ಫ್ರೀಡಂ ಪಾರ್ಕ್​ನಲ್ಲಿಂದು ಕಪ್ಪು ಪಟ್ಟಿ ಧರಿಸಿ ರೈತರಿಂದ ಕರಾಳ‌ ದಿನಾಚರಣೆ..

ರೈತ‌ನಾಯಕ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಎಡಗೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಇಂದು ಬೆಳಗ್ಗೆ 11.30ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ರೈತರ ಕರಾಳ‌ ದಿನಾಚರಣೆ ಆಚರಣೆ ಮಾಡಲಾಗುತ್ತೆ.

ಫ್ರೀಡಂ ಪಾರ್ಕ್​ನಲ್ಲಿಂದು ಕಪ್ಪು ಪಟ್ಟಿ ಧರಿಸಿ ರೈತರಿಂದ ಕರಾಳ‌ ದಿನಾಚರಣೆ..
ಕೋಡಿಹಳ್ಳಿ ಚಂದ್ರಶೇಖರ್

Updated on: Jan 30, 2021 | 8:41 AM

ಬೆಂಗಳೂರು: ಇಂದು ಮಹಾತ್ಮಾ ಗಾಂಧೀಜಿ ಹುತಾತ್ಮರಾದ ದಿನ. ಈ ಹಿನ್ನೆಲೆಯಲ್ಲಿ ಈ ‌ದಿನವನ್ನ ರೈತರ ಕರಾಳ ದಿನವಾಗಿ‌ ಆಚರಣೆ ಮಾಡಲು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ರೈತರು ಮುಂದಾಗಿದ್ದಾರೆ. ಬೆಳಗ್ಗೆ 11.30ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ರೈತರ ಕರಾಳ‌ ದಿನಾಚರಣೆ ಆಚರಣೆ ಮಾಡಲಾಗುತ್ತೆ.

ರೈತ‌ನಾಯಕ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಎಡಗೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ರಾಷ್ಟ್ರಪಿತ ಮಹಾತ್ಮ ‌ಗಾಂಧೀಜಿಗೆ ನಮನ‌ ಸಲ್ಲಿಸಿ ರೈತರ ಮೇಲೆ ನಡೆದಿರೋ‌ ಹಲ್ಲೆ ದೌರ್ಜನ್ಯವನ್ನ ಖಂಡಿಸಿ‌ ಕರಾಳ ದಿನವಾಗಿ‌ ಆಚರಣೆ ಮಾಡಲಾಗುತ್ತೆ.

ರಾಜ್ಯದ ಎಲ್ಲಾ ಭಾಗದಲ್ಲೂ ರೈತರು‌ ಕರಾಳ ದಿನವಾಗಿ‌ ಆಚರಣೆ ಮಾಡಲು‌ ಕೋಡಿಹಳ್ಳಿ‌ ಕರೆ ನೀಡಿದ್ದಾರೆ. ದೆಹಲಿಯಲ್ಲಿ ನಡೆದ ರೈತರ ಮೇಲಿನ‌ ದೌರ್ಜನ್ಯವನ್ನು ಖಂಡಿಸಿ ಈ ದಿನವನ್ನು ಕರಾಳ ದಿನವಾಗಿಸಲು ರೈತರು ಮುಂದಾಗಿದ್ದಾರೆ.

ಕರ್ನಾಟಕಕ್ಕೆ ಕರಾಳ ದಿನ: ರಾಜ್ಯದ ಹಲವೆಡೆ ಇಂದು ಭೀಕರ ಅಪಘಾತ