AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮಗಾರಿ ವೇಳೆ ಹಾವಿಗೆ ಗಾಯ: ರಕ್ಷಣೆ-ಶುಶ್ರೂಷಣೆ ನಂತ್ರ ಸೀದಾ ಅಂತರಗಂಗೆ ಬೆಟ್ಟಕ್ಕೆ..

ಕೋಲಾರ: ಕೇರಳದಲ್ಲಿ ಸಿಡಿಮದ್ದು ತುಂಬಿದ್ದ ಆಹಾರ ನೀಡಿ ಗರ್ಭಿಣಿ ಆನೆಯನ್ನ ಕೊಂದ ಘಟನೆ ಮನುಕುಲವನ್ನೇ ಕಲುಕಿತ್ತು. ಆದ್ರೆ ಆ ಘಟನೆಗೆ ತದ್ವಿರುದ್ಧವಾದ ಘಟನೆ ಕೋಲಾರದಲ್ಲಿ ನಡೆಿದಿದೆ. ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿನ ರಕ್ಷಣೆ ಮಾಡಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ. ಕೋಲಾರ ನಗರದ ಕಠಾರಿಪಾಳ್ಯ ಬಡಾವಣೆಯಲ್ಲಿ ನಾಗರಕುಂಟೆ ಕಲ್ಯಾಣಿಯ ಪುನಃಶ್ಚೇತನ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನೆಲ ಅಗೆಯುವಾಗ, ಮಣ್ಣಿನಲ್ಲಿದ್ದ ನಾಗರಹಾವಿಗೆ ಗಡಾರಿಯಿಂದ ಬಲವಾದ ಪೆಟ್ಟು ಬಿದ್ದಿದೆ. ಗಾಯಗೊಂಡ ನಾಗರಹಾವಿನ ನರಳಾಟ ಕಂಡ ಸ್ಥಳೀಯರು, ಕೋಲಾರದ ಸ್ನೇಕ್ ರವಿಗೆ ವಿಷಯ […]

ಕಾಮಗಾರಿ ವೇಳೆ ಹಾವಿಗೆ ಗಾಯ: ರಕ್ಷಣೆ-ಶುಶ್ರೂಷಣೆ ನಂತ್ರ ಸೀದಾ ಅಂತರಗಂಗೆ ಬೆಟ್ಟಕ್ಕೆ..
ಸಾಧು ಶ್ರೀನಾಥ್​
|

Updated on:Jun 12, 2020 | 5:15 PM

Share

ಕೋಲಾರ: ಕೇರಳದಲ್ಲಿ ಸಿಡಿಮದ್ದು ತುಂಬಿದ್ದ ಆಹಾರ ನೀಡಿ ಗರ್ಭಿಣಿ ಆನೆಯನ್ನ ಕೊಂದ ಘಟನೆ ಮನುಕುಲವನ್ನೇ ಕಲುಕಿತ್ತು. ಆದ್ರೆ ಆ ಘಟನೆಗೆ ತದ್ವಿರುದ್ಧವಾದ ಘಟನೆ ಕೋಲಾರದಲ್ಲಿ ನಡೆಿದಿದೆ. ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿನ ರಕ್ಷಣೆ ಮಾಡಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.

ಕೋಲಾರ ನಗರದ ಕಠಾರಿಪಾಳ್ಯ ಬಡಾವಣೆಯಲ್ಲಿ ನಾಗರಕುಂಟೆ ಕಲ್ಯಾಣಿಯ ಪುನಃಶ್ಚೇತನ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನೆಲ ಅಗೆಯುವಾಗ, ಮಣ್ಣಿನಲ್ಲಿದ್ದ ನಾಗರಹಾವಿಗೆ ಗಡಾರಿಯಿಂದ ಬಲವಾದ ಪೆಟ್ಟು ಬಿದ್ದಿದೆ. ಗಾಯಗೊಂಡ ನಾಗರಹಾವಿನ ನರಳಾಟ ಕಂಡ ಸ್ಥಳೀಯರು, ಕೋಲಾರದ ಸ್ನೇಕ್ ರವಿಗೆ ವಿಷಯ ತಿಳಿಸಿದ್ದಾರೆ.

ಚೇತರಿಕೆಯಾಗುತ್ತಿದ್ದಂತೆ ಹಾವು ಅಂತರಗಂಗೆ ಬೆಟ್ಟಕ್ಕೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ರವಿ, ಗಾಯಗೊಂಡಿದ್ದ ನಾಗರಹಾವನ್ನು ಪಶು ಆಸ್ಪತ್ರೆಗೆ ಕೊಂಡೊಯ್ದು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಪೆಟ್ಟು ಬಿದ್ದ ಹಾವಿನ ಹೊಟ್ಟೆಗೆ ಪಶು ವೈದ್ಯರಿಂದ ಸ್ಟಿಚ‌ಸ್​ ಹಾಕಿಸಿ, ತಮ್ಮ ಮನೆಗೇ ಕೊಂಡೊಯ್ದು ಪೋಷಣೆ ಮಾಡಿದ್ದಾರೆ.

ಚೇತರಿಸಿಕೊಂಡ ನಂತರ ಹಾವನ್ನು ಅಂತರಗಂಗೆ ಬೆಟ್ಟ ಪ್ರದೇಶದಲ್ಲಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಸ್ನೇಕ್ ರವಿಯ ಈ ಕಾರ್ಯಕ್ಕೆ ಪ್ರಾಣಿ ಪ್ರಿಯರು ಮತ್ತು ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Published On - 5:10 pm, Fri, 12 June 20

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ