AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗಾದೇವಿ ಜಾತ್ರೆಯಲ್ಲಿ ಕೋಳಿಗಳ ದರ್ಬಾರ್: ಇಂದು ಡಿಕೆಶಿ ಭೇಟಿ!

ಯಾದಗಿರಿ: ಜಾತ್ರೆ ಅಂದ್ರೆ ಸುತ್ತಮುತ್ತಲ ಜನರಿಗೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತೆ. ಯಾದಗಿರಿಯಲ್ಲೂ ನಡೆದ ದುರ್ಗಾದೇವಿ ಜಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಮೈತುಂಬಾ ಭಕ್ತಿಯ ಭಂಡಾರ.. ಹೆಜ್ಜೆ ಹೆಜ್ಜೆಗೂ ಚೆಲ್ಲಿರೋ ಅರಿಶಿನ ಕುಂಕುಮ. ದೇವರಧ್ಯಾನದಲ್ಲಿ ಮುಳುಗಿರೋ ಭಕ್ತಸಾಗರ. ನೋಡ ನೋಡುತ್ತಲೇ ಜನರ ನಡುವೆ ದೇವರ ಪಲ್ಲಕ್ಕಿ ಸಾಗಿ ಬಂದಿತ್ತು. ಕೇಕೆ ಶಿಳ್ಳೆ ಮೂಲಕ ಜನ ಕೂಡ ಅಬ್ಬರಿಸಿದ್ರು. ಜಾತ್ರೆ ಅಂದ್ಮೇಲೆ ಇಷ್ಟೊಂದ್ ಜೋಶ್ ಇರ್ಲೇಬೇಕು ಬಿಡಿ. ಬಟ್ ಅದಕ್ಕಿಂತ ಇಲ್ಲಿ ಸ್ಪೆಷಲ್ […]

ದುರ್ಗಾದೇವಿ ಜಾತ್ರೆಯಲ್ಲಿ ಕೋಳಿಗಳ ದರ್ಬಾರ್: ಇಂದು ಡಿಕೆಶಿ ಭೇಟಿ!
ಸಾಧು ಶ್ರೀನಾಥ್​
|

Updated on:Jan 29, 2020 | 9:04 AM

Share

ಯಾದಗಿರಿ: ಜಾತ್ರೆ ಅಂದ್ರೆ ಸುತ್ತಮುತ್ತಲ ಜನರಿಗೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತೆ. ಯಾದಗಿರಿಯಲ್ಲೂ ನಡೆದ ದುರ್ಗಾದೇವಿ ಜಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

ಮೈತುಂಬಾ ಭಕ್ತಿಯ ಭಂಡಾರ.. ಹೆಜ್ಜೆ ಹೆಜ್ಜೆಗೂ ಚೆಲ್ಲಿರೋ ಅರಿಶಿನ ಕುಂಕುಮ. ದೇವರಧ್ಯಾನದಲ್ಲಿ ಮುಳುಗಿರೋ ಭಕ್ತಸಾಗರ. ನೋಡ ನೋಡುತ್ತಲೇ ಜನರ ನಡುವೆ ದೇವರ ಪಲ್ಲಕ್ಕಿ ಸಾಗಿ ಬಂದಿತ್ತು. ಕೇಕೆ ಶಿಳ್ಳೆ ಮೂಲಕ ಜನ ಕೂಡ ಅಬ್ಬರಿಸಿದ್ರು. ಜಾತ್ರೆ ಅಂದ್ಮೇಲೆ ಇಷ್ಟೊಂದ್ ಜೋಶ್ ಇರ್ಲೇಬೇಕು ಬಿಡಿ. ಬಟ್ ಅದಕ್ಕಿಂತ ಇಲ್ಲಿ ಸ್ಪೆಷಲ್ ಅಂದ್ರೆ ಇದೇ ಕೊಕ್ಕೊಕ್ಕೋ ಕೋಳಿಗಳು. ಖಡಕ್ ಹುಂಜದಿಂದ ಹಿಡ್ದು ಗುಂಡು ಗುಂಡು ಕೋಳಿಗಳವರೆಗೂ ಎಲ್ರ ಕೈಯಲ್ಲೂ ಕೋಳಿಗಳದ್ದೇ ದರ್ಬಾರ್.

ಕೋಳಿಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆ ತೀರಿಸಿದ ಭಕ್ತರು: ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಗೋನಾಳ್ ಗ್ರಾಮದ ಗಡ್ಡೆ ದುರ್ಗಾದೇವಿ ಜಾತ್ರೆಯಲ್ಲಿ ನಡೆದ ಪಲ್ಲಕ್ಕಿ ಉತ್ಸವದ ನೋಟವಿದು. ದೇವಿಯನ್ನ ಪಲ್ಲಕ್ಕಿಯಲ್ಲಿ ಕರೆದೊಯ್ದು ಕೃಷ್ಣಾ ನದಿಯಲ್ಲಿ ಗಂಗಾಸ್ನಾನ ಮಾಡಿಸಿ ಮೆರವಣಿಗೆ ಮೂಲಕ ಕರೆ ತರುತ್ತಾರೆ. ಬಳಿಕ ದೇವಿಯ ಪಲ್ಲಕಿಯನ್ನ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುತ್ತೆ. ಇನ್ನು ದೇವಸ್ಥಾನದ ಮುಂದೆ ರೆಡಿಯಾದ ಕೆಂಡದಲ್ಲಿ ದೇಗುಲದ ಪೂಜಾರಿ ಹಾಗೂ ಪಲ್ಲಕ್ಕಿಯ ಪ್ರವೇಶವಾಗುತ್ತೆ. ಇದೆ ವೇಳೆ ನೂರಾರು ಭಕ್ತರು ತಂದಿರುವ ಕೋಳಿ ಮತ್ತು ಹುಂಜಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆ ತೀರಿಸ್ತಾರೆ. ಶಕ್ತಿ ದೇವತೆ ಗಡ್ಡಿ ದುರ್ಗಾದೇವಿ ದರ್ಶನ ಪಡೆಯಲು ರಾಜ್ಯ ಸೇರಿದಂತೆ ರಾಜ್ಯದ ನೂರಾರು ಭಕ್ತರು ಬರುತ್ತಾರೆ.

ದುರ್ಗಾದೇವಿ ದರ್ಶನ ಪಡೆಯಲಿರುವ ಡಿಕೆಶಿ: ಇನ್ನು ಎರಡು ದಿನಗಳ ಈ ಉತ್ಸವ ನಿನ್ನೆಯಿಂದ ಶುರುವಾಗಿದ್ದು, ಇವತ್ತು ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ದುರ್ಗಾದೇವಿ ದರ್ಶನ ಪಡೆಯಲಿದ್ದಾರೆ. ಕಳೆದ ವರ್ಷ ಡಿಕೆಶಿ ಜಾತ್ರೆಗೆ ಬರುತ್ತೇನೆಂದು ಬಾರದಿದ್ದಕ್ಕೆ ಇಡಿ ಸಂಕಷ್ಟ ಎದುರಾಗಿತ್ತು ಅಂತಿದ್ದಾರೆ ಇಲ್ಲಿನ ಅರ್ಚಕರು. ಹೀಗಾಗಿ ಈ ಬಾರಿ ಜಾತ್ರೆಯಲ್ಲಿ ಭಾಗಿಯಾಗಿ ಡಿಕೆಶಿ ದೇವಿಗೆ ಪೂಜೆ ಸಲ್ಲಿಸಲಿದ್ದಾರಂತೆ. ಹತ್ತೂರ ಮಂದಿ ಪಾಲಿಗೆ ಶಕ್ತಿ ದೇವತೆ ಆಗಿರೋ ಗಡ್ಡಿ ದುರ್ಗಾದೇವಿ ಜಾತ್ರೆ ಅದ್ಧೂರಿಯಾಗಿ ನಡೀತಿದೆ. ಅದ್ರಲ್ಲೂ ಈ ಉತ್ಸವದಲ್ಲಿ ಕೋಳಿ, ಹುಂಜ ತೂರೋದೇ ಒಂದು ಸ್ಪೆಷಾಲಿಟಿ.

Published On - 9:02 am, Wed, 29 January 20

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ