂದು ಖಾಸಗಿ ವಿಮಾನದಲ್ಲಿ ಭಾರತಕ್ಕೆ ಮೊನ್ನೆ ಬಂದಿಳಿದಿದ್ದರು. ಕರ್ನಾಟಕದಲ್ಲಿ ಲ್ಯಾಂಡ್​ ಮಾಡಲು ಅನುಮತಿ ಸಿಗದ ಕಾರಣ ಕೇರಳದ ಕಣ್ಣೂರಿಗೆ ಬಂದಿಳಿದಿದ್ದರು. ವಿದೇಶದಿಂದ ಮರಳಿದವರು ಎಂಬ ಕಾರಣದಿಂದ ಅವರನ್ನು […]

ದುಬೈನಿಂದ ಬಂದ 30 ಜನ ಕ್ವಾರಂಟೈನ್ ಆಗದೆ ಎಸ್ಕೇಪ್, ಎಲ್ಲೆಲ್ಲಿಗೆ ಪರಾರಿಯಾದ್ರು ಗೊತ್ತಾ?
KUSHAL V
|

Updated on:Jun 29, 2020 | 9:36 AM

Share

ದಕ್ಷಿಣ ಕನ್ನಡ: ದುಬೈನಿಂದ ಭಾರತಕ್ಕೆ ಹಿಂದರುಗಿದ ರಾಜ್ಯದ 30 ಜನರು ಕ್ವಾರಂಟೈನ್ ಆಗದೆ ಎಸ್ಕೇಪ್ ಆಗಿರುವ ಘಟನೆ ನೆರೆ ರಾಜ್ಯ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ತಪ್ಪಿಸಿಕೊಂಡವರು ಕೊಡಗು ಹಾಗೂ ಮಂಗಳೂರಿನತ್ತ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೊಡಗು ಹಾಗೂ ಮಂಗಳೂರಿನಲ್ಲಿ ಆತಂಕ ಶುರುವಾಗಿದೆ.

ದುಬೈನಲ್ಲಿ ಸಿಲುಕಿಕೊಂಡಿದ್ದ 180 ಕನ್ನಡಿಗರ ತಂಡವೊಂದು ಖಾಸಗಿ ವಿಮಾನದಲ್ಲಿ ಭಾರತಕ್ಕೆ ಮೊನ್ನೆ ಬಂದಿಳಿದಿದ್ದರು. ಕರ್ನಾಟಕದಲ್ಲಿ ಲ್ಯಾಂಡ್​ ಮಾಡಲು ಅನುಮತಿ ಸಿಗದ ಕಾರಣ ಕೇರಳದ ಕಣ್ಣೂರಿಗೆ ಬಂದಿಳಿದಿದ್ದರು. ವಿದೇಶದಿಂದ ಮರಳಿದವರು ಎಂಬ ಕಾರಣದಿಂದ ಅವರನ್ನು ಕಾಸರಗೋಡಿನಲ್ಲಿ ಕ್ವಾರಂಟೈನ್ ಆಗಲು ಸೂಚಿಸಲಾಗಿತ್ತು. ಆದರೆ, ಅದರಲ್ಲಿ ಕೆಲವರು ಸೇವಾ ಸಿಂಧು ಌಪ್​ನಲ್ಲಿ ತಮ್ಮನ್ನು ನೋಂದಾಯಿಸಿಕೊಂಡು ಕಾಸರಗೋಡಿನಲ್ಲಿ ಕ್ವಾರಂಟೈನ್ ಆಗದೆ ಸೀದಾ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

30 ಜನರ ಪೈಕಿ 20 ಜನ ಕೊಡಗಿಗೆ, 10 ಜನ ಮಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಖಾಸಗಿ ವಿಮಾನದ ವ್ಯವಸ್ಥೆ ಮಾಡಿದ್ದ ಕಂಪನಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗಿದೆ.

ಉಳಿದ ಕನ್ನಡಿಗರ ನೆರವಿಗೆ ಬಂದ ಶಾಸಕ ಖಾದರ್ ಈ ಮಧ್ಯೆ ಕೇರಳದಲ್ಲಿ ಸಿಲುಕಿಕೊಂಡಿದ್ದ ಉಳಿದ ದುಬೈ ಕನ್ನಡಿಗರ ನೆರವಿಗೆ ಶಾಸಕ ಯು.ಟಿ.ಖಾದರ್‌ ಮುಂದಾದರು. ಅಗತ್ಯ ಸುರಕ್ಷತೆ ಇಲ್ಲದ ಕಾರಣ ಉಳಿದ ಕನ್ನಡಿಗರು ಕಾಸರಗೋಡಿನ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆಗಲು ನಿರಾಕರಿಸಿದ್ದರು. ಹೀಗಾಗಿ ಮಂಗಳೂರಿಗೆ ತೆರಳುವಂತೆ ಸೂಚಿಸಿದ ಕಾಸರಗೋಡು ಜಿಲ್ಲಾಡಳಿತ ಬಸ್​ಗಳ ವ್ಯವಸ್ಥೆ ಮಾಡಿತ್ತು. ಆದ್ರೆ ಕರ್ನಾಟಕಕ್ಕೆ ಬರಲು ಅನುಮತಿಯಿಲ್ಲದ ಕಾರಣ ಪರದಾಡುತ್ತಿದ್ದವರಿಗೆ ಶಾಸಕ ಖಾದರ್‌ ಸೂಕ್ತ ವ್ಯವಸ್ಥೆ ಕಲ್ಪಿಸಿ ಮಂಗಳೂರಿನ 3 ಹೋಟೆಲ್‌ಗಳಲ್ಲಿ ಕ್ವಾರಂಟೈನ್​ ಆಗಲು ಅನುಕೂಲ ಮಾಡಿಕೊಟ್ಟಿದ್ದಾರೆ.

Published On - 9:31 am, Mon, 29 June 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್