ಠಾಣೆ ಹೊರಗೆ ಗಾಯಾಳುವಿನ ನರಳಾಟ, ಠಾಣೆ ಒಳಗೆ ಸಿಬ್ಬಂದಿ‌ಯ ಕುಂಭಕರ್ಣ ನಿದ್ದೆ, ಯಾವೂರಲ್ಲಿ?

ಬೆಳಗಾವಿ: 2 ಕುಟುಂಬಗಳ ನಡುವಿನ ಗಲಾಟೆಯಲ್ಲಿ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಗಾಯಗಳೊಂದಿಗೆ ದೂರು ನೀಡುವುದಕ್ಕೆ ಠಾಣೆಗೆ ವ್ಯಕ್ತಿ ಭೇಟಿ ನೀಡಿದ್ದಾನೆ. ಆದರೆ ತೀವ್ರ ನೋವಿನಿಂದ ಗಾಯಾಳು ಠಾಣೆಯ ಮುಂದೆ ನರಳಾಡುತ್ತಿದ್ದರೂ ಸಹ ಠಾಣಾ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಿದ್ದೆ ಹೊಡೆಯುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಠಾಣೆಯಲ್ಲಿ ನೆಡೆದಿದೆ. ಅಕ್ಟೋಬರ್ 23ರಂದು ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಫುಲ್​ ವೈರಲ್ ಆಗಿದೆ. ಕಳೆದ ತಿಂಗಳು 23ರಂದು ರಾಮದುರ್ಗ ತಾಲೂಕಿನ ಬುದ್ನಿ ಖುರ್ದ್ […]

ಠಾಣೆ ಹೊರಗೆ ಗಾಯಾಳುವಿನ ನರಳಾಟ, ಠಾಣೆ ಒಳಗೆ ಸಿಬ್ಬಂದಿ‌ಯ ಕುಂಭಕರ್ಣ ನಿದ್ದೆ, ಯಾವೂರಲ್ಲಿ?

Updated on: Nov 18, 2020 | 8:46 AM

ಬೆಳಗಾವಿ: 2 ಕುಟುಂಬಗಳ ನಡುವಿನ ಗಲಾಟೆಯಲ್ಲಿ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಗಾಯಗಳೊಂದಿಗೆ ದೂರು ನೀಡುವುದಕ್ಕೆ ಠಾಣೆಗೆ ವ್ಯಕ್ತಿ ಭೇಟಿ ನೀಡಿದ್ದಾನೆ. ಆದರೆ ತೀವ್ರ ನೋವಿನಿಂದ ಗಾಯಾಳು ಠಾಣೆಯ ಮುಂದೆ ನರಳಾಡುತ್ತಿದ್ದರೂ ಸಹ ಠಾಣಾ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಿದ್ದೆ ಹೊಡೆಯುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಠಾಣೆಯಲ್ಲಿ ನೆಡೆದಿದೆ.

ಅಕ್ಟೋಬರ್ 23ರಂದು ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಫುಲ್​ ವೈರಲ್ ಆಗಿದೆ. ಕಳೆದ ತಿಂಗಳು 23ರಂದು ರಾಮದುರ್ಗ ತಾಲೂಕಿನ ಬುದ್ನಿ ಖುರ್ದ್ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನೆಡೆದಿದೆ. ಮಾರಾಮಾರಿಯಲ್ಲಿ ಗ್ರಾಮದ ಮಾರುತಿ ಮಾದರ್ ಎಂಬುವವರಿಗೆ ತೀವ್ರ ಗಾಯಗಳಾಗಿವೆ. ಹೀಗಾಗಿ ಗಂಭೀರ ಗಾಯಗೊಂಡಿದ್ದ ಮಾರುತಿ ರಾತ್ರಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಾರೆ.

ಆದರೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ದೂರು ದಾಖಲಿಸಿಕೊಳ್ಳದೇ‌ ಕಟಕೋಳ ಪೊಲೀಸರು ಬೇಜವಾಬ್ದಾರಿ ತೋರಿದ್ದಾರೆ ಎಂದು ಗಾಯಾಳು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಠಾಣೆ ಹೊರಗೆ ಗಾಯಾಳು ಬಿದ್ದು ಒದ್ದಾಡುತ್ತಿದ್ದರೆ ಠಾಣೆ ಒಳಗೆ ಸಿಬ್ಬಂದಿ‌ ನಿದ್ದೆ ಮಾಡುತ್ತಿದ್ದರು. ಜೊತೆಗೆ FIR ದಾಖಲಿಸಲು ವಿಳಂಬ ಮಾಡಿದರು ಎಂದು ಕಟಕೋಳ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ಧ ಗಾಯಾಳು ಮಾರುತಿ ಮಾದರ್ ಆರೋಪ ಮಾಡಿದ್ದಾರೆ.

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us