AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡು ‌ಮಕ್ಕಳ ಜೊತೆ ಕುಸ್ತಿ ಹಿಡಿದು ಸೈ ಎನಿಸಿಕೊಂಡ ಹೆಣ್ಮಕ್ಳು: ಮೈದಾನದಲ್ಲಿ ಕುಸ್ತಿ ಕಲಿಗಳ ಕಾಳಗ‌ ಹೇಗಿತ್ತು ನೋಡಿ

ಆಧುನಿಕ ಕಾಲದಲ್ಲಿ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನ ಉಳಿಸಲು ಇಲ್ಲೊಂದು ಕಡೆ ಕುಸ್ತಿ ಆಯೋಜನೆ ಮಾಡಲಾಗಿತ್ತು. ಅದರಲ್ಲೂ ಇದೇ ಮೊದಲ ಬಾರಿಗೆ ಅಲ್ಲಿ ಹೆಣ್ಣು ಮಕ್ಕಳ ಕುಸ್ತಿ ಆಯೋಜನೆ ಮಾಡಲಾಗಿದ್ದು, ವಿಶೇಷವಾಗಿತ್ತು. ಎಲ್ಲಿ ಅಂತೀರಾ? ಇಲ್ಲಿದೆ ನೋಡಿ.

ಕಿರಣ್ ಹನುಮಂತ್​ ಮಾದಾರ್
|

Updated on: Mar 29, 2023 | 8:31 AM

Share
ಒಂದು ಕಡೆ ಕದನ ಕಲಿಗಳ ಹೋರಾಟಕ್ಕೆ ಸಿದ್ದವಾಗಿರುವ ಕುಸ್ತಿ ಅಖಾಡ, ಆಖಾಡದಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಹೆಣ್ಣು‌ ಮಕ್ಕಳ ಕಾಳಗ. ಇನ್ನೊಂದು‌ ಕಡೆ ಕುಸ್ತಿ ನೋಡಲು ಸೇರಿದ ಜನ, ಇವೆಲ್ಲ ದೃಶ್ಯಗಳು‌ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.

ಒಂದು ಕಡೆ ಕದನ ಕಲಿಗಳ ಹೋರಾಟಕ್ಕೆ ಸಿದ್ದವಾಗಿರುವ ಕುಸ್ತಿ ಅಖಾಡ, ಆಖಾಡದಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಹೆಣ್ಣು‌ ಮಕ್ಕಳ ಕಾಳಗ. ಇನ್ನೊಂದು‌ ಕಡೆ ಕುಸ್ತಿ ನೋಡಲು ಸೇರಿದ ಜನ, ಇವೆಲ್ಲ ದೃಶ್ಯಗಳು‌ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.

1 / 8
ಹುಬ್ಬಳ್ಳಿಯ ಉಣಕಲ್ ಸಿದ್ದಪ್ಪಜ್ಜನ ಜಾತ್ರೆ ನಿಮಿತ್ಯ ಪ್ರತಿವರ್ಷದಂತೆ ಈ ವರ್ಷವೂ ಕುಸ್ತಿ ಹಮ್ಮಿಕೊಳ್ಳಲಾಗಿತ್ತು. ಇ ಬಾರಿಯ ಇನ್ನೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ರಾಜ್ಯ ಸೇರಿ ಹೊರ ರಾಜ್ಯದ ಹೆಣ್ಣು ಮಕ್ಕಳಿಗಾಗಿ   ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಹುಬ್ಬಳ್ಳಿಯ ಉಣಕಲ್ ಸಿದ್ದಪ್ಪಜ್ಜನ ಜಾತ್ರೆ ನಿಮಿತ್ಯ ಪ್ರತಿವರ್ಷದಂತೆ ಈ ವರ್ಷವೂ ಕುಸ್ತಿ ಹಮ್ಮಿಕೊಳ್ಳಲಾಗಿತ್ತು. ಇ ಬಾರಿಯ ಇನ್ನೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ರಾಜ್ಯ ಸೇರಿ ಹೊರ ರಾಜ್ಯದ ಹೆಣ್ಣು ಮಕ್ಕಳಿಗಾಗಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

2 / 8
ಗಂಡು‌ ಮಕ್ಕಳಂತೆ ಆಖಾಡಕ್ಕಿಳಿದ ಹೆಣ್ಣು ಮಕ್ಕಳ ಕುಸ್ತಿ ನೋಡುಗರನ್ನ ಸೆಳೆಯಿತು. ಆಖಾಡದಲ್ಲಿ ಹೆಣ್ಣು ಮಕ್ಕಳು ಗಂಡು ‌ಮಕ್ಕಳ ಜೊತೆನೂ ಕುಸ್ತಿ ಆಡಿ ಅವರನ್ನು ಸೋಲಿಸಿ ಸೈ ಎಣಿಸಿಕೊಂಡರು. ಮಹಾರಾಷ್ಟ್ರದಿಂದ ಕುಸ್ತಿ ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಗಂಡು‌ ಮಕ್ಕಳಂತೆ ಆಖಾಡಕ್ಕಿಳಿದ ಹೆಣ್ಣು ಮಕ್ಕಳ ಕುಸ್ತಿ ನೋಡುಗರನ್ನ ಸೆಳೆಯಿತು. ಆಖಾಡದಲ್ಲಿ ಹೆಣ್ಣು ಮಕ್ಕಳು ಗಂಡು ‌ಮಕ್ಕಳ ಜೊತೆನೂ ಕುಸ್ತಿ ಆಡಿ ಅವರನ್ನು ಸೋಲಿಸಿ ಸೈ ಎಣಿಸಿಕೊಂಡರು. ಮಹಾರಾಷ್ಟ್ರದಿಂದ ಕುಸ್ತಿ ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

3 / 8
ಪುರಾತನ ಕಾಲದಿಂದಲೂ ಇಲ್ಲಿ ಕುಸ್ತಿ ಆಯೋಜನೆ ‌ಮಾಡಲಾಗುತ್ತ ಬಂದಿದೆ. ಉಣಕಲ್ ಸಿದ್ದಪ್ಪಜ್ಜನ ಜಾತ್ರೆ ಹಿನ್ನಲೆ ಕಳೆದ ನಾಲ್ಕ ದಿನಗಳಿಂದ ಕುಸ್ತಿ ಪಂದ್ಯಾಟಗಳು‌ ನಡೆಯುತ್ತಿವೆ. ಹೆಣ್ಣು ಮಕ್ಕಳು ಜಿದ್ದಿಗೆ ಬಿದ್ದು ಹುಡಗರನ್ನ ಕಣದಲ್ಲಿ ಸೋಲಿಸುವ ದೃಶ್ಯಕ್ಕೆ ನೆರೆದ ಜನ ಕೇಕೆ ಹಾಕುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದರು.

ಪುರಾತನ ಕಾಲದಿಂದಲೂ ಇಲ್ಲಿ ಕುಸ್ತಿ ಆಯೋಜನೆ ‌ಮಾಡಲಾಗುತ್ತ ಬಂದಿದೆ. ಉಣಕಲ್ ಸಿದ್ದಪ್ಪಜ್ಜನ ಜಾತ್ರೆ ಹಿನ್ನಲೆ ಕಳೆದ ನಾಲ್ಕ ದಿನಗಳಿಂದ ಕುಸ್ತಿ ಪಂದ್ಯಾಟಗಳು‌ ನಡೆಯುತ್ತಿವೆ. ಹೆಣ್ಣು ಮಕ್ಕಳು ಜಿದ್ದಿಗೆ ಬಿದ್ದು ಹುಡಗರನ್ನ ಕಣದಲ್ಲಿ ಸೋಲಿಸುವ ದೃಶ್ಯಕ್ಕೆ ನೆರೆದ ಜನ ಕೇಕೆ ಹಾಕುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದರು.

4 / 8
ಕುಸ್ತಿ ಆಖಾಡದಲ್ಲಿ‌ ಹುಡುಗರ ಎದುರು ತೊಡೆತಟ್ಟಿ ಮಣ್ಣು ಮುಕ್ಕಿಸಿದ್ರು. ಕೆಲವೊಂದಿಷ್ಟು ಜನ ಕಣದಲ್ಲಿಯೇ ಬಹುಮಾನ ಘೋಷಣೆ ಮಾಡಿದರು. ಮಹಿಳೆಯರಲ್ಲದೆ ಯುವಕರು ಕೂಡ ಕುಸ್ತಿ ಪಂದ್ಯಾಟದಲ್ಲಿ ಭಾಗಿಯಾಗಿ ಕುಸ್ತಿ ಆಡಿದರು.

ಕುಸ್ತಿ ಆಖಾಡದಲ್ಲಿ‌ ಹುಡುಗರ ಎದುರು ತೊಡೆತಟ್ಟಿ ಮಣ್ಣು ಮುಕ್ಕಿಸಿದ್ರು. ಕೆಲವೊಂದಿಷ್ಟು ಜನ ಕಣದಲ್ಲಿಯೇ ಬಹುಮಾನ ಘೋಷಣೆ ಮಾಡಿದರು. ಮಹಿಳೆಯರಲ್ಲದೆ ಯುವಕರು ಕೂಡ ಕುಸ್ತಿ ಪಂದ್ಯಾಟದಲ್ಲಿ ಭಾಗಿಯಾಗಿ ಕುಸ್ತಿ ಆಡಿದರು.

5 / 8
ಇನ್ನು ಕುಸ್ತಿ ಪಂದ್ಯಾಟದಲ್ಲಿ ಭಾಗಿಯಾದವರಿಗೆ ಬಹುಮಾನವೂ ಇತ್ತು. ಮೊದಲ ಬಾಹುಮಾನ 21 ಸಾವಿರ ಒಂದು ಬೆಳ್ಳಿ ಗದೆ, ಎರಡನೇ ಬಹುಮಾನ 15 ಸಾವಿರ ಬೆಳ್ಳಿ ಗದೆ, ಮೂರನೇ ಬಹುಮಾನ 10 ಸಾವಿರ, ನಾಲ್ಕನೇ ಬಹುಮಾನ ಐದು ಸಾವಿರದ ಗದೆಯನ್ನ ಕೊಡಲಾಗುತ್ತೆ.

ಇನ್ನು ಕುಸ್ತಿ ಪಂದ್ಯಾಟದಲ್ಲಿ ಭಾಗಿಯಾದವರಿಗೆ ಬಹುಮಾನವೂ ಇತ್ತು. ಮೊದಲ ಬಾಹುಮಾನ 21 ಸಾವಿರ ಒಂದು ಬೆಳ್ಳಿ ಗದೆ, ಎರಡನೇ ಬಹುಮಾನ 15 ಸಾವಿರ ಬೆಳ್ಳಿ ಗದೆ, ಮೂರನೇ ಬಹುಮಾನ 10 ಸಾವಿರ, ನಾಲ್ಕನೇ ಬಹುಮಾನ ಐದು ಸಾವಿರದ ಗದೆಯನ್ನ ಕೊಡಲಾಗುತ್ತೆ.

6 / 8
ಇನ್ನು ಉಣಕಲ್ ಕುಸ್ತಿ ಪೈಲ್ವಾನಗಳ ತವರು, ಇನ್ನು ತಮ್ಮೂರಿನಲ್ಲಿ ನಡೆದ ಅದ್ಬುತ ಕುಸ್ತಿಯ ಕ್ಷಣಗಳನ್ನ ನೋಡಿ  ನೆರೆದಿದ್ದ ಜನರು ಸಂತೋಷಪಟ್ಟರು.

ಇನ್ನು ಉಣಕಲ್ ಕುಸ್ತಿ ಪೈಲ್ವಾನಗಳ ತವರು, ಇನ್ನು ತಮ್ಮೂರಿನಲ್ಲಿ ನಡೆದ ಅದ್ಬುತ ಕುಸ್ತಿಯ ಕ್ಷಣಗಳನ್ನ ನೋಡಿ ನೆರೆದಿದ್ದ ಜನರು ಸಂತೋಷಪಟ್ಟರು.

7 / 8
ಒಟ್ಟಿನಲ್ಲಿ ಉಣಕಲ್​ನಲ್ಲಿ ನಡೆದ ಕುಸ್ತಿ ಕಾಳಗದಲ್ಲಿ ಹುಡಗಿಯರು ಹುಡಗರನ್ನೇ ಸೋಲಿಸಿ ಸೈ ಎಣಿಸಿಕೊಂಡರು. ಆಖಾಡದಲ್ಲಿ ನಾವೂ ಯಾರಿಗೂ ಕಡಿಮೆ ಇಲ್ಲ ಎನ್ನುವ ತರ ಹುಡಗಿಯರು ತೊಡೆ ತಟ್ಟಿದ್ರು. ಇನ್ನು ಸಿದ್ದಪ್ಪಜ್ಜನ ಜಾತ್ರೆ ಹಿನ್ನಲೆ ಅನೇಕ ಸಾಮಾಜಿಕ ಕಾರ್ಯಗಳ ಜೊತೆ, ಗ್ರಾಮೀಣ ಕ್ರೀಡೆ ಉಳಿಸುವ ಕೆಲಸವೂ ಆಗುತ್ತಿದೆ.

ಒಟ್ಟಿನಲ್ಲಿ ಉಣಕಲ್​ನಲ್ಲಿ ನಡೆದ ಕುಸ್ತಿ ಕಾಳಗದಲ್ಲಿ ಹುಡಗಿಯರು ಹುಡಗರನ್ನೇ ಸೋಲಿಸಿ ಸೈ ಎಣಿಸಿಕೊಂಡರು. ಆಖಾಡದಲ್ಲಿ ನಾವೂ ಯಾರಿಗೂ ಕಡಿಮೆ ಇಲ್ಲ ಎನ್ನುವ ತರ ಹುಡಗಿಯರು ತೊಡೆ ತಟ್ಟಿದ್ರು. ಇನ್ನು ಸಿದ್ದಪ್ಪಜ್ಜನ ಜಾತ್ರೆ ಹಿನ್ನಲೆ ಅನೇಕ ಸಾಮಾಜಿಕ ಕಾರ್ಯಗಳ ಜೊತೆ, ಗ್ರಾಮೀಣ ಕ್ರೀಡೆ ಉಳಿಸುವ ಕೆಲಸವೂ ಆಗುತ್ತಿದೆ.

8 / 8
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ