AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಡಾನಗರಿ ಧಾರವಾಡಕ್ಕೆ ಶುರುವಾಯ್ತು ಹೊಸ ಟೆನ್ಷನ್, ಜಿಲ್ಲೆಗೆ ILI ಮತ್ತು SARI ಕಂಟಕ!

ಧಾರವಾಡ: ಕರುನಾಡಲ್ಲಿ ಕೊರೊನಾ ಸುನಾಮಿ ವಿಸ್ಫೋಟಗೊಳ್ತಿದೆ. ದಶ ದಿಕ್ಕುಗಳಿಂದಲೂ ದಾಳಿ ಮಾಡ್ತಿರೋ ಕ್ರೂರಿ ಕೇಕೆ ಹಾಕ್ತಿದೆ. ಕಳ್ಳ ದಾರಿಯಲ್ಲಿ ನುಸುಳಿ. ಕಂಡ ಕಂಡವರ ದೇಹ ಹೊಕ್ತಿರೋ ಹೆಮ್ಮಾರಿ ಎಲ್ಲರನ್ನೂ ನಡುಗಿಸ್ತಿದೆ. ಮುಂಬೈನ ನಂಜಿನ ಮಹಾಘಾತದ ನಡುವೆ ಧಾರವಾಡಕ್ಕೆ ಮತ್ತೊಂದು ಮಹಾ ಆಘಾತ ಬಂದಪ್ಪಳಿಸಿದೆ. ಧಾರವಾಡಕ್ಕೆ ಕಂಟಕವಾಗ್ತಿದೆ ILI, SARI ಪ್ರಕರಣ! ಯೆಸ್​​, ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತ್ರಿಶತಕದತ್ತ ಮುನ್ನುಗ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ […]

ಪೇಡಾನಗರಿ ಧಾರವಾಡಕ್ಕೆ ಶುರುವಾಯ್ತು ಹೊಸ ಟೆನ್ಷನ್, ಜಿಲ್ಲೆಗೆ ILI ಮತ್ತು SARI ಕಂಟಕ!
ಆಯೇಷಾ ಬಾನು
ಆಯೇಷಾ ಬಾನು|

Updated on: Jun 28, 2020 | 7:19 AM

Share

ಧಾರವಾಡ: ಕರುನಾಡಲ್ಲಿ ಕೊರೊನಾ ಸುನಾಮಿ ವಿಸ್ಫೋಟಗೊಳ್ತಿದೆ. ದಶ ದಿಕ್ಕುಗಳಿಂದಲೂ ದಾಳಿ ಮಾಡ್ತಿರೋ ಕ್ರೂರಿ ಕೇಕೆ ಹಾಕ್ತಿದೆ. ಕಳ್ಳ ದಾರಿಯಲ್ಲಿ ನುಸುಳಿ. ಕಂಡ ಕಂಡವರ ದೇಹ ಹೊಕ್ತಿರೋ ಹೆಮ್ಮಾರಿ ಎಲ್ಲರನ್ನೂ ನಡುಗಿಸ್ತಿದೆ. ಮುಂಬೈನ ನಂಜಿನ ಮಹಾಘಾತದ ನಡುವೆ ಧಾರವಾಡಕ್ಕೆ ಮತ್ತೊಂದು ಮಹಾ ಆಘಾತ ಬಂದಪ್ಪಳಿಸಿದೆ.

ಧಾರವಾಡಕ್ಕೆ ಕಂಟಕವಾಗ್ತಿದೆ ILI, SARI ಪ್ರಕರಣ! ಯೆಸ್​​, ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತ್ರಿಶತಕದತ್ತ ಮುನ್ನುಗ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ILI ಹಾಗೂ ಸಾರಿ ಪ್ರಕರಣಗಳು ಜಿಲ್ಲಾಡಳಿತಕ್ಕೆ ದೊಡ್ಡ ಟೆನ್ಷನ್ ತಂದೊಡ್ಡಿದೆ.

ಕೊರೊನಾಂತಕದ ದಾಳಿ ಇಡ್ತಿರೋ ಹೊತ್ತಲ್ಲೇ ಪ್ರತಿನಿತ್ಯ ಬರುತ್ತಿರೋ ಪ್ರಕರಣಗಳಲ್ಲಿ ILI ನಿಂದ ಆಸ್ಪತ್ರೆಗೆ ದಾಖಲಾದವರೇ ಹೆಚ್ಚಾಗಿದ್ದಾರೆ. ಅಂದ್ರೆ, ತೀವ್ರ ಜ್ವರ, ಕೆಮ್ಮು ಹಾಗೂ ನೆಗಡಿಯಿಂದ ಬಳಲಿ ಆಸ್ಪತ್ರೆ ಸೇರ್ತಿದ್ದಾರೆ. ಅವರಿಗೂ ಕೂಡ ಕೊರೊನಾ ಸೋಂಕು ತಗುಲಿರೋದು ಪರೀಕ್ಷೇಯ್ಲಿ ಪಕ್ಕಾ ಆಗ್ತಿದೆ. ಇದ್ರಿಂದ ಧಾರವಾಡ ಜಿಲ್ಲೆ ಹಾಗೂ ಅಕ್ಕಪಕ್ಕದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಜಿಲ್ಲಾಡಳಿತ ಹಾಗೂ ವೈದ್ಯಕೀಯ ಸಿಬ್ಬಂದಿ ಕೂಡ ಕಂಗೆಟ್ಟು ಕೂತಿದ್ದಾರೆ.

ಇನ್ನು, ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಪರೀಕ್ಷೆ ಮಾಡಿದಾಗ ಕೊರೊನಾ ವಿಸ್ಫೋಟಗೊಳ್ತಿರೋದು ಪಕ್ಕಾ ಆಗಿತ್ತು. ಅಲ್ಲೊಂದು ಇಲ್ಲೊಂದು ILI ಹಾಗೂ SARI ಪ್ರಕರಳು ಪತ್ತೆಯಾಗ್ತಿದ್ವು. ಆದ್ರೆ ಇದೇ ಶುಕ್ರವಾರ ಜಿಲ್ಲೆಯಲ್ಲಿ ದೃಢಪಟ್ಟ 30 ಪ್ರಕರಣಗಳಲ್ಲಿ 20 ILI ಹಾಗೂ ಎರಡು SARI ಕೇಸ್​​​ಗಳೇ ಅನ್ನೋದು ಎಲ್ಲರ ನಿದ್ದೆಗೆಸಿಡಿಸಿದೆ. ಈ ಸೋಂಕಿತ ವ್ಯಕ್ತಿಗಳಿಗೆ ಕೊರೊನಾ ಎಲ್ಲಿಂದ ಬಂತು ಅನ್ನೋದು ತಿಳಿಯೋದೇ ಕಷ್ಟವಾಗಿದೆ.

ಇದೇ ರೀತಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಬರುತ್ತಿರೋ ಪ್ರಕರಣಗಳ ಪೈಕಿ ಸಾಕಷ್ಟು ಪ್ರಮಾಣದಲ್ಲಿ ILI ಪ್ರಕರಣಗಳೇ ಆಗಿವೆ. ಇದುವರೆಗೂ ಗ್ರಾಮೀಣ ಪ್ರದೇಶದಲ್ಲಿ ILI ಪ್ರಕರಣಗಳು ಹೆಚ್ಚಾಗಿ ಕಂಡು ಬರ್ತಿದೆ. ಇದನ್ನ ನೋಡಿದ್ರೆ ಕೊರೊನಾ ಮೂರನೇ ಹಂತಕ್ಕೆ ತಲುಪಿದೆಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ಒಟ್ನಲ್ಲಿ ಕೊರೊನಾ ಹಾವಳಿಗೆ ಸಿಲುಕಿ ಪೇಡಾನಗರಿ ಧಾರವಾಡ ದಂಗು ಬಡಿದು ಕೂತಿದೆ. ಕ್ರೂರಿ ವೈರಸ್ ಜೊತೆ ಜೊತೆಗೆ ILI, SARI ಕೇಸ್​​ಗಳು ರೌದ್ರಾವತಾರ ಮೆರೀತದ್ದು ಮಂದ್ಯಾವ ಗತಿ ಕಾಣಿಸುತ್ತೆ ಅಂತ ಜನ ಚಿಂತೆಗೆ ಬಿದ್ದಿದ್ದಾರೆ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ