
ಕೊಲ್ಕತಾ ಇಂದು ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಇದುವರೆಗೆ ತಂಡವನ್ನು ಮುನ್ನಡೆಸುತ್ತಿದ್ದ ದಿನೇಶ್ ಕಾರ್ತೀಕ್ ನಾಯಕತ್ವದ ಹೊಣೆಯನ್ನು ಓವರ್ಸೀಸ್ ಆಟಗಾರ ಮತ್ತು 2019ರ ವಿಶ್ವಕಪ್ ಅನ್ನು ಇಂಗ್ಲೆಂಡ್ಗೆ ಗೆದ್ದುಕೊಟ್ಟ ಅಯಾನ್ ಮೊರ್ಗನ್ ಅವರಿಗೆ ವಹಿಸಿಕೊಟ್ಟಿದ್ದಾರೆ. ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ನಾಯಕತ್ವ ತ್ಯಜಿಸಿರುವುದಾಗಿ ಕಾರ್ತೀಕ್ ಹೇಳಿದ್ದಾರೆ.
[yop_poll id=”14″]
ಮುಂಬೈ ಟೀಮಿಗೆ ಯಾವುದೇ ಸಮಸ್ಯೆ ಇದ್ದಂತಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಯುನಿಟ್ಗಳು ಒಂದನ್ನೊಂದು ಅದ್ಭುತವಾಗಿ ಕಾಂಪ್ಲಿಮೆಂಟ್ ಮಾಡುತ್ತಿವೆ. ಟಾಪ್ ಆರ್ಡರ್ನಲ್ಲಿ ರೋಹಿತ್ ಸೇರಿದಂತೆ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಷನ್ ರನ್ ಗಳಿಸುತ್ತಿದ್ದಾರೆ. ಆಲ್ರೌಂಡರ್ಗಳ ಪೈಕಿ, ಹಾರ್ದಿಕ್ ಪಾಂಡ್ಯ ಅವರನ್ನು ಹೊರತುಪಡಿಸಿ ಕೈರನ್ ಪೊಲ್ಲಾರ್ಡ್ ಮತ್ತು ಕೃಣಾಲ್ ಪಾಂಡೆ ಉತ್ತಮ ಸ್ಪರ್ಶದಲ್ಲಿದ್ದಾರೆ.
ಹಾಗೆ ನೋಡಿದರೆ, ಬೌಲರ್ಗಳೇ ಮುಂಬೈಗೆ ಪಂದ್ಯಗಳನ್ನು ಗೆದ್ದು ಕೊಡುತ್ತಿದ್ದಾರೆ. ವೇಗದ ಬೌಲರ್ಗಳಾದ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ತಮ್ಮ ನಡುವೆ 20 ವಿಕೆಟ್ಗಳನ್ನು ಕಬಳಿಸಿದ್ದಾರೆ. ಮತ್ತೊಬ್ಬ ವೇಗಿ, ಜೇಮ್ಸ್ ಪ್ಯಾಟಿನ್ಸ್ನ್ ಸಹ ಉಪಯುಕ್ತ ಬ್ರೇಕ್ಥ್ರೂಗಳನ್ನು ಒದಗಿಸುತ್ತಿದ್ದಾರೆ. ಸ್ಪಿನ್ನರ್ಗಳಾದ ರಾಹುಲ್ ಚಹರ್ ಮತ್ತು ಕೃಣಾಲ್ ಎದುರಾಳಿ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವಲ್ಲಿ ಸಫಲರಾಗುತ್ತಿದ್ದಾರೆ ಮತ್ತು ವಿಕೆಟ್ಗಳನ್ನೂ ಪಡೆಯುತ್ತಿದ್ದಾರೆ.
ಈ ಆವೃತಿಯಲ್ಲಿ ಕೆಕೆಆರ್ ವಿರುದ್ಧ ಆಡಿರುವ ಮೊದಲ ಪಂದ್ಯವನ್ನು ಗೆದ್ದಿರುವ ಮುಂಬೈ ಅದೇ ಆತ್ಮವಿಶ್ವಾಸದೊಂದಿಗೆ ಇವತ್ತು ಮೈದಾನಕ್ಕಿಳಿಯಲಿದೆ. ಅಲ್ಲದೆ, ಹೆಡ್ ಟು ಹೆಡ್ ಪರ್ಫಾಮನ್ಸ್ಗಳನ್ನು ಗಮನಿಸಿದರೂ, ಅಂಬಾನಿಗಳ ತಂಡ ಆಡಿರುವ 25ಲ್ಲಿ 20 ಗೆದ್ದು ಶಾರುಖ್ ಖಾನ್ ಟೀಮಿನಿಂದ ಗಾವುದ ಅಂತರವನ್ನು ಕಾಯ್ದುಕೊಂಡಿದೆ.
ಅತ್ತ, ಕೆಕೆಆರ್ ಟೀಮಿನ ಮ್ಯಾನೇಜ್ಮೇಂಟ್
ಇಂದಿನಿಂದ ಮೊರ್ಗನ್ ಕೆಕೆಅರ್ ಟೀಮನ್ನು ಮುನ್ನಡೆಸಲಿರುವುದಿಂದ ಗೇಮ್ ಪ್ಲ್ಯಾನ್ಗಳು ಬದಲಾಗಬಹುದು. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಮೊರ್ಗನ್ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುತ್ತಾರೆ. ಜೊತೆಗೆ ಅವರು ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಹೊಡೆತಗಳನ್ನು ಆಡುವ ಬ್ಯಾಟ್ಸ್ಮನ್. ಕೆಲವು ಆಟಗಾರರು ತಮ್ಮ ಮೇಲೆ ಹೊಣೆ ಹೆಚ್ಚಾದಾಗ ಅತ್ಯುತ್ತಮ ಪ್ರದರ್ಶನಗಳನ್ನು ನೀಡಲಾರಂಭಿಸುತ್ತಾರೆ, ಮೊರ್ಗನ್ ಈ ಗುಂಪಿಗೆ ಸೇರಿದ ಆಟಗಾರ.
ಐಪಿಎಲ್ 13 ನೇ ಆವೃತಿ ಮೊದಲ ಸುತ್ತು ಮುಗಿದರೂ, ಕೆಕೆಆರ್ನ ವಿಸ್ಫೋಟಕ ಬ್ಯಾಟ್ಸ್ಮನ್ ಆಂದ್ರೆ ರಸೆಲ್ರ ಬ್ಯಾಟ್ ಮೈದಾನದಲ್ಲಿ ಝಳಪಳಿಸುತ್ತಿಲ್ಲ. ಅವರಿಂದ ಸಿಕ್ಸರ್ಗಳ ಸುರಿಮಳೆಯಾಗುವುದನ್ನು ಟೀಮು ನಿರೀಕ್ಷಿಸುತ್ತಿದೆ. ಉಳಿದಂತೆ, ನಿತಿಷ್ ರಾಣಾ ಉತ್ತಮ ಫಾರ್ಮ್ನಲ್ಲಿದ್ದಾರೆ.
ಕೆಕೆಆರ್ನ ಯುವ ಬೌಲರ್ಗಳಾದ ಪ್ರಸಿಧ್ ಕೃಷ್ಣ, ಶಿವಮ್ ಮಾವಿ ಮತ್ತು ಕಮ್ಲೇಶ್ ನಾಗರಕೋಟಿ ತಮ್ಮ ಮೇಲಿಟ್ಟಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಮಾವಿ, ಕೊಂಚ ಆಫ್ ಕಲರ್ ಎನಿಸುತ್ತಿದ್ದರೂ ಅಪಾರ ಪ್ರತಿಭಾವಂತ. ಕುಲ್ದೀಪ್ ಯಾದವ್ ಮತ್ತು ನರೈನ್ ಅವರಲ್ಲಿ ಕೆಕೆಆರ್ ಇಬ್ಬರು ವಿಶ್ವದರ್ಜೆಯ ಸ್ಪಿನ್ನರ್ಗಳನ್ನು ಹೊಂದಿದೆ.
Published On - 4:32 pm, Fri, 16 October 20