AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷ್ಮೀದೇವಿ ಜಾತ್ರೆಯಲ್ಲಿ ಕುದುರೆ ಕಲರವ- ಇಲ್ಲಿ ನಡೆಯುತ್ತೆ ರಾಜ್ಯದ ಏಕೈಕ ಕುದುರೆ ಸಂತೆ!

ಬೆಳಗಾವಿ: ಇದು ರಾಜ್ಯದಲ್ಲಿ ನಡೆಯುವ ಏಕೈಕ ಕುದುರೆ ಸಂತೆ. ಕುದುರೆ ಮಾರಾಟದಿಂದ ಹಿಡಿದು ಕುದುರೆ ಕುಣಿತದವರೆಗೂ ಎಲ್ಲಾ ಕಲರ್​ಫುಲ್. ಇಲ್ಲಿಗೆ ಬರುವ ಕುದುರೆಗಳ ರೆಟ್ ಕೇಳಿದ್ರೆ ನೀವು ದಂಗಾಗಿ ಹೋಗ್ತೀರ. ನೆರೆದವರ ಹುಬ್ಬೇರಿಸುವಂತೆ ಸ್ಟೆಪ್ ಹಾಕ್ತಿರೋ ಕುದುರೆಗಳು. ಇನ್ನು ಡ್ಯಾನ್ಸ್​ಗೆ ಫಿದಾ ಆಗಿ, ಕುದುರೆ ನೃತ್ಯವನ್ನು ನೋಡೋದ್ರಲ್ಲಿ ಮಗ್ನರಾಗಿರೋ ಜನ. ಅಷ್ಟಕ್ಕೂ ಈ ಕುದುರೆ ಸಂತೆ ನಡೆಯೋದಾದ್ರೂ ಎಲ್ಲಿ ಅಂದ್ರಾ? ಇದು  ಕಂಡಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ. 3 ದಿನ ನಡೆಯುವ ಜಾತ್ರೆ: ವರ್ಷಕ್ಕೊಮ್ಮೆ ರಾಯಬಾಗ […]

ಲಕ್ಷ್ಮೀದೇವಿ ಜಾತ್ರೆಯಲ್ಲಿ ಕುದುರೆ ಕಲರವ- ಇಲ್ಲಿ ನಡೆಯುತ್ತೆ ರಾಜ್ಯದ ಏಕೈಕ ಕುದುರೆ ಸಂತೆ!
ಸಾಧು ಶ್ರೀನಾಥ್​
|

Updated on:Jan 06, 2020 | 5:59 PM

Share

ಬೆಳಗಾವಿ: ಇದು ರಾಜ್ಯದಲ್ಲಿ ನಡೆಯುವ ಏಕೈಕ ಕುದುರೆ ಸಂತೆ. ಕುದುರೆ ಮಾರಾಟದಿಂದ ಹಿಡಿದು ಕುದುರೆ ಕುಣಿತದವರೆಗೂ ಎಲ್ಲಾ ಕಲರ್​ಫುಲ್. ಇಲ್ಲಿಗೆ ಬರುವ ಕುದುರೆಗಳ ರೆಟ್ ಕೇಳಿದ್ರೆ ನೀವು ದಂಗಾಗಿ ಹೋಗ್ತೀರ. ನೆರೆದವರ ಹುಬ್ಬೇರಿಸುವಂತೆ ಸ್ಟೆಪ್ ಹಾಕ್ತಿರೋ ಕುದುರೆಗಳು. ಇನ್ನು ಡ್ಯಾನ್ಸ್​ಗೆ ಫಿದಾ ಆಗಿ, ಕುದುರೆ ನೃತ್ಯವನ್ನು ನೋಡೋದ್ರಲ್ಲಿ ಮಗ್ನರಾಗಿರೋ ಜನ. ಅಷ್ಟಕ್ಕೂ ಈ ಕುದುರೆ ಸಂತೆ ನಡೆಯೋದಾದ್ರೂ ಎಲ್ಲಿ ಅಂದ್ರಾ? ಇದು  ಕಂಡಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ.

3 ದಿನ ನಡೆಯುವ ಜಾತ್ರೆ: ವರ್ಷಕ್ಕೊಮ್ಮೆ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಲಕ್ಷ್ಮೀದೇವಿ ಜಾತ್ರೆಯನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತೆ. 3 ದಿನಗಳ ಕಾಲ ನಡೆಯುವ ಜಾತ್ರೆ, ಈ ಬಾರಿಯೂ ಕಳೆಗಟ್ಟಿದೆ. ರಾಜ್ಯದ ವಿವಿಧ ಭಾಗಗಳಿಂದಲೂ ಇಲ್ಲಿದೆ ಜನ ಬರ್ತಾರೆ. ಹಾಗೇ ನೆರೆ ರಾಜ್ಯಗಳ ಭಕ್ತರು ಕೂಡ ಇಲ್ಲಿಗೆ ಹಾಜರಾಗ್ತಾರೆ. ಜಾತ್ರೆ ಮತ್ತೊಂದು ವಿಶೇಷತೆ ಅಂದ್ರೆ, ಲಕ್ಷ್ಮೀ ದೇವಿ ಜಾತ್ರೆ ಜತೆ ಜತೆಗೆ ಕುದುರೆ ಸಂತೆ ಕೂಡ ಇಲ್ಲಿ ನಡೆಯುತ್ತೆ. 3 ದಿನಗಳ ಕಾಲ ನಡೆಯುವ ಈ ಸಂತೆಯಲ್ಲಿ 200ಕ್ಕೂ ಹೆಚ್ಚು ಕುದುರೆಗಳು ಭಾಗವಹಿಸುತ್ತವೆ. ಮಹಾರಾಷ್ಟ್ರದ ಮಿರಜ್, ಇಚಲಕರಂಜಿ ಸೇರಿದಂತೆ ಮುಧೋಳ, ಮಹಾಲಿಂಗಪುರ, ಹಾರೋಗೇರಿ, ಚಿಂಚಲಿ ಮತ್ತಿತರ ಭಾಗಗಳಿಂದ ವ್ಯಾಪಾರಕ್ಕೆಂದು ಕುದುರೆಗಳನ್ನ ಈ ಸಂತೆಗೆ ತರ್ತಾರೆ.

10ಕ್ಕೂ ಅಧಿಕ ಕುದುರೆ ತಳಿಗಳು: ಈ ಕುದರೆ ಸಂತೆಯಲ್ಲಿ ಕಾಟೆವಾಡ್, ಮಾರ್ವಾಡ್, ಸಿಂಧ್ ಪಂಜಾಬಿ, ಸಿಂಧ್, ಪಂಚಕಲ್ಯಾಣಿ ಸೇರಿದಂತೆ ಹತ್ತಕ್ಕೂ ಅಧಿಕ ಕುದುರೆ ತಳಿಗಳು ಕಂಡು ಬಂದ್ವು. ತಳಿಗಳ ಮತ್ತು ಕುದುರೆ ದಷ್ಟಪುಷ್ಟತೆ ಆಧಾರದ ಮೇಲೆ ರೇಟ್ ಫಿಕ್ಸ್ ಆಗುತ್ತೆ. 50 ಸಾವಿರದಿಂದ ಹಿಡಿದು 2ರಿಂದ3 ಲಕ್ಷದವರೆಗೂ ಕುದುರೆಗಳು ಇಲ್ಲಿ ಮಾರಾಟವಾಗ್ತಿವೆ. ರೈತರು, ಮೆರವಣಿಗೆ ಮಾಡುವವರು, ಕುದುರೆ ಮೇಲೆ ಓಡಾಡಬೇಕೆನ್ನುವವರು ಕುದುರೆಗಳನ್ನ ಖರೀದಿ ಮಾಡ್ತಾರೆ. ಕಳೆದ ವರ್ಷದಿಂದ ಕುದುರೆ ಸಂತೆ ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

Published On - 5:49 pm, Mon, 6 January 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ