AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SP ಹೆಸರು ಹೇಳಿ PSIಗೆ ಪಂಗನಾಮ.. ಕೊನೆಗೂ ಯಾಮಾರಿಸಿದ್ದವ ಕಂಬಿ ಹಿಂದೆ

Fraud ಕಲಬುರಗಿ ಜಿಲ್ಲೆ ಜೇವರ್ಗಿ ಠಾಣೆ ಪಿಎಸ್​ಐ ಆಗಿದ್ದ ಮಂಜುನಾಥ ಹೂಗಾರ್, ತಿಂಗಳ ಹಿಂದೆ ಕಲಬುರಗಿ ಡಿಸಿಬಿಗೆ ವರ್ಗಾವಣೆಯಾಗಿದ್ದರು. ಈ ವೇಳೆ ಅವರಿಗೆ ಎಸ್​ಪಿ ಸಿಮಿ ಮರಿಯಮ್​ ಜಾರ್ಜ್​ ಹೆಸರು ಹೇಳಿ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ನಿವಾಸಿ ಖಾಸಿಂ ಪಟೇಲ್ ಎಂಬ ವ್ಯಕ್ತಿ ವಂಚನೆ ಮಾಡಿದ್ದಾನೆ.

SP ಹೆಸರು ಹೇಳಿ PSIಗೆ ಪಂಗನಾಮ.. ಕೊನೆಗೂ ಯಾಮಾರಿಸಿದ್ದವ ಕಂಬಿ ಹಿಂದೆ
PSI ಮಂಜುನಾಥ ಹೂಗಾರ್ (ಎಡ), ಖಾಸಿಂ ಪಟೇಲ್ (ಬಲ)
ಆಯೇಷಾ ಬಾನು
ಆಯೇಷಾ ಬಾನು|

Updated on: Feb 06, 2021 | 7:47 AM

Share

ಕಲಬುರಗಿ: SP ಹೆಸರು ಹೇಳಿ 8.5 ಲಕ್ಷ ಹಣ ಪಡೆದು ಪಿಎಸ್​ಐ ಯಾಮಾರಿಸಿದ್ದ ಕಿಲಾಡಿಯನ್ನು ಪೊಲೀಸರು ಬಂಧಿಸಿದ್ದಾರೆ. PSI ಮಂಜುನಾಥ ಹೂಗಾರ್​ರಿಂದ 8.5 ಲಕ್ಷ ಹಣ ಪಡೆದು ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಮೋಸ ಮಾಡಿದ್ದಾನೆ. ಸದ್ಯ ಖಾಸಿಂನನ್ನು ಬಂಧಿಸಲಾಗಿದ್ದು ಆತನಿಂದ ಎರಡು‌ ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ಠಾಣೆ ಪಿಎಸ್​ಐ ಆಗಿದ್ದ ಮಂಜುನಾಥ ಹೂಗಾರ್, ತಿಂಗಳ ಹಿಂದೆ ಕಲಬುರಗಿ ಡಿಸಿಬಿಗೆ ವರ್ಗಾವಣೆಯಾಗಿದ್ದರು. ಈ ವೇಳೆ ಅವರಿಗೆ ಎಸ್​ಪಿ ಸಿಮಿ ಮರಿಯಮ್​ ಜಾರ್ಜ್​ ಹೆಸರು ಹೇಳಿ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ನಿವಾಸಿ ಖಾಸಿಂ ಪಟೇಲ್ ಎಂಬ ವ್ಯಕ್ತಿ ವಂಚನೆ ಮಾಡಿದ್ದಾನೆ.

ಖಾಸಿಂ ಕಲಬುರಗಿ ಎಸ್​ಪಿ ಪರ್ಸನಲ್​ ನಂಬರ್​ ಎಂದು ಹೇಳಿ ಎಸ್​ಐ ಮಂಜುನಾಥ ಹೂಗಾರ್​ಗೆ SMS ಮಾಡುತ್ತಿದ್ದ. ಮೊಬೈಲ್​ ನಂಬರ್​ 74114 47060ನಿಂದ SMS ಮಾಡ್ತಿದ್ದ. ಖಾಸಿಂ ಬೇರೆ ಬೇರೆ ಕಾರಣಗಳನ್ನು ಹೇಳಿ ಮಂಜುನಾಥ ಬಳಿ 3 ಬಾರಿ ಹಣ ಪಡೆದಿದ್ದ.

ಸುಮಾರು 8 ಲಕ್ಷ 50 ಸಾವಿರ ಹಣ ಪಡೆದಿದ್ದಾನೆ. ಫೆಬ್ರವರಿ 4ರಂದು ಎಸ್​ಪಿ ಭೇಟಿಯಾಗಿ ಹಣ ನೀಡಿದ್ದರ ಬಗ್ಗೆ ಮಂಜುನಾಥ್, ಎಸ್​ಪಿ ಸಿಮಿ ಮರಿಯಮ್​ ಜಾರ್ಜ್​ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ನಾನು ಯಾವುದೇ ಹಣ ಕೇಳಿಲ್ಲ, ಅದು ನನ್ನ ನಂಬರ್​ ಅಲ್ಲ ಅಂತ ಪಿಎಸ್​ಐ ಮಂಜುನಾಥ ಹೂಗಾರ್​ಗೆ, ಎಸ್​ಪಿ ತಿಳಿಸಿದ್ದಾರೆ. ನಂತರ ವಂಚನೆ ನಡೆದಿರುವುದು ಗೊತ್ತಾಗಿ ಫೆಬ್ರವರಿ 4ರ ರಾತ್ರಿ ಮಂಜುನಾಥ್ ಕಲಬುರಗಿ ಸ್ಟೇಷನ್ ​ಬಜಾರ್​ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ₹8 ಲಕ್ಷ 50ಸಾವಿರ ಪಡೆದಿದ್ದ ವಂಚಕ ಖಾಸಿಂ ಪಟೇಲ್​ನನ್ನು ಪೊಲೀಸರು ಬಂಧಿಸಿದ್ದು ಆತನಿಂದ ₹2 ಲಕ್ಷ ವಶಕ್ಕೆ ಪಡೆದಿದ್ದಾರೆ.

ನಕಲಿ ಫೇಸ್​ಬುಕ್ ಖಾತೆ: ಹುಡುಗಿ ಹೆಸರಿನಲ್ಲಿ ಹಣ ಪಡೆದು ವಂಚನೆ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು