AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಮರಿಮೊಮ್ಮಗನ ನಿಕಾಹ್​ನಾಮಾ ಒಬ್ಬ ಮಹಿಳಾ ಖಾಜಿ ನೆರವೇರಿಸಿದರು!

ಇಂಥ ಅಪರೂಪದ ವಿಡಿಯೋವನ್ನು ನೋಡಿದ ನೆಟ್ಟಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರು, ‘ಕಾಲ ಬದಲಾಗುತ್ತಿದೆ’ ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು, ‘ಎಂಥ ಸುಂದರ ದೃಶ್ಯ’ ಎಂದು ಉದ್ಗರಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಮರಿಮೊಮ್ಮಗನ ನಿಕಾಹ್​ನಾಮಾ ಒಬ್ಬ ಮಹಿಳಾ ಖಾಜಿ ನೆರವೇರಿಸಿದರು!
ನಿಕಾಹ್​ನಾಮಾ ಶಾಸ್ತ್ರ ನೆರವೇರಿಸುತ್ತಿರುವ ಮಹಿಳಾ ಖಾಜಿ
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 12, 2022 | 11:17 PM

Share

ಮುಸ್ಲಿಂ ಸಮುದಾಯದಲ್ಲಿ (Muslim community) ಮಹಿಳಾ ಖಾಜಿ ಒಬ್ಬರು ಮದುವೆ ಶಾಸ್ತ್ರ ನಡೆಸಿಕೊಡುವುದನ್ನು ಈ ಹಿಂದೆ ಯಾವತ್ತಾದರೂ ಕೇಳಿದ್ದೀರಾ ಇಲ್ಲಿ ಅನಿಸುತ್ತೆ. ಯಾಕೆಂದರೆ ಇಂಥ ಸಂದರ್ಭಗಳು ತೀರ ಅಪರೂಪ. ಶುಕ್ರವಾರದಂದು ದೆಹಲಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಜಾಕಿರ್ ಹುಸ್ಸೇನ್ (Zakir Hussain) ಅವರ ಮರಿಮೊಮ್ಮಗನ ನಿಕಾಹ್ ನಾಮವನ್ನು (Nikah) ಒಬ್ಬ ಮಹಿಳಾ ಖಾಜಿ ನೆರವೇರಿಸಿದರು. ಈ ಮದುವೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ಅದು ವೈರಲ್ ಆಗಿದೆ. ಸಾವಿರಾರು ಜನ ಇದನ್ನು ವೀಕ್ಷಿಸುತ್ತಿದ್ದಾರೆ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ.

ಯೋಜನಾ ಆಯೋಗದ ಮಾಜಿ ಸದಸ್ಯೆಯಾಗಿರುವ ಸೈದಾ ಸಯೇದೇನ್ ಹಮೀದ್ ಅವರು ಒಬ್ಬ ಖಾಜಿಯ ಜವಾಬ್ದಾರಿಯನ್ನು ಹೊತ್ತುಕೊಂಡು ರಹಮಾನ್ ಮತ್ತು ಉರ್ಸಿಲಾ ಅಲಿ ಅವರ ನಿಕಾಹ್ ವನ್ನು ನೆರವೇರಿಸಿದರು. ವರನ (ದುಲ್ಹಾ) ಅವರ ಮುತ್ತಜ್ಜಿ ಬೇಗಂ ಸಯೀದ ಖುರ್ಷೀದ್ ಅವರು ಸಂಸ್ಥಾಪಕ ಅಧ್ಯಕ್ಷೆಯಾಗಿರುವ ಮುಸ್ಲಿಂ ಮಹಿಳಾ ವೇದಿಕೆ ಆಶ್ರಯದ ಅಡಿಯಲ್ಲಿ (ಮುಸ್ಲಿಂ ವುಮೆನ್ಸ್ ಫೋರಮ್) ನಿಖಾನಾಮಕ್ಕಾಗಿ ನಿಗದಿಪಡಿಸಿದ ಷರತ್ತುಗಳನ್ನು ಸಿದ್ಧಪಡಿಸಲಾಯಿತು,’ ಎಂದು ಹೇಳಿಕೆಯೊಂದರಲ್ಲಿ ಹಮೀದ್ ಅವರು ತಿಳಿಸಿದ್ದಾರೆ.

ಇಂಥ ಅಪರೂಪದ ವಿಡಿಯೋವನ್ನು ನೋಡಿದ ನೆಟ್ಟಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರು, ‘ಕಾಲ ಬದಲಾಗುತ್ತಿದೆ’ ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು, ‘ಎಂಥ ಸುಂದರ ದೃಶ್ಯ’ ಎಂದು ಉದ್ಗರಿಸಿದ್ದಾರೆ.

ಮುಸ್ಲಿಂ ಸಂಪ್ರದಾಯದ ಪ್ರಕಾರ ನಿಕಾಹ್ ನಾಮಕ್ಕೆ ಸಂಬಂಧಿಸಿದಂತೆ ಖುರಾನ್ ನಲ್ಲಿ ಸೂಚಿಲಾಗಿರುವ ಆದೇಶಗಳು ಮೆಹರ್, ಸಾಕ್ಷಿಗಳು ಮತ್ತು ಖಾಜಿ ಆಗಿದ್ದು ನಿಕಾಹ್ ನಾಮಾದ ಹೆಚ್ಚುವರಿ ಮಹತ್ವವು ಇಕ್ರಾರ್ನಾಮಾ (ಒಪ್ಪಂದ) ಆಗಿದೆ. ಇದರಲ್ಲಿ ವಧು-ವರರು ಪರಸ್ಪರ ಒಪ್ಪಿದ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳಿಗೆ ಸಂಬಂಧಿದ ಷರತ್ತುಗಳ ಜೊತೆಗೆ ವೈವಾಹಿಕ ಬದುಕಿನ ಎಲ್ಲಾ ಆಯಾಮಗಳ ಗೌರವ ಮತ್ತು ಆದರವನ್ನು ಒಳಗೊಂಡಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:  Video: ಗೆದ್ದು 2ನೇ ಬಾರಿಗೆ ಸಿಎಂ ಆದ ಯೋಗಿ ಆದಿತ್ಯನಾಥ್​​ಗೆ ತಿಲಕವಿಟ್ಟು, ಶುಭಾಶಯ ಕೋರಿದ ಮುಲಾಯಂ ಸಿಂಗ್​ ಯಾದವ್​ ಸೊಸೆ, ಮೊಮ್ಮಗಳು

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!