ಸಂಕಷ್ಟ ಪರಿಹಾರ ನೆಪದಲ್ಲಿ ₹27 ಕೋಟಿ ಪಂಗನಾಮ: ಸ್ವಾಮೀಜಿಗಾಗಿ CCB ತಲಾಶ್

ಕೋಲಾರ: ಸಂಕಷ್ಟ ಪರಿಹಾರ ನೆಪದಲ್ಲಿ ಬಂಗಾರಪೇಟೆ ಹೊರವಲಯದ ಬೆಳ್ಳಿಪೇಟೆ ಸೊಲ್ಲಾಪುರ ದೇವಿ ದೇವಸ್ಥಾನದ ಸ್ವಾಮೀಜಿ ಮಹಿಳೆಯೊಬ್ಬರಿಗೆ ಬರೋಬ್ಬರಿ 27 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಬೆಂಗಳೂರು ಮೂಲದ‌ ಗೀತಾ ಎಂಬುವರಿಗೆ ವಂಚಿಸಿ ಕಾವಿಧಾರಿ ಎಸ್ಕೇಪ್ ಆಗಿದ್ದಾನೆ. ಮೆಕಾನಿಕ್ ಕೆಲಸ‌ ಮಾಡಿಕೊಂಡಿದ್ದ ವಂಚಕ ತಾನು ಸ್ವಾಮೀಜಿ ಎಂದು ಹಲವರಿಗೆ ನಂಬಿಸಿದ್ದಾನೆ. ಆರೋಪಿ ನಾಗರಾಜ್ ದೇವಾಲಯದಲ್ಲೇ ಎಣ್ಣೆ ಹೊಡೆದು‌ ಬಿಂದಸ್ ಜೀವನ ಮಾಡುತ್ತಿದ್ದ. ದೇವರ ಹೆಸರಿನಲ್ಲಿ ‌ಜನರಿಗೆ ವಂಚಿಸಿ ಬೆಳ್ಳಿಪೇಟೆಯಲ್ಲಿ‌ ಬಂಗಲೆ ನಿರ್ಮಾಣ ಮಾಡಿಕೊಂಡಿದ್ದ. ಸದ್ಯ ದೂರು ದಾಖಲಾದ ಮೇಲೆ‌ […]

ಸಂಕಷ್ಟ ಪರಿಹಾರ ನೆಪದಲ್ಲಿ ₹27 ಕೋಟಿ ಪಂಗನಾಮ: ಸ್ವಾಮೀಜಿಗಾಗಿ CCB ತಲಾಶ್
ಸಾಧು ಶ್ರೀನಾಥ್​

Updated on: Feb 28, 2020 | 12:29 PM

ಕೋಲಾರ: ಸಂಕಷ್ಟ ಪರಿಹಾರ ನೆಪದಲ್ಲಿ ಬಂಗಾರಪೇಟೆ ಹೊರವಲಯದ ಬೆಳ್ಳಿಪೇಟೆ ಸೊಲ್ಲಾಪುರ ದೇವಿ ದೇವಸ್ಥಾನದ ಸ್ವಾಮೀಜಿ ಮಹಿಳೆಯೊಬ್ಬರಿಗೆ ಬರೋಬ್ಬರಿ 27 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಬೆಂಗಳೂರು ಮೂಲದ‌ ಗೀತಾ ಎಂಬುವರಿಗೆ ವಂಚಿಸಿ ಕಾವಿಧಾರಿ ಎಸ್ಕೇಪ್ ಆಗಿದ್ದಾನೆ.

ಮೆಕಾನಿಕ್ ಕೆಲಸ‌ ಮಾಡಿಕೊಂಡಿದ್ದ ವಂಚಕ ತಾನು ಸ್ವಾಮೀಜಿ ಎಂದು ಹಲವರಿಗೆ ನಂಬಿಸಿದ್ದಾನೆ. ಆರೋಪಿ ನಾಗರಾಜ್ ದೇವಾಲಯದಲ್ಲೇ ಎಣ್ಣೆ ಹೊಡೆದು‌ ಬಿಂದಸ್ ಜೀವನ ಮಾಡುತ್ತಿದ್ದ. ದೇವರ ಹೆಸರಿನಲ್ಲಿ ‌ಜನರಿಗೆ ವಂಚಿಸಿ ಬೆಳ್ಳಿಪೇಟೆಯಲ್ಲಿ‌ ಬಂಗಲೆ ನಿರ್ಮಾಣ ಮಾಡಿಕೊಂಡಿದ್ದ. ಸದ್ಯ ದೂರು ದಾಖಲಾದ ಮೇಲೆ‌ ಕಳ್ಳ ಸ್ವಾಮೀಜಿ ನಾಗರಾಜ್ ಮತ್ತು ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ.

ಸ್ವಾಮೀಜಿ ಮನೆಯಲ್ಲಿ ಸಿಸಿಬಿ ಅಧಿಕಾರಿಗಳ ಶೋಧ:
ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ತಡರಾತ್ರಿ ಮನೆಗೆ ಭೇಟಿ ನೀಡಿದ್ರು. ಸರ್ಚಿಂಗ್ ವಾರಂಟ್‌ ಮೂಲಕ ಎಂಟ್ರಿಕೊಟ್ಟಿದ್ದ ಸಿಸಿಬಿ ಮನೆಯಲ್ಲಿ ಸಂಪೂರ್ಣವಾಗಿ ಶೋಧ ನಡೆಸಿದ್ದಾರೆ. ಆಗ ಮನೆಯಲ್ಲಿ ನಮ್ಮ ತಂದೆ ಇರಲಿಲ್ಲ. ಮನೆಯಲ್ಲಿ ಎರಡು ಲಕ್ಷ ರೂಪಾಯಿ ಹಣ ಇತ್ತು. ಹಣ ಸೇರಿದಂತೆ ಚಿನ್ನಾಭರವಣವನ್ನ ಅಧಿಕಾರಿಗಳು ಜಪ್ತಿ ಮಾಡಿದ್ರು. ನಮ್ಮ ತಂದೆಯ ಮಾರ್ಯದೆ ಕಳೆಯಲು ಹೀಗೆ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಮಗ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

Published On - 12:28 pm, Fri, 28 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us