AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಬಿಸಿ, ವಿಡಿಯೋ ಕಾಲ್ ಮೂಲಕ ನವಜೋಡಿ ನಿಖಾ

ಧಾರವಾಡ: ಕೊರೊನಾ ವೈರೆಸ್ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ದೇಶ ಲಾಕ್​ಡೌನ್ ಆಗಿದೆ. ಅದರಲ್ಲೂ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಪ್ರಣಯ ಪಕ್ಷಿಗಳಿಗೆ ಬಂದು ರೀತಿಯ ವನವಾಸವಾಗಿದೆ. ಈ ಸಮಯದಲ್ಲಿ ಮದುವೆ ನಿಶ್ಚಯವಾಗಿರುವವರಂತೂ ಈ ಕಡೆ ಮದುವೆಯೂ ಮಾಡಿಕೊಳ್ಳಲಾಗದೆ, ಮದುವೆಯನ್ನು ಮುಂದಕ್ಕೂ ಹಾಕಲಾಗದೆ ಪರದಾಡುತ್ತಿದ್ದಾರೆ. ಇನ್ನು ಕೆಲವರು ಸರ್ಕಾರದ ಆದೇಶವನ್ನು ಪಾಲಿಸಿ ಬೆರಳೆಣಿಕೆಯಷ್ಟು ವ್ಯಕ್ತಿಗಳ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಅದೇ ರೀತಿ ಲಾಕ್​ಡೌನ್ ಹಿನ್ನೆಲೆ ಜೋಡಿಯೊಂದು ವಿಡಿಯೋ ಕಾಲ್‌ ಮುಖಾಂತರ ನಿಖಾ ಮಾಡಿಕೊಂಡಿದೆ. ಧಾರವಾಡದ ಆದರ್ಶ ನಗರದ ವರ […]

ಕೊರೊನಾ ಬಿಸಿ, ವಿಡಿಯೋ ಕಾಲ್ ಮೂಲಕ ನವಜೋಡಿ ನಿಖಾ
ಸಾಧು ಶ್ರೀನಾಥ್​
|

Updated on: Apr 21, 2020 | 11:45 AM

Share

ಧಾರವಾಡ: ಕೊರೊನಾ ವೈರೆಸ್ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ದೇಶ ಲಾಕ್​ಡೌನ್ ಆಗಿದೆ. ಅದರಲ್ಲೂ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಪ್ರಣಯ ಪಕ್ಷಿಗಳಿಗೆ ಬಂದು ರೀತಿಯ ವನವಾಸವಾಗಿದೆ. ಈ ಸಮಯದಲ್ಲಿ ಮದುವೆ ನಿಶ್ಚಯವಾಗಿರುವವರಂತೂ ಈ ಕಡೆ ಮದುವೆಯೂ ಮಾಡಿಕೊಳ್ಳಲಾಗದೆ, ಮದುವೆಯನ್ನು ಮುಂದಕ್ಕೂ ಹಾಕಲಾಗದೆ ಪರದಾಡುತ್ತಿದ್ದಾರೆ. ಇನ್ನು ಕೆಲವರು ಸರ್ಕಾರದ ಆದೇಶವನ್ನು ಪಾಲಿಸಿ ಬೆರಳೆಣಿಕೆಯಷ್ಟು ವ್ಯಕ್ತಿಗಳ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

ಅದೇ ರೀತಿ ಲಾಕ್​ಡೌನ್ ಹಿನ್ನೆಲೆ ಜೋಡಿಯೊಂದು ವಿಡಿಯೋ ಕಾಲ್‌ ಮುಖಾಂತರ ನಿಖಾ ಮಾಡಿಕೊಂಡಿದೆ. ಧಾರವಾಡದ ಆದರ್ಶ ನಗರದ ವರ ಇಮ್ರಾನ್ ಹಾಗೂ ಕೊಪ್ಪಳದ ವಧು ತಾಜಮಾ ಬೇಗಂ ಸಾಂಪ್ರದಾಯಿಕವಾಗಿ ವಿಡಿಯೋ‌ ಕಾಲ್‌ ಮುಖಾಂತರ ಮದುವೆಯಾಗಿದ್ದಾರೆ.

ವಧು- ವರರಿಬ್ಬರನ್ನೂ ಅವರವರ ಮನೆಯಲ್ಲಿಯೇ ಕೂರಿಸಿ ಎರಡೂ ಕುಟುಂಬದವರು ವಿಡಿಯೋ ಕಾಲ್ ಮೂಲಕ ಪರಸ್ಪರರ ಒಪ್ಪಿಗೆ ಪಡೆದು ಮದುವೆ ಕಾರ್ಯ ಮುಗಿಸಿದ್ದಾರೆ. ಲಾಕ್‌ಡೌನ್ ಮುಗಿದ ಬಳಿಕ ಸೊಸೆಯನ್ನು ಮನೆಗೆ ಕರೆತರಲು ವರನ ಕುಟುಂಬ ನಿರ್ಧರಿಸಿದೆ. ಧಾರವಾಡ ಆದರ್ಶನಗರ ಜಮಾತ್‌ ಖಾಜಿ ಸಿಕಂದರ ಅಂಕಲಗಿ ಹಾಗೂ ಕೊಪ್ಪಳ ಜಮಾತ್ ನ ಖಾಜಿಗಳು ಈ ಆನ್‌ಲೈನ್‌ ಮದುವೆಗೆ ಸಾಕ್ಷಿ ಆಗಿದ್ದಾರೆ.

ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು