AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗಾದೇವಿ ಜಾತ್ರೆಯಲ್ಲಿ ಕೋಳಿಗಳ ದರ್ಬಾರ್: ಇಂದು ಡಿಕೆಶಿ ಭೇಟಿ!

ಯಾದಗಿರಿ: ಜಾತ್ರೆ ಅಂದ್ರೆ ಸುತ್ತಮುತ್ತಲ ಜನರಿಗೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತೆ. ಯಾದಗಿರಿಯಲ್ಲೂ ನಡೆದ ದುರ್ಗಾದೇವಿ ಜಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಮೈತುಂಬಾ ಭಕ್ತಿಯ ಭಂಡಾರ.. ಹೆಜ್ಜೆ ಹೆಜ್ಜೆಗೂ ಚೆಲ್ಲಿರೋ ಅರಿಶಿನ ಕುಂಕುಮ. ದೇವರಧ್ಯಾನದಲ್ಲಿ ಮುಳುಗಿರೋ ಭಕ್ತಸಾಗರ. ನೋಡ ನೋಡುತ್ತಲೇ ಜನರ ನಡುವೆ ದೇವರ ಪಲ್ಲಕ್ಕಿ ಸಾಗಿ ಬಂದಿತ್ತು. ಕೇಕೆ ಶಿಳ್ಳೆ ಮೂಲಕ ಜನ ಕೂಡ ಅಬ್ಬರಿಸಿದ್ರು. ಜಾತ್ರೆ ಅಂದ್ಮೇಲೆ ಇಷ್ಟೊಂದ್ ಜೋಶ್ ಇರ್ಲೇಬೇಕು ಬಿಡಿ. ಬಟ್ ಅದಕ್ಕಿಂತ ಇಲ್ಲಿ ಸ್ಪೆಷಲ್ […]

ದುರ್ಗಾದೇವಿ ಜಾತ್ರೆಯಲ್ಲಿ ಕೋಳಿಗಳ ದರ್ಬಾರ್: ಇಂದು ಡಿಕೆಶಿ ಭೇಟಿ!
ಸಾಧು ಶ್ರೀನಾಥ್​
|

Updated on:Jan 29, 2020 | 9:04 AM

Share

ಯಾದಗಿರಿ: ಜಾತ್ರೆ ಅಂದ್ರೆ ಸುತ್ತಮುತ್ತಲ ಜನರಿಗೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತೆ. ಯಾದಗಿರಿಯಲ್ಲೂ ನಡೆದ ದುರ್ಗಾದೇವಿ ಜಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

ಮೈತುಂಬಾ ಭಕ್ತಿಯ ಭಂಡಾರ.. ಹೆಜ್ಜೆ ಹೆಜ್ಜೆಗೂ ಚೆಲ್ಲಿರೋ ಅರಿಶಿನ ಕುಂಕುಮ. ದೇವರಧ್ಯಾನದಲ್ಲಿ ಮುಳುಗಿರೋ ಭಕ್ತಸಾಗರ. ನೋಡ ನೋಡುತ್ತಲೇ ಜನರ ನಡುವೆ ದೇವರ ಪಲ್ಲಕ್ಕಿ ಸಾಗಿ ಬಂದಿತ್ತು. ಕೇಕೆ ಶಿಳ್ಳೆ ಮೂಲಕ ಜನ ಕೂಡ ಅಬ್ಬರಿಸಿದ್ರು. ಜಾತ್ರೆ ಅಂದ್ಮೇಲೆ ಇಷ್ಟೊಂದ್ ಜೋಶ್ ಇರ್ಲೇಬೇಕು ಬಿಡಿ. ಬಟ್ ಅದಕ್ಕಿಂತ ಇಲ್ಲಿ ಸ್ಪೆಷಲ್ ಅಂದ್ರೆ ಇದೇ ಕೊಕ್ಕೊಕ್ಕೋ ಕೋಳಿಗಳು. ಖಡಕ್ ಹುಂಜದಿಂದ ಹಿಡ್ದು ಗುಂಡು ಗುಂಡು ಕೋಳಿಗಳವರೆಗೂ ಎಲ್ರ ಕೈಯಲ್ಲೂ ಕೋಳಿಗಳದ್ದೇ ದರ್ಬಾರ್.

ಕೋಳಿಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆ ತೀರಿಸಿದ ಭಕ್ತರು: ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಗೋನಾಳ್ ಗ್ರಾಮದ ಗಡ್ಡೆ ದುರ್ಗಾದೇವಿ ಜಾತ್ರೆಯಲ್ಲಿ ನಡೆದ ಪಲ್ಲಕ್ಕಿ ಉತ್ಸವದ ನೋಟವಿದು. ದೇವಿಯನ್ನ ಪಲ್ಲಕ್ಕಿಯಲ್ಲಿ ಕರೆದೊಯ್ದು ಕೃಷ್ಣಾ ನದಿಯಲ್ಲಿ ಗಂಗಾಸ್ನಾನ ಮಾಡಿಸಿ ಮೆರವಣಿಗೆ ಮೂಲಕ ಕರೆ ತರುತ್ತಾರೆ. ಬಳಿಕ ದೇವಿಯ ಪಲ್ಲಕಿಯನ್ನ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುತ್ತೆ. ಇನ್ನು ದೇವಸ್ಥಾನದ ಮುಂದೆ ರೆಡಿಯಾದ ಕೆಂಡದಲ್ಲಿ ದೇಗುಲದ ಪೂಜಾರಿ ಹಾಗೂ ಪಲ್ಲಕ್ಕಿಯ ಪ್ರವೇಶವಾಗುತ್ತೆ. ಇದೆ ವೇಳೆ ನೂರಾರು ಭಕ್ತರು ತಂದಿರುವ ಕೋಳಿ ಮತ್ತು ಹುಂಜಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆ ತೀರಿಸ್ತಾರೆ. ಶಕ್ತಿ ದೇವತೆ ಗಡ್ಡಿ ದುರ್ಗಾದೇವಿ ದರ್ಶನ ಪಡೆಯಲು ರಾಜ್ಯ ಸೇರಿದಂತೆ ರಾಜ್ಯದ ನೂರಾರು ಭಕ್ತರು ಬರುತ್ತಾರೆ.

ದುರ್ಗಾದೇವಿ ದರ್ಶನ ಪಡೆಯಲಿರುವ ಡಿಕೆಶಿ: ಇನ್ನು ಎರಡು ದಿನಗಳ ಈ ಉತ್ಸವ ನಿನ್ನೆಯಿಂದ ಶುರುವಾಗಿದ್ದು, ಇವತ್ತು ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ದುರ್ಗಾದೇವಿ ದರ್ಶನ ಪಡೆಯಲಿದ್ದಾರೆ. ಕಳೆದ ವರ್ಷ ಡಿಕೆಶಿ ಜಾತ್ರೆಗೆ ಬರುತ್ತೇನೆಂದು ಬಾರದಿದ್ದಕ್ಕೆ ಇಡಿ ಸಂಕಷ್ಟ ಎದುರಾಗಿತ್ತು ಅಂತಿದ್ದಾರೆ ಇಲ್ಲಿನ ಅರ್ಚಕರು. ಹೀಗಾಗಿ ಈ ಬಾರಿ ಜಾತ್ರೆಯಲ್ಲಿ ಭಾಗಿಯಾಗಿ ಡಿಕೆಶಿ ದೇವಿಗೆ ಪೂಜೆ ಸಲ್ಲಿಸಲಿದ್ದಾರಂತೆ. ಹತ್ತೂರ ಮಂದಿ ಪಾಲಿಗೆ ಶಕ್ತಿ ದೇವತೆ ಆಗಿರೋ ಗಡ್ಡಿ ದುರ್ಗಾದೇವಿ ಜಾತ್ರೆ ಅದ್ಧೂರಿಯಾಗಿ ನಡೀತಿದೆ. ಅದ್ರಲ್ಲೂ ಈ ಉತ್ಸವದಲ್ಲಿ ಕೋಳಿ, ಹುಂಜ ತೂರೋದೇ ಒಂದು ಸ್ಪೆಷಾಲಿಟಿ.

Published On - 9:02 am, Wed, 29 January 20

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ