AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗಾದೇವಿ ಜಾತ್ರೆಯಲ್ಲಿ ಕೋಳಿಗಳ ದರ್ಬಾರ್: ಇಂದು ಡಿಕೆಶಿ ಭೇಟಿ!

ಯಾದಗಿರಿ: ಜಾತ್ರೆ ಅಂದ್ರೆ ಸುತ್ತಮುತ್ತಲ ಜನರಿಗೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತೆ. ಯಾದಗಿರಿಯಲ್ಲೂ ನಡೆದ ದುರ್ಗಾದೇವಿ ಜಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಮೈತುಂಬಾ ಭಕ್ತಿಯ ಭಂಡಾರ.. ಹೆಜ್ಜೆ ಹೆಜ್ಜೆಗೂ ಚೆಲ್ಲಿರೋ ಅರಿಶಿನ ಕುಂಕುಮ. ದೇವರಧ್ಯಾನದಲ್ಲಿ ಮುಳುಗಿರೋ ಭಕ್ತಸಾಗರ. ನೋಡ ನೋಡುತ್ತಲೇ ಜನರ ನಡುವೆ ದೇವರ ಪಲ್ಲಕ್ಕಿ ಸಾಗಿ ಬಂದಿತ್ತು. ಕೇಕೆ ಶಿಳ್ಳೆ ಮೂಲಕ ಜನ ಕೂಡ ಅಬ್ಬರಿಸಿದ್ರು. ಜಾತ್ರೆ ಅಂದ್ಮೇಲೆ ಇಷ್ಟೊಂದ್ ಜೋಶ್ ಇರ್ಲೇಬೇಕು ಬಿಡಿ. ಬಟ್ ಅದಕ್ಕಿಂತ ಇಲ್ಲಿ ಸ್ಪೆಷಲ್ […]

ದುರ್ಗಾದೇವಿ ಜಾತ್ರೆಯಲ್ಲಿ ಕೋಳಿಗಳ ದರ್ಬಾರ್: ಇಂದು ಡಿಕೆಶಿ ಭೇಟಿ!
ಸಾಧು ಶ್ರೀನಾಥ್​
|

Updated on:Jan 29, 2020 | 9:04 AM

Share

ಯಾದಗಿರಿ: ಜಾತ್ರೆ ಅಂದ್ರೆ ಸುತ್ತಮುತ್ತಲ ಜನರಿಗೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತೆ. ಯಾದಗಿರಿಯಲ್ಲೂ ನಡೆದ ದುರ್ಗಾದೇವಿ ಜಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

ಮೈತುಂಬಾ ಭಕ್ತಿಯ ಭಂಡಾರ.. ಹೆಜ್ಜೆ ಹೆಜ್ಜೆಗೂ ಚೆಲ್ಲಿರೋ ಅರಿಶಿನ ಕುಂಕುಮ. ದೇವರಧ್ಯಾನದಲ್ಲಿ ಮುಳುಗಿರೋ ಭಕ್ತಸಾಗರ. ನೋಡ ನೋಡುತ್ತಲೇ ಜನರ ನಡುವೆ ದೇವರ ಪಲ್ಲಕ್ಕಿ ಸಾಗಿ ಬಂದಿತ್ತು. ಕೇಕೆ ಶಿಳ್ಳೆ ಮೂಲಕ ಜನ ಕೂಡ ಅಬ್ಬರಿಸಿದ್ರು. ಜಾತ್ರೆ ಅಂದ್ಮೇಲೆ ಇಷ್ಟೊಂದ್ ಜೋಶ್ ಇರ್ಲೇಬೇಕು ಬಿಡಿ. ಬಟ್ ಅದಕ್ಕಿಂತ ಇಲ್ಲಿ ಸ್ಪೆಷಲ್ ಅಂದ್ರೆ ಇದೇ ಕೊಕ್ಕೊಕ್ಕೋ ಕೋಳಿಗಳು. ಖಡಕ್ ಹುಂಜದಿಂದ ಹಿಡ್ದು ಗುಂಡು ಗುಂಡು ಕೋಳಿಗಳವರೆಗೂ ಎಲ್ರ ಕೈಯಲ್ಲೂ ಕೋಳಿಗಳದ್ದೇ ದರ್ಬಾರ್.

ಕೋಳಿಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆ ತೀರಿಸಿದ ಭಕ್ತರು: ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಗೋನಾಳ್ ಗ್ರಾಮದ ಗಡ್ಡೆ ದುರ್ಗಾದೇವಿ ಜಾತ್ರೆಯಲ್ಲಿ ನಡೆದ ಪಲ್ಲಕ್ಕಿ ಉತ್ಸವದ ನೋಟವಿದು. ದೇವಿಯನ್ನ ಪಲ್ಲಕ್ಕಿಯಲ್ಲಿ ಕರೆದೊಯ್ದು ಕೃಷ್ಣಾ ನದಿಯಲ್ಲಿ ಗಂಗಾಸ್ನಾನ ಮಾಡಿಸಿ ಮೆರವಣಿಗೆ ಮೂಲಕ ಕರೆ ತರುತ್ತಾರೆ. ಬಳಿಕ ದೇವಿಯ ಪಲ್ಲಕಿಯನ್ನ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುತ್ತೆ. ಇನ್ನು ದೇವಸ್ಥಾನದ ಮುಂದೆ ರೆಡಿಯಾದ ಕೆಂಡದಲ್ಲಿ ದೇಗುಲದ ಪೂಜಾರಿ ಹಾಗೂ ಪಲ್ಲಕ್ಕಿಯ ಪ್ರವೇಶವಾಗುತ್ತೆ. ಇದೆ ವೇಳೆ ನೂರಾರು ಭಕ್ತರು ತಂದಿರುವ ಕೋಳಿ ಮತ್ತು ಹುಂಜಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆ ತೀರಿಸ್ತಾರೆ. ಶಕ್ತಿ ದೇವತೆ ಗಡ್ಡಿ ದುರ್ಗಾದೇವಿ ದರ್ಶನ ಪಡೆಯಲು ರಾಜ್ಯ ಸೇರಿದಂತೆ ರಾಜ್ಯದ ನೂರಾರು ಭಕ್ತರು ಬರುತ್ತಾರೆ.

ದುರ್ಗಾದೇವಿ ದರ್ಶನ ಪಡೆಯಲಿರುವ ಡಿಕೆಶಿ: ಇನ್ನು ಎರಡು ದಿನಗಳ ಈ ಉತ್ಸವ ನಿನ್ನೆಯಿಂದ ಶುರುವಾಗಿದ್ದು, ಇವತ್ತು ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ದುರ್ಗಾದೇವಿ ದರ್ಶನ ಪಡೆಯಲಿದ್ದಾರೆ. ಕಳೆದ ವರ್ಷ ಡಿಕೆಶಿ ಜಾತ್ರೆಗೆ ಬರುತ್ತೇನೆಂದು ಬಾರದಿದ್ದಕ್ಕೆ ಇಡಿ ಸಂಕಷ್ಟ ಎದುರಾಗಿತ್ತು ಅಂತಿದ್ದಾರೆ ಇಲ್ಲಿನ ಅರ್ಚಕರು. ಹೀಗಾಗಿ ಈ ಬಾರಿ ಜಾತ್ರೆಯಲ್ಲಿ ಭಾಗಿಯಾಗಿ ಡಿಕೆಶಿ ದೇವಿಗೆ ಪೂಜೆ ಸಲ್ಲಿಸಲಿದ್ದಾರಂತೆ. ಹತ್ತೂರ ಮಂದಿ ಪಾಲಿಗೆ ಶಕ್ತಿ ದೇವತೆ ಆಗಿರೋ ಗಡ್ಡಿ ದುರ್ಗಾದೇವಿ ಜಾತ್ರೆ ಅದ್ಧೂರಿಯಾಗಿ ನಡೀತಿದೆ. ಅದ್ರಲ್ಲೂ ಈ ಉತ್ಸವದಲ್ಲಿ ಕೋಳಿ, ಹುಂಜ ತೂರೋದೇ ಒಂದು ಸ್ಪೆಷಾಲಿಟಿ.

Published On - 9:02 am, Wed, 29 January 20

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್