AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ವರೋಗಕ್ಕೂ ಏಡಿ ಸಾರು ಮದ್ದು, ಮಲೆನಾಡು ಏಡಿಗಳಿಗೆ ಫುಲ್ ಡಿಮ್ಯಾಂಡ್..!

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಚಿಕನ್, ಮೀನಿಗಿಂತ ಏಡಿಗೆ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ. ಹಾಗಾಗಿ ಗದ್ದೆಗಳಲ್ಲಿ ಏಡಿಗಳನ್ನು ಹಿಡಿಯಲು ಜನರು ಪೈಪೋಟಿ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ.. ಹೌದು, ಮಲೆನಾಡು ಭಾಗದಲ್ಲಿ ಮಳೆರಾಯ ಬಿಡುವು ಕೊಟ್ಟಿದ್ದಾನೆ. ಇದರ ಪರಿಣಾಮ ಎನ್ನುವಂತೆ ಬಿಸಿಲ ಬೇಗೆಯಿಂದ ಗದ್ದೆಗಳಲ್ಲಿ ಏಡಿಗಳು ಪ್ರತ್ಯಕ್ಷವಾಗ್ತಿವೆ. ಇತ್ತ, ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ. ಹೀಗಿರುವಾಗ ಏಡಿಗಳು ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಟ ನಡೆಸ್ತವೆ ಅಂದ್ರೆ ಬಿಡ್ತರಾ..? ನೋ ವೇ.. ಗಬುಕ್​ ಅಂತಾ ಹಿಡಿದು ಬುಟ್ಟಿಗೇ […]

ಸರ್ವರೋಗಕ್ಕೂ ಏಡಿ ಸಾರು ಮದ್ದು, ಮಲೆನಾಡು ಏಡಿಗಳಿಗೆ ಫುಲ್ ಡಿಮ್ಯಾಂಡ್..!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 03, 2020 | 5:51 PM

Share

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಚಿಕನ್, ಮೀನಿಗಿಂತ ಏಡಿಗೆ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ. ಹಾಗಾಗಿ ಗದ್ದೆಗಳಲ್ಲಿ ಏಡಿಗಳನ್ನು ಹಿಡಿಯಲು ಜನರು ಪೈಪೋಟಿ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.

ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ.. ಹೌದು, ಮಲೆನಾಡು ಭಾಗದಲ್ಲಿ ಮಳೆರಾಯ ಬಿಡುವು ಕೊಟ್ಟಿದ್ದಾನೆ. ಇದರ ಪರಿಣಾಮ ಎನ್ನುವಂತೆ ಬಿಸಿಲ ಬೇಗೆಯಿಂದ ಗದ್ದೆಗಳಲ್ಲಿ ಏಡಿಗಳು ಪ್ರತ್ಯಕ್ಷವಾಗ್ತಿವೆ. ಇತ್ತ, ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ. ಹೀಗಿರುವಾಗ ಏಡಿಗಳು ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಟ ನಡೆಸ್ತವೆ ಅಂದ್ರೆ ಬಿಡ್ತರಾ..? ನೋ ವೇ.. ಗಬುಕ್​ ಅಂತಾ ಹಿಡಿದು ಬುಟ್ಟಿಗೇ ಹಾಕೋದೇ ಕೆಲ್ಸ!

ಹೀಗಾಗಿಯೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅತ್ತಿಗೆರೆ, ಬಿನ್ನಡಿ, ಬಡವನದಿಣ್ಣೆ, ಮುಗ್ರಹಳ್ಳಿ ಸೇರಿದಂತೆ ಹಲವೆಡೆ ಜನರು ಏಡಿ ಶಿಕಾರಿಗೆ ಇಳಿಯುತ್ತಿದ್ದಾರೆ. ಇತ್ತೀಚಿನ ವರುಷಗಳಲ್ಲಿ ಏಡಿಗಳ ಸಂಖ್ಯೆಯೇ ಕಡಿಮೆಯಾಗಿತ್ತು. ಆದ್ರೆ ಈ ವರ್ಷ ಗದ್ದೆಗಳಲ್ಲಿ ಭಾರೀ ಪ್ರಮಾಣದ ಏಡಿಗಳು ಕಂಡು ಬರುತ್ತಿರುವುದರಿಂದ ಜನರು ಅವುಗಳನ್ನ ಹಿಡಿಯಲು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಮಹಿಳೆಯರು, ವೃದ್ಧೆಯರು, ಪುರುಷರು ಭರ್ಜರಿ ಏಡಿ ಶಿಕಾರಿ ಮಾಡುತ್ತಿದ್ದಾರೆ.

ಏಡಿ ಸಾರು ತಿಂದ್ರೆ ಕಾಯಿಲೆಗಳೇ ಹತ್ತಿರ ಬರಲ್ಲ.. ಸರ್ವರೋಗಕ್ಕೆ ಸಾರಾಯಿ ಮದ್ದು ಅನ್ನೋ ಮಾತಿದೆ. ಹಾಗೆಯೇ ಮಲೆನಾಡಿನಲ್ಲಿ ಏಡಿ ಸಾರು ತಿಂದ್ರೆ ಯಾವುದೇ ಕಾಯಿಲೆ ಬರಲ್ಲ ಅನ್ನೋ ಮಾತು ಕೂಡ ಬಹಳ ಹಿಂದಿನಿಂದಲೂ ಇದೆ. ಹೀಗಾಗಿಯೇ ಏಡಿ ಸಾರು ಸವಿಯೋದ್ರಲ್ಲಿ ಹಿಂದಿನಿಂದಲೂ ಮಲೆನಾಡಿಗರು ಒಂದು ಹೆಜ್ಜೆ ಮುಂದೆನೇ.. ಸದ್ಯ ಕೊರೊನಾ ಹಿನ್ನೆಲೆಯಲ್ಲಿ ಏಡಿ ಸಾಂಬರಿಗೆ ಜನ ಹಾತೊರೆಯುತ್ತಿದ್ದಾರೆ.

‘ಏಡಿ ಸಾರು ಸವಿಯೋಣ, ಕೊರೊನಾದಿಂದ ದೂರವಿರೋಣ’ ‘ಏಡಿ ಸಾರು ಸವಿಯೋಣ, ಕೊರೊನಾದಿಂದ ದೂರವಿರೋಣ’ ಅನ್ನೋ ನಂಬಿಕೆಯಿಂದ ಏಡಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಏಡಿಗಳನ್ನ ಹಿಡಿದು ಮಾರಾಟ ಕೂಡ ಮಾಡಲಾಗ್ತಿದ್ದು, ಜನರು ಏಡಿಗಳಿಗೆ ಮುಗಿಬೀಳ್ತಿರೋದ್ರಿಂದ ಭಾರೀ ಡಿಮ್ಯಾಂಡ್ ಉಂಟಾಗಿದೆ. ಒಂದು ಕೆಜಿಗೆ 300-400 ರೂ ವರೆಗೆ ಹಣ ಕೊಟ್ಟು ಏಡಿಗಳನ್ನ ಖರೀದಿಸ್ತಿದ್ದಾರೆ.

ಏಡಿಗಳನ್ನ ಹಿಡಿಯಲೆಂದೇ ಜನರು ಊರಿನಿಂದ ಮತ್ತೊಂದು ಊರಿಗೆ ಹೋಗಿ ಅಲ್ಲಿನ ಗದ್ದೆಗಳಲ್ಲಿ ಶಿಕಾರಿ ಮಾಡ್ತಿದ್ದಾರೆ. ಕೆಲವರು 2-3 ಕೆಜಿಯಷ್ಟು ಏಡಿ ಹಿಡಿದು ಸಾವಿರಕ್ಕೂ ಹೆಚ್ಚು ಹಣವನ್ನ ಪ್ರತಿದಿನ ಗಳಿಸ್ತಾ ಇದ್ದಾರೆ. ಈ ವರ್ಷವಂತೂ ಭಾರೀ ಪ್ರಮಾಣದಲ್ಲಿ ಏಡಿಗಳು ಕೂಡ ಪ್ರತ್ಯಕ್ಷವಾಗಿರೋದ್ರಿಂದ ಜನರಿಗೆ ಏಡಿ ಹಿಡಿಯೋದೇ ಒಂದು ಸಂಭ್ರಮ.

150-200 ರೂಪಾಯಿ ಕೊಟ್ರೆ ಮೀನು, ಚಿಕನ್ ಸಿಗುತ್ತೆ. ಆದ್ರೆ ಕೆಜಿ ಏಡಿಗೆ 300 ರೂ ಕೊಟ್ರೂ ಸಿಗ್ತಿಲ್ಲ. ಒಟ್ಟಿನಲ್ಲಿ ಏಡಿ, ಕೊರೊನಾ ತಡೆಗಟ್ಟುತ್ತೋ, ಬಿಡುತ್ತೋ ಗೊತ್ತಿಲ್ಲ.. ಆದ್ರೆ ಈ ಸೀಸನ್ ಮಾತ್ರ ಏಡಿಗಳಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿರೋದಂತೂ ಸತ್ಯ. -ಪ್ರಶಾಂತ್ ಮೂಡ್ಗೆರೆ

Follow Us
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ