AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಧನ ಪಾವತಿಸದೇ ಇದ್ರೂ ಕಾರ್ಖಾನೆಗಳಿಗೆ ಪುಕ್ಸಟೆ ನೀರು, ಏನು ಕೇಳದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ರಾಯಚೂರು: ಆ ಜಲಾಶಯ ರಾಜ್ಯದ ತ್ರಿವಳಿ ಜಿಲ್ಲೆಯ ರೈತರ ಜೀವನಾಡಿ. ಆ ಜಲಾಶಯದಲ್ಲಿ ಒಳ ಹರಿವು ಕಡಿಮೆಯಾದ್ರೂ ಜಲಾಶಯದ ಸುತ್ತಲೂ ಇರುವ ಕಾರ್ಖಾನೆಗಳಿಗೆ ಪುಗ್ಸಟ್ಟೆ ನೀರು ಹರಿಸಲಾಗುತ್ತಿದೆ. ಬೆಳೆಗೆ ನೀರು ಇಲ್ಲದಿದ್ದರು ಕಾರ್ಖಾನೆಗಳಿಗೆ ನೀರು ಹೋಗುತ್ತಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯನ್ನೆ ನಂಬಿ 6 ಲಕ್ಷಕ್ಕೂ ಅಧಿಕ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಕಾಲುವೆಯ ಕೊನೆ ಭಾಗದ ರೈತರಿಗೆ ಇಂದಿಗೂ ಸಮರ್ಪಕವಾಗಿ ನೀರು ತಲುಪಿಸೋಕೆ ಸಾಧ್ಯವಾಗ್ತಿಲ್ಲ ಈ ನಡುವೆ ಕೆಲ ಕಾರ್ಖಾನೆಗಳು ಸರ್ಕಾರಕ್ಕೆ ಟೋಪಿ […]

ರಾಜಧನ ಪಾವತಿಸದೇ ಇದ್ರೂ ಕಾರ್ಖಾನೆಗಳಿಗೆ ಪುಕ್ಸಟೆ ನೀರು, ಏನು ಕೇಳದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
ಆಯೇಷಾ ಬಾನು
|

Updated on: Nov 11, 2020 | 9:01 AM

Share

ರಾಯಚೂರು: ಆ ಜಲಾಶಯ ರಾಜ್ಯದ ತ್ರಿವಳಿ ಜಿಲ್ಲೆಯ ರೈತರ ಜೀವನಾಡಿ. ಆ ಜಲಾಶಯದಲ್ಲಿ ಒಳ ಹರಿವು ಕಡಿಮೆಯಾದ್ರೂ ಜಲಾಶಯದ ಸುತ್ತಲೂ ಇರುವ ಕಾರ್ಖಾನೆಗಳಿಗೆ ಪುಗ್ಸಟ್ಟೆ ನೀರು ಹರಿಸಲಾಗುತ್ತಿದೆ. ಬೆಳೆಗೆ ನೀರು ಇಲ್ಲದಿದ್ದರು ಕಾರ್ಖಾನೆಗಳಿಗೆ ನೀರು ಹೋಗುತ್ತಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ತುಂಗಭದ್ರಾ ಎಡದಂಡೆ ಕಾಲುವೆಯನ್ನೆ ನಂಬಿ 6 ಲಕ್ಷಕ್ಕೂ ಅಧಿಕ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಕಾಲುವೆಯ ಕೊನೆ ಭಾಗದ ರೈತರಿಗೆ ಇಂದಿಗೂ ಸಮರ್ಪಕವಾಗಿ ನೀರು ತಲುಪಿಸೋಕೆ ಸಾಧ್ಯವಾಗ್ತಿಲ್ಲ ಈ ನಡುವೆ ಕೆಲ ಕಾರ್ಖಾನೆಗಳು ಸರ್ಕಾರಕ್ಕೆ ಟೋಪಿ ಹಾಕಿ ವಂಚನೆ ಮಾಡುತ್ತಿರುವುದು ರೈತರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.

ತುಂಗಭದ್ರಾ ವ್ಯಾಪ್ತಿಯ ಕಾರ್ಖಾನೆಗಳಿಗೆ 6 ಟಿಎಂಸಿ ನೀರು! ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವ ಜಿಂದಾಲ್, ಕಲ್ಯಾಣಿ, ಕಿರ್ಲೋಸ್ಕರ್ ಸೇರಿದಂತೆ ಕೆಲ ಸ್ಟೀಲ್ ಕಾರ್ಖಾನೆಗಳು ವಿರುದ್ಧ ಸರ್ಕಾರ ಹೊಸದಾಗಿ ನಿಗಧಿಪಡಿಸಿದ ದರಪಟ್ಟಿಯಂತೆ ರಾಜಧನ ಪಾವತಿಸಿಲ್ಲವೆಂಬ ಆರೋಪ ಕೇಳಿ ಬಂದಿದೆ. ಕಳೆದ 2018ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿ ಎಂಟಿಎಫ್‌ಸಿ ನೀರು ಬಳಕಗೆ 3 ಲಕ್ಷ ರೂಪಾಯಿ ದರ ನಿಗಧಿಪಡಿಸಿತ್ತು.

ಬಿಜೆಪಿ ಸರ್ಕಾರ ಮತ್ತೊಮ್ಮೆ ದರ ಪರಿಷ್ಕರಿಸಿದ್ದು, ಸಧ್ಯ ಪ್ರತಿ ಎಂಟಿಎಫ್‌ಸಿಗೆ 2 ಲಕ್ಷ ರೂಪಾಯಿ ದರ ನಿಗಧಿಪಡಿಸಿ ಆದೇಶಿಸಿದೆ. ಆದ್ರೆ ಇಂದಿಗೂ ಕಾರ್ಖಾನೆಗಳು ಹೊಸ ದರಪಟ್ಟಿಯಂತೆ ಸರ್ಕಾರಕ್ಕೆ ರಾಜಧನ ಪಾವತಿಸಿಲ್ಲವೆಂದು ರೈತರು ಆರೋಪಿಸ್ತಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ರೂ ತುಂಗಭದ್ರಾ ವಲಯದ ನೀರಾವರಿ ಅಧಿಕಾರಿಗಳು ಕಾರ್ಖಾನೆಗಳಿಗೆ 6 ಟಿಎಂಸಿಗೂ ಅಧಿಕ ಪುಗ್ಸಟ್ಟೆ ನೀರು ಪೂರೈಕೆ ಮಾಡುತ್ತಿರೋದು ರೈತರನ್ನ ರೊಚ್ಚಿಗೆಬ್ಬಿಸಿದೆ.

ನೀರಾವರಿ ಇಲಾಖೆಯ ಅಧಿಕಾರಿಗಳ ಈ ನಡೆ ಮೂರು ಜಿಲ್ಲೆಯ ರೈತರನ್ನ ರೊಚ್ಚಿಗೆಬ್ಬಿಸಿದೆ. ಈ ನಡುವೆ ಪ್ರಸಕ್ತ ವರ್ಷ ಎರಡನೇ ಬೆಳೆಗೆ ನೀರು ಹರಿಸಬೇಕೆಂದು ರೈತರು ಡಿಮ್ಯಾಂಡ್ ಮಾಡ್ತಿದ್ದಾರೆ. ಆದ್ರೆ ಜಲಾಶಯದಲ್ಲಿ 98 ಟಿಎಂಸಿ ನೀರಿನ ಲಭ್ಯವಿದ್ದು, ಡಿಸೆಂಬರವರೆಗೂ ಕಾಲುವೆಗೆ ನೀರು ಹರಿಯಲಿದೆ.

ಜಲಾಶಯದಲ್ಲಿ ಲಭ್ಯ ಇರುವ ನೀರನ್ನ ಮುಂದಿನ ಬೇಸಿಗೆಗೆ ಕುಡಿಯುವ ನೀರಿಗಾಗಿ ಕಾಯ್ದಿರಿಸುವ ಲೆಕ್ಕಾಚಾರ ನಡದಿದೆ. ಇನ್ನು 48 ಟಿಎಂಸಿಗೂ ಅಧಿಕ ನೀರು ಜಲಾಶಯದಲ್ಲಿ ಉಳಿದ್ರೆ ಮಾತ್ರ ರೈತರ ಎರಡನೇ ಬೆಳೆಗೆ ನೀರು ಸಿಗಲಿದೆ ಎಂಬ ಅಭಿಪ್ರಾಯಕ್ಕೆ ಅಧಿಕಾರಿಗಳು ಬಂದಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇದ್ರೂ ಅಧಿಕಾರಿಗಳು ಮಾತ್ರ ಕಾರ್ಖಾನೆಗಳಿಗೆ ಪುಗ್ಸಟ್ಟೆ ನೀರು ಪೂರೈಕೆ ಮಾಡ್ತಿರುವುದು ರೈತರಲ್ಲಿ ಮತ್ತಷ್ಟು ಆಕ್ರೋಶ ಮೂಡಿಸಿದೆ.

ಒಟ್ನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರು ಹನಿ ಹನಿ ನೀರಿಗೂ ಪರದಾಡ್ತಿದ್ದಾರೆ. ಇನ್ನೊಂದ್ಕಡೆ ಕಾರ್ಖಾನೆಗಳು ರಾಜಧನ ನೀಡದೇ ಇದ್ರೂ ಪುಗ್ಸಟ್ಟೆ ನೀರು ದೊಚುತ್ತಿವೆ. ಮತ್ತೊಂದ್ಕಡೆ ರೈತರು ಎರಡನೇ ಬೆಳೆಗೆ ನೀರು ಕೇಳುತ್ತಿದ್ದಾರೆ. ಆದಷ್ಟು ಬೇಗ ಹಿರಿಯ ಅಧಿಕಾರಿಗಳು ಈ ಸಮಸ್ಯೆಗಳಿಗೆ ಪರಿಹಾರ ಹುಡಕಬೇಕಿದೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ