ಬೆಂಗಳೂರು ಪೊಲೀಸರ ಆತ್ಮಸ್ಥೈರ್ಯವನ್ನೆ ನುಂಗಿತ ಕ್ರೂರಿ ಕೊರೊನಾ?

|

Updated on: Jul 17, 2020 | 2:04 PM

ಬೆಂಗಳೂರು:ಅಗತ್ಯ ಸೇವೆಗಳ ನೆಪದಲ್ಲಿ ಬರೋಬ್ಬರಿ 26 ಸೆಕ್ಟರ್ ಗಳಿಗೆ ರಿಲ್ಯಾಕ್ಸೆಷನ್ ನೀಡಿ ಸರ್ಕಾರ ಎಡವಟ್ಟು ಮಾಡ್ತಾ ಅನ್ನೋ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. ಬೆಂಗಳೂರಿನಲ್ಲಿ ಸಮರ್ಪಕವಾಗಿ ಜಾರಿಯಾಗದ ಲಾಕ್ ಡೌನ್ ರೂಲ್ಸ್ ಗಳು, ಹಾಗಾದರೆ ಟಫ್ ರೂಲ್ಸ್ ಜಾರಿ ಮಾಡುವುದಾಗಿ ಹೇಳಿದ್ದ ಸರ್ಕಾರ ಮಾಡಿದ್ದಾದರು ಏನು? ಹೌದು, ಹಿಂದೆ ಲಾಕ್ ಡೌನ್ ವೇಳೆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕ್ತಿದ್ದ ಖಾಕಿ ಟೀಂ ಮುಲಾಜಿಲ್ಲದೇ ವಾಹನ ಸೀಜ್ ಮಾಡಿ ಕೇಸ್ ದಾಖಲಿಸ್ತಿದ್ದರು. ಆದ್ರೆ ಈ […]

ಬೆಂಗಳೂರು ಪೊಲೀಸರ ಆತ್ಮಸ್ಥೈರ್ಯವನ್ನೆ ನುಂಗಿತ ಕ್ರೂರಿ ಕೊರೊನಾ?
Follow us on

ಬೆಂಗಳೂರು:ಅಗತ್ಯ ಸೇವೆಗಳ ನೆಪದಲ್ಲಿ ಬರೋಬ್ಬರಿ 26 ಸೆಕ್ಟರ್ ಗಳಿಗೆ ರಿಲ್ಯಾಕ್ಸೆಷನ್ ನೀಡಿ ಸರ್ಕಾರ ಎಡವಟ್ಟು ಮಾಡ್ತಾ ಅನ್ನೋ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. ಬೆಂಗಳೂರಿನಲ್ಲಿ ಸಮರ್ಪಕವಾಗಿ ಜಾರಿಯಾಗದ ಲಾಕ್ ಡೌನ್ ರೂಲ್ಸ್ ಗಳು, ಹಾಗಾದರೆ ಟಫ್ ರೂಲ್ಸ್ ಜಾರಿ ಮಾಡುವುದಾಗಿ ಹೇಳಿದ್ದ ಸರ್ಕಾರ ಮಾಡಿದ್ದಾದರು ಏನು?

ಹೌದು, ಹಿಂದೆ ಲಾಕ್ ಡೌನ್ ವೇಳೆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕ್ತಿದ್ದ ಖಾಕಿ ಟೀಂ ಮುಲಾಜಿಲ್ಲದೇ ವಾಹನ ಸೀಜ್ ಮಾಡಿ ಕೇಸ್ ದಾಖಲಿಸ್ತಿದ್ದರು. ಆದ್ರೆ ಈ ಬಾರಿ ಬಿಟ್ಟು ಬಿಡದಂತೆ ಕೊರೊನಾ ಸೋಂಕು ಪೊಲೀಸರನ್ನು ವ್ಯಾಪಿಸಿದೆ, ಹಾಗಾಗಿ ಕೊವಿಡ್ ಅಟ್ಟಹಾಸಕ್ಕೆ ಅಕ್ಷರಶಃ ಬೆಚ್ಚಿ ಬಿದ್ದ ಪೊಲೀಸ್ ಸಿಬ್ಬಂದಿ ರಸ್ತೆಗಿಳಿದು ಬ್ಯಾರಿಕೇಡ್ ಬಳಿ ನಿಂತು ಸಾರ್ವಜನಿಕರ ಪರಿಶೀಲನೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ.

ಹೈಕೋರ್ಟ್ ಸೂಚನೆ ನೀಡಿದ್ರು ಇದುವರೆಗೂ ಪೊಲೀಸರಿಗೆ ಪ್ರತ್ಯೇಕ ಕೊವಿಡ್ ಲ್ಯಾಬ್ ಮತ್ತು ಚಿಕಿತ್ಸೆಗೆ ಆಸ್ಪತ್ರೆಗಳ ವ್ಯವಸ್ಥೆಯನ್ನ ಸರ್ಕಾರ ಮಾಡಿಲ್ಲ, ಅಲ್ಲದೆ 55 ರ ವಯೋಮಿತಿ ಮೀರಿದ ಪೊಲೀಸರು ಕೊವಿಡ್ ಡ್ಯೂಟಿಗೆ ಲಭ್ಯರಿಲ್ಲ. ಜೊತೆಗೆ 600ಕ್ಕೂ ಹೆಚ್ಚು ಬೆಂಗಳೂರು ಪೊಲೀಸರು ಸೋಂಕು ತಗುಲಿ ಐಸೋಲೆಷನ್ ಲ್ಲಿದ್ದಾರೆ ಹಾಗೂ 1,500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕ್ವಾರಂಟೈನ್ ಆಗಿರುವುದಲ್ಲದೆ ಇದುವರೆಗೆ ಕೊವಿಡ್ ನಿಂದಾಗಿ 8 ಜನ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಇದರಿಂದ ಆತ್ಮಸ್ಥೈರ್ಯ ಕಳೆದುಕೊಂಡಿರುವ ಪೊಲೀಸರು ರಸ್ತೆಗಿಳಿದು ಕೆಲಸ ಮಾಡಲು ಹಿಂದೇಟು ಹಾಕುವಂತಾಗಿದೆ.