AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಭೂ ಮಾರಾಟ ನಿರ್ಬಂಧ ತೆರವಿಗೆ ಚಿಂತನೆ, ಅನ್ನದಾತನ್ನ ಅನಾಥ ಮಾಡುತ್ತಾ ಸರ್ಕಾರ?

ಬೆಂಗಳೂರು: ರೈತರ ಫಲವತ್ತಾದ ಕೃಷಿ ಭೂಮಿಯನ್ನ ಸರ್ಕಾರ ಇದೀಗ ಅಕ್ಷರಶಃ ಮಾರಾಟಕ್ಕಿಟ್ಟಿದೆ. ಇಷ್ಟು ದಿನ ಭೂಸುಧಾರಣಾ ಕಾಯ್ದೆಯ ರಕ್ಷಣೆ ಅಡಿ ಸುರಕ್ಷಿತವಾಗಿದ್ದ ಗದ್ದೆ, ತೋಟ, ಜಮೀನುಗಳ ಮೇಲೆಲ್ಲಾ ಇದೀಗ ಫಾರ್ ಸೇಲ್ ಬೋರ್ಡ್ ಬೀಳಲಿದೆ. ಕೃಷಿ ಭೂಮಿ.. ಪ್ರತಿಯೊಬ್ಬರಿಗೂ ಅನ್ನ ನೀಡೋ ಭೂಮ್ತಾಯಿ.. ಇದನ್ನ ನಂಬಿದವ್ರು, ಇಲ್ಲಿ ಕಷ್ಟಪಟ್ಟು ಬೆವರು ಸುರಿಸೋರು ತುತ್ತಿಗಾಗಿ ಪರದಾಡಿರೋ ಚರಿತ್ರೆನೇ ಇಲ್ಲ. ಕೃಷಿ ಭೂಮಿಯನ್ನ ಪೂಜಿಸಿ, ಅಲ್ಲಿರೋ ಬೆಳೆಯನ್ನ ಒಡಲಾಳದ ಪ್ರೀತಿಯಿಂದ ಸಾಕಿ ಸಲಹುವ ರೈತರು ನಮ್ಮಿಲ್ಲಿದ್ದಾರೆ. ಕೃಷಿ ಭೂಮಿಗಾಗಿ ಅದೆಷ್ಟೋ […]

ಕೃಷಿ ಭೂ ಮಾರಾಟ ನಿರ್ಬಂಧ ತೆರವಿಗೆ ಚಿಂತನೆ, ಅನ್ನದಾತನ್ನ ಅನಾಥ ಮಾಡುತ್ತಾ ಸರ್ಕಾರ?
ಆಯೇಷಾ ಬಾನು
|

Updated on:Jun 12, 2020 | 2:07 PM

Share

ಬೆಂಗಳೂರು: ರೈತರ ಫಲವತ್ತಾದ ಕೃಷಿ ಭೂಮಿಯನ್ನ ಸರ್ಕಾರ ಇದೀಗ ಅಕ್ಷರಶಃ ಮಾರಾಟಕ್ಕಿಟ್ಟಿದೆ. ಇಷ್ಟು ದಿನ ಭೂಸುಧಾರಣಾ ಕಾಯ್ದೆಯ ರಕ್ಷಣೆ ಅಡಿ ಸುರಕ್ಷಿತವಾಗಿದ್ದ ಗದ್ದೆ, ತೋಟ, ಜಮೀನುಗಳ ಮೇಲೆಲ್ಲಾ ಇದೀಗ ಫಾರ್ ಸೇಲ್ ಬೋರ್ಡ್ ಬೀಳಲಿದೆ.

ಕೃಷಿ ಭೂಮಿ.. ಪ್ರತಿಯೊಬ್ಬರಿಗೂ ಅನ್ನ ನೀಡೋ ಭೂಮ್ತಾಯಿ.. ಇದನ್ನ ನಂಬಿದವ್ರು, ಇಲ್ಲಿ ಕಷ್ಟಪಟ್ಟು ಬೆವರು ಸುರಿಸೋರು ತುತ್ತಿಗಾಗಿ ಪರದಾಡಿರೋ ಚರಿತ್ರೆನೇ ಇಲ್ಲ. ಕೃಷಿ ಭೂಮಿಯನ್ನ ಪೂಜಿಸಿ, ಅಲ್ಲಿರೋ ಬೆಳೆಯನ್ನ ಒಡಲಾಳದ ಪ್ರೀತಿಯಿಂದ ಸಾಕಿ ಸಲಹುವ ರೈತರು ನಮ್ಮಿಲ್ಲಿದ್ದಾರೆ. ಕೃಷಿ ಭೂಮಿಗಾಗಿ ಅದೆಷ್ಟೋ ಅನ್ನದಾತರು ತಮ್ಮ ಉಸಿರನ್ನೇ ಚೆಲ್ಲಿದ್ದಾರೆ. ಇಂತಹ ಕೃಷಿ ಭೂಮಿ ಬಗ್ಗೆ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ.

ಕೃಷಿಭೂಮಿಯನ್ನ ಯಾರಾದ್ರೂ ಖರೀದಿಸಬಹುದು! ಹೌದು, ಕೃಷಿಭೂಮಿಯನ್ನ ಇನ್ಮುಂದೆ ಯಾರು ಬೇಕಾದ್ರೂ ಖರೀದಿಸಬಹುದು ಎಂದು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಇದ್ರ ಪ್ರಕಾರ ರಿಯಲ್ ಎಸ್ಟೇಟ್ ದಂಧೆ ಕೃಷಿ ಕ್ಷೇತ್ರಕ್ಕೂ ಕಾಲಿಡುತ್ತಾ ಅನ್ನೋ ಆತಂಕ ಶುರುವಾಗಿದೆ. ಅಂದ್ಹಾಗೇ, ಈ ಹಿಂದೆ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಸೆಕ್ಷನ್ 79 ಎ & ಬಿ ಗಳ ಅಡಿ ಕೃಷಿಕರು ಮಾತ್ರ ಕೃಷಿ ಭೂಮಿ ಖರೀದಿಸಬೇಕು ಅನ್ನೋ ನಿಯಮ ಇತ್ತು. ಆದ್ರೀಗ ಈ ಸೆಕ್ಷನ್​ಗಳನ್ನ ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದ್ರಿಂದ ನಮ್ಮ ರಾಜ್ಯದ ಕೃಷಿಭೂಮಿಯನ್ನ ಇನ್ಮುಂದೆ ಯಾವುದೇ ಊರಿನ ಅಥ್ವಾ ಯಾವುದೇ ದೇಶದ ಯಾರು ಬೇಕಾದ್ರೂ ಖರೀದಿಸಿ, ಬೇಲಿ ಹಾಕಿಕೊಳ್ಳಬಹುದು.

ಇನ್ನು ಈ ಹಿಂದೆ ವಾರ್ಷಿಕ 25 ಲಕ್ಷ ಕೃಷಿಯೇತರ ಆದಾಯ ಇರೋರು ಮಾತ್ರ ಡಿಸಿಯಿಂದ ಅನುಮತಿ ಪಡೆದು ಕೃಷಿ ಭೂಮಿ ಖರೀದಿಸಲು ಅವಕಾಶವಿತ್ತು. ಆದ್ರೀಗ ಜಿಲ್ಲಾಧಿಕಾರಿಗಳ ಅನುಮತಿಯೇ ಬೇಕಿಲ್ಲ. ಇದನ್ನ ಸಮರ್ಥಿಸಿಕೊಂಡ ಮಾಧುಸ್ವಾಮಿ, ಈಗ ಎಲ್ಲೆಲ್ಲೂ ಕೃಷಿ ಬಗ್ಗೆ ಆಸಕ್ತಿ ಮೂಡಿದೆ. ಜನ ಕೃಷಿಗೆ ಬರಲು ಕಾಯ್ದೆ ತಡೆ ಆಗಿತ್ತು. ಆದ್ರೀಗ ಕಾಯ್ದೆಯನ್ನ ರದ್ದುಗೊಳಿಸೋಕೆ ಒಪ್ಪಿಗೆ ನೀಡಿದ್ದೇವೆ. ಮುಂದಿನ ಅಧಿವೇಶನದಲ್ಲಿ ಈ ಕಾಯ್ದೆಯನ್ನ ಮಂಡನೆ ಮಾಡಿ ನಂತ್ರ ಕಾನೂನು ಮಾಡ್ತೀವಿ ಅಂದ್ರು.

ಒಟ್ನಲ್ಲಿ ಮೊದಲೇ ರೈತ ಸಂಕಷ್ಟದಲ್ಲಿದ್ದಾನೆ. ಜೊತೆಗೆ ಕೃಷಿ ಕೂಡ ಲಾಭದಾಯಕ ಉದ್ಯಮವಾಗಿ ಬೆಳೆದಿಲ್ಲ. ಈ ಹಂತದಲ್ಲಿ ರಾಜ್ಯ ಸರ್ಕಾರ ರೈತರ ಭೂಮಿಯನ್ನು ಶ್ರೀಮಂತರಿಗೆ, ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿಸಲು ಮುಂದಾಗಿದೆ.‌ ಇದು ಎಷ್ಟರಮಟ್ಟಿಗೆ ಸರಿ ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ.

Published On - 6:57 am, Fri, 12 June 20

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?