ರಸ್ತೆ ಮಧ್ಯೆ ನೇಗಿಲು ಹಿಡಿದು.. ಉಳುವ ಯೋಗಿಯ ಪ್ರತಿಭಟನೆ

ಬಾಗಲಕೋಟೆ: ಭಾರತದ ಬೆನ್ನೆಲುಬು ನಮ್ಮೆಲ್ಲರ ಅನ್ನದಾತ ರೈತ ಇಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾನೆ. ಮಣ್ಣಿನ ಮಕ್ಕಳ ಆಕ್ರೋಶದ ಕಿಚ್ಚು ಹಲವೆಡೆ ಕಂಡು ಬಂದಿದೆ. ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಿಲ್ಲಿ ಎಂಬಂತೆ ಬಸ್ ನಿಲ್ದಾಣದ ಎದುರು ರಸ್ತೆಯಲ್ಲಿ ನೇಗಿಲು […]

ರಸ್ತೆ ಮಧ್ಯೆ ನೇಗಿಲು ಹಿಡಿದು.. ಉಳುವ ಯೋಗಿಯ ಪ್ರತಿಭಟನೆ
Updated By: ಸಾಧು ಶ್ರೀನಾಥ್​

Updated on: Sep 28, 2020 | 1:01 PM

ಬಾಗಲಕೋಟೆ: ಭಾರತದ ಬೆನ್ನೆಲುಬು ನಮ್ಮೆಲ್ಲರ ಅನ್ನದಾತ ರೈತ ಇಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾನೆ. ಮಣ್ಣಿನ ಮಕ್ಕಳ ಆಕ್ರೋಶದ ಕಿಚ್ಚು ಹಲವೆಡೆ ಕಂಡು ಬಂದಿದೆ.

ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಿಲ್ಲಿ ಎಂಬಂತೆ ಬಸ್ ನಿಲ್ದಾಣದ ಎದುರು ರಸ್ತೆಯಲ್ಲಿ ನೇಗಿಲು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.