AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SP ಹೆಸರು ಹೇಳಿ PSIಗೆ ಪಂಗನಾಮ.. ಕೊನೆಗೂ ಯಾಮಾರಿಸಿದ್ದವ ಕಂಬಿ ಹಿಂದೆ

Fraud ಕಲಬುರಗಿ ಜಿಲ್ಲೆ ಜೇವರ್ಗಿ ಠಾಣೆ ಪಿಎಸ್​ಐ ಆಗಿದ್ದ ಮಂಜುನಾಥ ಹೂಗಾರ್, ತಿಂಗಳ ಹಿಂದೆ ಕಲಬುರಗಿ ಡಿಸಿಬಿಗೆ ವರ್ಗಾವಣೆಯಾಗಿದ್ದರು. ಈ ವೇಳೆ ಅವರಿಗೆ ಎಸ್​ಪಿ ಸಿಮಿ ಮರಿಯಮ್​ ಜಾರ್ಜ್​ ಹೆಸರು ಹೇಳಿ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ನಿವಾಸಿ ಖಾಸಿಂ ಪಟೇಲ್ ಎಂಬ ವ್ಯಕ್ತಿ ವಂಚನೆ ಮಾಡಿದ್ದಾನೆ.

SP ಹೆಸರು ಹೇಳಿ PSIಗೆ ಪಂಗನಾಮ.. ಕೊನೆಗೂ ಯಾಮಾರಿಸಿದ್ದವ ಕಂಬಿ ಹಿಂದೆ
PSI ಮಂಜುನಾಥ ಹೂಗಾರ್ (ಎಡ), ಖಾಸಿಂ ಪಟೇಲ್ (ಬಲ)
ಆಯೇಷಾ ಬಾನು
|

Updated on: Feb 06, 2021 | 7:47 AM

Share

ಕಲಬುರಗಿ: SP ಹೆಸರು ಹೇಳಿ 8.5 ಲಕ್ಷ ಹಣ ಪಡೆದು ಪಿಎಸ್​ಐ ಯಾಮಾರಿಸಿದ್ದ ಕಿಲಾಡಿಯನ್ನು ಪೊಲೀಸರು ಬಂಧಿಸಿದ್ದಾರೆ. PSI ಮಂಜುನಾಥ ಹೂಗಾರ್​ರಿಂದ 8.5 ಲಕ್ಷ ಹಣ ಪಡೆದು ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಮೋಸ ಮಾಡಿದ್ದಾನೆ. ಸದ್ಯ ಖಾಸಿಂನನ್ನು ಬಂಧಿಸಲಾಗಿದ್ದು ಆತನಿಂದ ಎರಡು‌ ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ಠಾಣೆ ಪಿಎಸ್​ಐ ಆಗಿದ್ದ ಮಂಜುನಾಥ ಹೂಗಾರ್, ತಿಂಗಳ ಹಿಂದೆ ಕಲಬುರಗಿ ಡಿಸಿಬಿಗೆ ವರ್ಗಾವಣೆಯಾಗಿದ್ದರು. ಈ ವೇಳೆ ಅವರಿಗೆ ಎಸ್​ಪಿ ಸಿಮಿ ಮರಿಯಮ್​ ಜಾರ್ಜ್​ ಹೆಸರು ಹೇಳಿ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ನಿವಾಸಿ ಖಾಸಿಂ ಪಟೇಲ್ ಎಂಬ ವ್ಯಕ್ತಿ ವಂಚನೆ ಮಾಡಿದ್ದಾನೆ.

ಖಾಸಿಂ ಕಲಬುರಗಿ ಎಸ್​ಪಿ ಪರ್ಸನಲ್​ ನಂಬರ್​ ಎಂದು ಹೇಳಿ ಎಸ್​ಐ ಮಂಜುನಾಥ ಹೂಗಾರ್​ಗೆ SMS ಮಾಡುತ್ತಿದ್ದ. ಮೊಬೈಲ್​ ನಂಬರ್​ 74114 47060ನಿಂದ SMS ಮಾಡ್ತಿದ್ದ. ಖಾಸಿಂ ಬೇರೆ ಬೇರೆ ಕಾರಣಗಳನ್ನು ಹೇಳಿ ಮಂಜುನಾಥ ಬಳಿ 3 ಬಾರಿ ಹಣ ಪಡೆದಿದ್ದ.

ಸುಮಾರು 8 ಲಕ್ಷ 50 ಸಾವಿರ ಹಣ ಪಡೆದಿದ್ದಾನೆ. ಫೆಬ್ರವರಿ 4ರಂದು ಎಸ್​ಪಿ ಭೇಟಿಯಾಗಿ ಹಣ ನೀಡಿದ್ದರ ಬಗ್ಗೆ ಮಂಜುನಾಥ್, ಎಸ್​ಪಿ ಸಿಮಿ ಮರಿಯಮ್​ ಜಾರ್ಜ್​ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ನಾನು ಯಾವುದೇ ಹಣ ಕೇಳಿಲ್ಲ, ಅದು ನನ್ನ ನಂಬರ್​ ಅಲ್ಲ ಅಂತ ಪಿಎಸ್​ಐ ಮಂಜುನಾಥ ಹೂಗಾರ್​ಗೆ, ಎಸ್​ಪಿ ತಿಳಿಸಿದ್ದಾರೆ. ನಂತರ ವಂಚನೆ ನಡೆದಿರುವುದು ಗೊತ್ತಾಗಿ ಫೆಬ್ರವರಿ 4ರ ರಾತ್ರಿ ಮಂಜುನಾಥ್ ಕಲಬುರಗಿ ಸ್ಟೇಷನ್ ​ಬಜಾರ್​ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ₹8 ಲಕ್ಷ 50ಸಾವಿರ ಪಡೆದಿದ್ದ ವಂಚಕ ಖಾಸಿಂ ಪಟೇಲ್​ನನ್ನು ಪೊಲೀಸರು ಬಂಧಿಸಿದ್ದು ಆತನಿಂದ ₹2 ಲಕ್ಷ ವಶಕ್ಕೆ ಪಡೆದಿದ್ದಾರೆ.

ನಕಲಿ ಫೇಸ್​ಬುಕ್ ಖಾತೆ: ಹುಡುಗಿ ಹೆಸರಿನಲ್ಲಿ ಹಣ ಪಡೆದು ವಂಚನೆ

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ