
ಮೈಸೂರು: ವೆಲ್ಡಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ಮೈಸೂರಿನ ಬನ್ನೂರು ರಸ್ತೆಯ ಹೊಸಹುಂಡಿ ಬಳಿ ನಡೆದಿದೆ. ಕೆ.ಸಿ.ನಗರ ನಿವಾಸಿ ಸೈಯದ್ ಮುಕ್ತಾರ್(48) ಮೃತ ದುರ್ದೈವಿ
ಆಟೋ ಗ್ಯಾರೇಜ್ ಒಂದರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಸೈಯದ್ ಮುಕ್ತಾರ್ ಸಾವನ್ನಪ್ಪಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.