AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ಯ ಧರ್ಮದ ಯುವಕನ ಜೊತೆ ಮದ್ವೆ: ಹುಡುಗಿಯ ಕುಟುಂಬಸ್ಥರಿಂದ 3 ಬಾರಿ ಅಟ್ಯಾಕ್.. ಎಲ್ಲಿ?

ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ ಯುವತಿ ಕುಟುಂಬಸ್ಥರು ಅಟ್ಯಾಕ್ ಮಾಡಿದ್ದಾರೆ. ಹಾಡಹಗಲೇ ಮನೆಗೆ ನುಗ್ಗಿ ಮಾಡಿರೋ ರಾದ್ಧಾಂತದಿಂದ ಯುವಕನ ಕುಟುಂಬಸ್ಥರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗೆ ಯುವಕನ ಕುಟುಂಬದ ಮೇಲೆ ಅಟ್ಯಾಕ್ ಮಾಡಿದ ಯುವತಿ ಕುಟುಂಬಸ್ಥರು ಈಗ ಎಸ್ಕೇಪ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಕೈಗೆ, ತಲೆಗೆ ಪೆಟ್ಟು ತಿಂದು ಬ್ಯಾಂಡೇಜ್ ಹಾಕಿಕೊಂಡು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸೀತಾರಾಮಪುರ ಗ್ರಾಮದೋರು ಕೂತಿದ್ದಾರೆ. ಇವರಿಗೆ ಹೀಗೆ ಥಳಿಸಿರೋದು ಬೇಱರು ಮನೆಗೆ ಸೊಸೆಯಾಗಿ ಬಂದಿದ್ದ ಯುವತಿ ಕುಟುಂಬಸ್ಥರು. ಸೀತಾರಾಮಪುರದ ಮೋಹನ್, […]

ಅನ್ಯ ಧರ್ಮದ ಯುವಕನ ಜೊತೆ ಮದ್ವೆ: ಹುಡುಗಿಯ ಕುಟುಂಬಸ್ಥರಿಂದ 3 ಬಾರಿ ಅಟ್ಯಾಕ್.. ಎಲ್ಲಿ?
ಆಯೇಷಾ ಬಾನು
|

Updated on:Sep 24, 2020 | 3:31 PM

Share

ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ ಯುವತಿ ಕುಟುಂಬಸ್ಥರು ಅಟ್ಯಾಕ್ ಮಾಡಿದ್ದಾರೆ. ಹಾಡಹಗಲೇ ಮನೆಗೆ ನುಗ್ಗಿ ಮಾಡಿರೋ ರಾದ್ಧಾಂತದಿಂದ ಯುವಕನ ಕುಟುಂಬಸ್ಥರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗೆ ಯುವಕನ ಕುಟುಂಬದ ಮೇಲೆ ಅಟ್ಯಾಕ್ ಮಾಡಿದ ಯುವತಿ ಕುಟುಂಬಸ್ಥರು ಈಗ ಎಸ್ಕೇಪ್ ಆಗಿದ್ದಾರೆ.

ಆಸ್ಪತ್ರೆಯಲ್ಲಿ ಕೈಗೆ, ತಲೆಗೆ ಪೆಟ್ಟು ತಿಂದು ಬ್ಯಾಂಡೇಜ್ ಹಾಕಿಕೊಂಡು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸೀತಾರಾಮಪುರ ಗ್ರಾಮದೋರು ಕೂತಿದ್ದಾರೆ. ಇವರಿಗೆ ಹೀಗೆ ಥಳಿಸಿರೋದು ಬೇಱರು ಮನೆಗೆ ಸೊಸೆಯಾಗಿ ಬಂದಿದ್ದ ಯುವತಿ ಕುಟುಂಬಸ್ಥರು. ಸೀತಾರಾಮಪುರದ ಮೋಹನ್, ಅರಳಹಳ್ಳಿಯ ರಂಜಿತಾ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸ್ತಿದ್ರು. ಇವರ ಪ್ರೀತಿಗೆ ಯುವತಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ರು. ಇದ್ಯಾವುದನ್ನೂ ಲೆಕ್ಕಿಸದ ಮೋಹನ್, ಆಗಸ್ಟ್ 13ರಂದು ರಂಜಿತಾಳ ಮದುವೆಯಾಗಿದ್ದ. ಮೇಲ್ವರ್ಗಕ್ಕೆ ಸೇರಿದ ಮೋಹನ್, ದಲಿತ ಯುವತಿಯನ್ನ ಮದುವೆಯಾಗಿದ್ದರಿಂದ ಯುವತಿ ಕುಟುಂಬದವರು ರೊಚ್ಚಿಗೆದ್ದು ಇವರ ಮೇಲೆ ಮೂರು ಬಾರಿ ಅಟ್ಯಾಕ್ ಮಾಡಿದ್ದಾರಂತೆ.

ಆದ್ರೆ, ಇಲ್ಲೊಂದು ಟ್ವಿಸ್ಟ್ ಇದೆ. ಈ ಮೋಹನ್​ಗೆ ಒಬ್ಬ ಅಕ್ಕ ಇದ್ದಾರೆ. ಹೆಸರು ಲಕ್ಷ್ಮೀ ಅಂತಾ. ಈಕೆಯ ಗಂಡ ಅಣ್ಣಪ್ಪನ ಕುಮ್ಮಕ್ಕಿನಿಂದ ಯುವತಿ ಮನೆಯವರು ಹಲ್ಲೆ ಮಾಡಿದ್ದಾರಂತೆ. ಲಕ್ಷ್ಮೀ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರಂತೆ. ಇದನ್ನ ಸಹಿಸದ ಅಣ್ಣಪ್ಪ ರಂಜಿತಾ ಮನೆಯವರಿಗೆ ಕಿವಿಯೂದಿ, ಇವರ ಮೇಲೆ ಹಲ್ಲೆ ಮಾಡಲು ಕಾರಣನಾಗಿದ್ದಾನೆ ಅಂತಾ ಲಕ್ಷ್ಮೀ ಆರೋಪಿಸಿದ್ದಾರೆ.

ನಮ್ಮ ಕುಟುಂಬದ ಮೇಲೆ ಮೂರು ಬಾರಿ ದಾಳಿ ಮಾಡಿದ್ದಾರೆ. ಅಲ್ದೆ, ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ಪೊಲೀಸರು ನಮಗೆ ಸೂಕ್ತ ರಕ್ಷಣೆ ಕೊಡಬೇಕು ಅಂತಾ ಯುವಕನ ತಾಯಿ ರೇಣುಕಾಬಾಯಿ ಮನವಿ ಮಾಡಿದ್ದಾರೆ.

ಪ್ರೀತಿಸಿ ಮದುವೆಯಾದವರು ನೆಮ್ಮದಿಯಾಗಿ ಬಾಳಲು ಬಿಡದ ಯುವತಿ ಕುಟುಂಬಸ್ಥರಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಬೇಕಿದೆ. ಇಲ್ಲದೇ ಹೋದ್ರೆ, ಮುಂದಿನ ದಿನಗಳಲ್ಲಿ ಇವರ ಮೇಲೆ ಮತ್ತಷ್ಟು ಬಾರಿ ದಾಳಿ ಮಾಡೋ ಎಲ್ಲ ಸಾಧ್ಯತೆಗಳು ಕಂಡು ಬರ್ತಿವೆ.

Published On - 3:12 pm, Thu, 24 September 20

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು