AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Social media viral photo: ಜೆಫ್ ಬೆಜೋಸ್- ಎಲಾನ್ ಮಸ್ಕ್ 17 ವರ್ಷದ ಹಿಂದಿನ ಫೋಟೋ ಈಗ ವೈರಲ್

ಎಲಾನ್ ಮಸ್ಕ್- ಜೆಫ್ ಬೆಜೋಸ್ ಮಧ್ಯೆ 17 ವರ್ಷದ ಹಿಂದೆ ನಡೆದಿದ್ದ ಭೇಟಿಯ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರಿಬ್ಬರು ಈಗ ವಿಶ್ವದ ನಂಬರ್ 1 ಹಾಗೂ ಎರಡನೇ ಶ್ರೀಮಂತರ ಎಂಬುದು ಸುದ್ದಿಗೆ ಮತ್ತಷ್ಟು ತೂಕ ತಂದಿದೆ.

Social media viral photo: ಜೆಫ್ ಬೆಜೋಸ್- ಎಲಾನ್ ಮಸ್ಕ್ 17 ವರ್ಷದ ಹಿಂದಿನ ಫೋಟೋ ಈಗ ವೈರಲ್
ಎಲಾನ್ ಮಸ್ಕ್ ಹಾಗೂ ಜೆಫ್ ಬೆಜೋಸ್ 17 ವರ್ಷದ ಹಿಂದಿನ ಭೇಟಿಯ ಫೋಟೋ
Srinivas Mata
|

Updated on: Mar 22, 2021 | 12:13 PM

Share

ಯಾವುದಕ್ಕೆ ಯಾವಾಗ ಬೆಲೆ ಬರುತ್ತದೆ ಎಂಬುದನ್ನು ಹೇಳುವುದಕ್ಕೆ ಅಸಾಧ್ಯ. ಈಗಿನ ಉದಾಹರಣೆ ಬಗ್ಗೆಯೇ ಹೇಳುವುದಾದರೆ, 17 ವರ್ಷದ ಹಿಂದೆ ತೆಗೆದ ಹಳೇ ಫೋಟೋವೊಂದು ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಈ ಫೋಟೋವನ್ನು ಇಷ್ಟಪಡುತ್ತಿರುವವರು, ಷೇರ್ ಮಾಡಿಕೊಳ್ಳುತ್ತಿರುವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.

ಸದ್ಯಕ್ಕೆ ವಿಶ್ವದ ನಂಬರ್ 1 ಶ್ರೀಮಂತ ಆಗಿರುವ ಜೆಫ್ ಬೆಜೋಸ್ ಹಾಗೂ ಎರಡನೇ ಸ್ಥಾನದಲ್ಲಿ ಇರುವ ಎಲಾನ್ ಮಸ್ಕ್ ಒಟ್ಟಿಗೆ ಇರುವ ಹಳೇ ಫೋಟೋವೊಂದು ಈಗ ವೈರಲ್ ಆಗಿದೆ. ಈ ಫೋಟೋವನ್ನು ಹಂಚಿಕೊಂಡಿರುವವರು ಟ್ರಂಗ್ ಫನ್. ಯಾವಾಗ ಈ ಟ್ವೀಟ್​ಗೆ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯೆ ನೀಡಿದರೋ ಆಗಿನಿಂದ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಈ ಫೋಟೋ ನೋಡಿದ ಅಚ್ಚರಿ ವ್ಯಕ್ತಪಡಿಸಿರುವ ಮಸ್ಕ್, ಇದನ್ನು 17 ವರ್ಷದ ಹಿಂದೆ ತೆಗೆದಿದ್ದು ಎಂದು ಹೇಳಿದ್ದಾರೆ. “ವಾವ್, ಇದು 17 ವರ್ಷದ ಹಿಂದಿನದು ನಂಬಲಿಕ್ಕೆ ಸಾಧ್ಯವೇ ಆಗ್ತಿಲ್ಲ!” ಎಂದಿದ್ದಾರೆ. ಈ ಫೋಟೋದ ಹಿಂದಿನ ಕಥೆಯನ್ನು ಸಹ ಟ್ರಂಗ್ ಫನ್ ತೆರೆದಿಟ್ಟಿದ್ದಾರೆ.

“ಬಾಹ್ಯಾಕಾಶದ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ 2004ರಲ್ಲಿ ಎಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಒಟ್ಟಿಗೆ ಊಟ ಮಾಡುತ್ತಾ ಭೇಟಿಯಾದರು. ಇವರಿಬ್ಬರು ನೇರಾನೇರ ಒಟ್ಟಿಗೆ ಕೂತು ನಡೆಸಿದ ಕೆಲವೇ ಸಂವಾದದಲ್ಲಿ ಇದೂ ಒಂದು. ಬಾಹ್ಯಾಕಾಶ ಅನ್ವೇಷಣೆ ಕುರಿತಾಗಿ ಇವರಿಬ್ಬರು ಕೈಗೊಂಡ ವಿವಿಧ ಮಾರ್ಗಗಳನ್ನು ಈ ಫೋಟೋ ಸೆರೆ ಹಿಡಿದಿದೆ,” ಎಂದು ಪೋಸ್ಟ್​ನಲ್ಲಿ ಬರೆಯಲಾಗಿದೆ.

ಟ್ವಿಟ್ಟರ್​ನಲ್ಲಿ ಈ ಫೋಟೋ ಹಂಚಿಕೊಂಡ ನಂತರ ಎಲಾನ್ ಮಸ್ಕ್ ಪ್ರತಿಕ್ರಿಯೆಗೆ 5700ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಈ ಸಂಖ್ಯೆಯು ಏರುತ್ತಲೇ ಸಾಗಿದೆ.

ಇದನ್ನೂ ಓದಿ: SpaceX: ಉಪಗ್ರಹದಿಂದ ನೇರವಾಗಿ ಮನೆಮನೆಗೂ ಅಂತರ್ಜಾಲ; ಭಾರತದಲ್ಲೂ ದೊರೆಯಲಿದೆಯಾ ಎಲಾನ್ ಮಸ್ಕ್ ಹೊಸ ಸೇವೆ?

Follow Us
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ