AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣ ಮಠದ 250 ನೇ ಪರ್ಯಾಯ ಸಂಪನ್ನ: ಪೀಠಾಧಿಪತಿಯಾಗಿ ಅದಮಾರು ಕಿರಿಯ ಶ್ರೀ ಪೀಠಾರೋಹಣ

ಉಡುಪಿ: ಕಣ್ಣಿಗೆ ಹಬ್ಬ ನೀಡುತ್ತಿರುವ ಜಾನಪದ ಕಲಾ ತಂಡಗಳ ಮೆರಗು. ಮನಸ್ಸಿಗೆ ಹಿತ ನೀಡುತ್ತಿರುವ ಬೆಂಕಿ ಆಟ. ಉತ್ತಮ ಸಂದೇಶ ಸಾರುತ್ತಿರುವ ಸ್ತಬ್ಧ ಚಿತ್ರಗಳು. ಸಾಲುಗಟ್ಟಿ ಕುಳಿತ ಯತಿಗಳು. ಅಲಂಕಾರಿಕ ವಸ್ತುಗಳಿಂದ ನವವಧುವಿನಂತೆ ಶೃಂಗಾರಗೊಂಡಿರುವ ಕೃಷ್ಣ ಮಠ. ಕೃಷ್ಣನೂರಿನ ಅದಮಾರು ಪರ್ಯಾಯ ಸಂಭ್ರಮದಲ್ಲಿ ಕಿಕ್ಕಿರಿದು ಸೇರಿದ ಜನ ಸಾಗರ. ಉಡುಪಿಯ ಕೃಷ್ಣಮಠದ ನೂತನ ಪರ್ಯಾಯ ಪೀಠಾಧಿಪತಿಯಾಗಿ ಅದಮಾರು ಕಿರಿಯ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಿದರು. ತಡರಾತ್ರಿ 1.30ಗೆ ನೂತನ ಪರ್ಯಾಯ ಪೀಠಾಧಿಪತಿ ಅದಮಾರು ಮಠದ ಈಶಪ್ರಿಯ ತೀರ್ಥರು […]

ಕೃಷ್ಣ ಮಠದ 250 ನೇ ಪರ್ಯಾಯ ಸಂಪನ್ನ: ಪೀಠಾಧಿಪತಿಯಾಗಿ ಅದಮಾರು ಕಿರಿಯ ಶ್ರೀ ಪೀಠಾರೋಹಣ
ಸಾಧು ಶ್ರೀನಾಥ್​
|

Updated on: Jan 18, 2020 | 9:18 AM

Share

ಉಡುಪಿ: ಕಣ್ಣಿಗೆ ಹಬ್ಬ ನೀಡುತ್ತಿರುವ ಜಾನಪದ ಕಲಾ ತಂಡಗಳ ಮೆರಗು. ಮನಸ್ಸಿಗೆ ಹಿತ ನೀಡುತ್ತಿರುವ ಬೆಂಕಿ ಆಟ. ಉತ್ತಮ ಸಂದೇಶ ಸಾರುತ್ತಿರುವ ಸ್ತಬ್ಧ ಚಿತ್ರಗಳು. ಸಾಲುಗಟ್ಟಿ ಕುಳಿತ ಯತಿಗಳು. ಅಲಂಕಾರಿಕ ವಸ್ತುಗಳಿಂದ ನವವಧುವಿನಂತೆ ಶೃಂಗಾರಗೊಂಡಿರುವ ಕೃಷ್ಣ ಮಠ. ಕೃಷ್ಣನೂರಿನ ಅದಮಾರು ಪರ್ಯಾಯ ಸಂಭ್ರಮದಲ್ಲಿ ಕಿಕ್ಕಿರಿದು ಸೇರಿದ ಜನ ಸಾಗರ.

ಉಡುಪಿಯ ಕೃಷ್ಣಮಠದ ನೂತನ ಪರ್ಯಾಯ ಪೀಠಾಧಿಪತಿಯಾಗಿ ಅದಮಾರು ಕಿರಿಯ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಿದರು. ತಡರಾತ್ರಿ 1.30ಗೆ ನೂತನ ಪರ್ಯಾಯ ಪೀಠಾಧಿಪತಿ ಅದಮಾರು ಮಠದ ಈಶಪ್ರಿಯ ತೀರ್ಥರು ದಂಡ ತೀರ್ಥದಲ್ಲಿ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದರು. ಸುಮಾರು 2.30 ರ ಸಮಯದಲ್ಲಿ 100 ಕ್ಕೂ ಅಧಿಕ ಕಲಾತಂಡಗಳ ಸಹಿತ ವೈವಿದ್ಯಮಯ ಶೋಭಾಯಾತ್ರೆ ಆರಂಭಗೊಂಡಿತು. ಡೋಲು, ವೀರಗಾಸೆ, ಸೋಮನಕುಣಿತ, ಕೋಲಾಟ, ಭಜನೆ ಸೇರಿದಂತೆ ವಿವಿಧ ಕಲಾಪ್ರಾಕಾರಗಳು ಶೋಭಾ ಯಾತ್ರೆಗೆ ಮೆರುಗು ನೀಡಿದ್ವು. ಬಳಿಕ ಉತ್ತಮ ಸಂದೇಶ ಸಾರುವ 50 ಕ್ಕೂ ಅಧಿಕ ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಜನಮನ ಸೆಳೆದವು.

ಪೂಜಾ ಅಧಿಕಾರ ಹಸ್ತಾಂತರ: ವೈಭವದ ಶೋಭಾಯಾತ್ರೆ ಬಳಿಕ ಅದಮಾರು ಮಠದ ಈಶಪ್ರಿಯ ತೀರ್ಥರು ರಥಬೀದಿಗೆ ಆಗಮಿಸಿದ್ರು. ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು. ಬಳಿಕ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವರ ದರ್ಶನ ಪಡೆದು ಕೃಷ್ಣ ಮಠ ಪ್ರವೇಶ ಮಾಡಿದ್ರು. ನಂತ್ರ ಶ್ರೀಗಳಿಗೆ ಫಲಿಮಾರು ಶ್ರೀಗಳು ಅಕ್ಷಯ ಪಾತ್ರೆ ಹಸ್ತಾಂತರಿಸಿದ್ರು. ಈ ಮೂಲಕ ಕೃಷ್ಣನ ಪೂಜಾ ಅಧಿಕಾರ ವಿದ್ಯುಕ್ತವಾಗಿ ಹಸ್ತಾಂತರವಾಯಿತು.

ಇಂದು ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ದರ್ಬಾರ್ ನಡೆಯಲಿದ್ದು, ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಒಟ್ನಲ್ಲಿ ಕೃಷ್ಣ ಮಠದ 250 ನೇ ಪರ್ಯಾಯ ಸಂಪನ್ನಗೊಂಡಿದೆ. ಅದಮಾರು ಮಠದ 34 ನೇ ಯತಿ ಎರಡು ವರ್ಷಗಳ ಕೃಷ್ಣ ಪೂಜಾ ಅಧಿಕಾರ ವಹಿಸಿಕೊಂಡ ಗಳಿಗೆಯನ್ನ ಜನ ಕಣ್ತುಂಬಿಕೊಂಡು ಸಂಭ್ರಮಿಸಿದ್ರು.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್