ಬೇರೊಬ್ಬನೊಂದಿಗೆ ಮದ್ವೆ: ಪ್ರಿಯಕರನ ಜೊತೆ ವೇಲ್ ಬಿಗಿದು, ಕೃಷಿ ಹೊಂಡದಲ್ಲಿ ಯುವತಿ ಆತ್ಮಹತ್ಯೆ

ಕೋಲಾರ: ವೇಲ್ ಕಟ್ಟಿಕೊಂಡು ಹೊಂಡಕ್ಕೆ ಬಿದ್ದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮುಗಿಲಬೆಲೆ ಗ್ರಾಮದಲ್ಲಿ ನಡೆದಿದೆ. ಕೃಷಿ ಹೊಂಡಕ್ಕೆ ಬಿದ್ದು ಮಾದಮಂಗಲದ ಸುರೇಶ್, ಹಾಗೂ ಕಾರಹಳ್ಳಿಯ ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂಪಾಗೆ ಇಷ್ಟವಿಲ್ಲದಿದ್ದರೂ ಆಕೆಯ ಪೋಷಕರು 2 ತಿಂಗಳ ಹಿಂದೆ ಬೇರೊಬ್ಬನೊಂದಿಗೆ ಮದುವೆ ಮಾಡಿದ್ದರು. ಇದರಿಂದ ಬೇಸರಗೊಂಡ ಪ್ರೇಮಿಗಳಿಬ್ಬರು ಇಂದು ವೇಲ್‌ ಕಟ್ಟಿಕೊಂಡು ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂಗಾರಪೇಟೆ ಠಾಣೆ ಪೊಲೀಸರು ಭೇಟಿ ಕೊಟ್ಟು […]

ಬೇರೊಬ್ಬನೊಂದಿಗೆ ಮದ್ವೆ: ಪ್ರಿಯಕರನ ಜೊತೆ ವೇಲ್ ಬಿಗಿದು, ಕೃಷಿ ಹೊಂಡದಲ್ಲಿ ಯುವತಿ ಆತ್ಮಹತ್ಯೆ
Edited By: ಸಾಧು ಶ್ರೀನಾಥ್​

Updated on: Nov 20, 2020 | 12:50 PM

ಕೋಲಾರ: ವೇಲ್ ಕಟ್ಟಿಕೊಂಡು ಹೊಂಡಕ್ಕೆ ಬಿದ್ದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮುಗಿಲಬೆಲೆ ಗ್ರಾಮದಲ್ಲಿ ನಡೆದಿದೆ. ಕೃಷಿ ಹೊಂಡಕ್ಕೆ ಬಿದ್ದು ಮಾದಮಂಗಲದ ಸುರೇಶ್, ಹಾಗೂ ಕಾರಹಳ್ಳಿಯ ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೂಪಾಗೆ ಇಷ್ಟವಿಲ್ಲದಿದ್ದರೂ ಆಕೆಯ ಪೋಷಕರು 2 ತಿಂಗಳ ಹಿಂದೆ ಬೇರೊಬ್ಬನೊಂದಿಗೆ ಮದುವೆ ಮಾಡಿದ್ದರು. ಇದರಿಂದ ಬೇಸರಗೊಂಡ ಪ್ರೇಮಿಗಳಿಬ್ಬರು ಇಂದು ವೇಲ್‌ ಕಟ್ಟಿಕೊಂಡು ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂಗಾರಪೇಟೆ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

Loading...
Unable to load recommendations.
Follow Us