AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England | ಭಾರತದ ಟಾಪ್ ಕ್ರಮಾಂಕ ವಿಫಲವಾದಾಗ ಮಿಡ್ಲ್ ಆರ್ಡರ್ ಪುಟಿದೇಳಬೇಕು: ರಮೀಜ್ ರಾಜಾ

ತನ್ನ ಯೂಟ್ಯೂಬ್ ಚ್ಯಾನೆಲ್ ಮಾತಾಡಿರುವ ರಾಜಾ, ನಿರ್ದಿಷ್ಟವಾಗಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಒಮ್ಮೆ ಸೆಟ್ಲ್ ಆದ ನಂತರ ಪಂತ್ ಬಿಗ್ ಇನ್ನಿಂಗ್ಸ್ ಆಡಬೇಕು ಅಂತ ಹೇಳಿರುವ ಅವರು ಮಂಗಳವಾರದ ಪಂದ್ಯದಲ್ಲಿ ಪಾಂಡ್ಯ 15 ಎಸೆತಗಳಲ್ಲಿ 17 ರನ್ ಬಾರಿಸದ್ದು ಅವರ ಖ್ಯಾತಿಗೆ ತಕ್ಕ ಆಟವಲ್ಲ ಎಂದಿದ್ದಾರೆ.

India vs England | ಭಾರತದ ಟಾಪ್ ಕ್ರಮಾಂಕ ವಿಫಲವಾದಾಗ ಮಿಡ್ಲ್ ಆರ್ಡರ್ ಪುಟಿದೇಳಬೇಕು: ರಮೀಜ್ ರಾಜಾ
ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ
ಅರುಣ್​ ಕುಮಾರ್​ ಬೆಳ್ಳಿ
|

Updated on: Mar 17, 2021 | 11:21 PM

Share

ನಾಳೆ (ಗುರುವಾರ) ಭಾರತ ಮತ್ತು ಇಂಗ್ಲೆಂಡ್​ ನಡುವೆ 5-ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ನಡೆಯಲಿದೆ. ಪ್ರವಾಸಿ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿರುವುದರಿಂದ ಅತಿಥೇಯರು ನಾಳಿನ ಪಂದ್ಯವನ್ನು ಗೆಲ್ಲಲೇ ಬೇಕು. ಇಲ್ಲದೆ ಹೋದರೆ ಸರಣಿ ಆಂಗ್ಲರ ಪಾಲಾಗುತ್ತದೆ. ಭಾರತ ಆರಂಭ ಆಟಗಾರ ಕೆ ಎಲ್ ರಾಹುಲ್ ಅವರ ಸತತ ವೈಫಲ್ಯಗಳಿಂದ ಟೀಮ್ ಇಂಡಿಯಾ ಕೊಂಚ ಯೋಚನೆಗೊಳಗಾಗಿರುವುದು ಸತ್ಯ. ಆದರೆ ಪಾಕಿಸ್ತಾನದ ಮಾಜಿ ಆರಂಭ ಆಟಗಾರ ರಮೀಜ್ ರಾಜಾ, ಟಾಪ್​ ಆರ್ಡರ್ ಫೇಲಾದಾಗ ಮಿಡ್ಲ್ ಆರ್ಡರ ಕ್ಲಿಕ್ ಆಗಬೇಕು, ಮೇಲಿನ ಕ್ರಮಾಂಕದ ಆಟಗಾರರ ವೈಫಲ್ಯವನ್ನು ಕೆಳ ಕ್ರಮಾಂಕದ ಆಟಗಾರು ಉತ್ತಮವಾಗಿ ಆಡಿ ಸರಿದೂಗಿಸಬೇಕು ಅಂತ ಹೇಳಿದ್ದಾರೆ.

ತನ್ನ ಯೂಟ್ಯೂಬ್ ಚ್ಯಾನೆಲ್ ಮಾತಾಡಿರುವ ರಾಜಾ, ನಿರ್ದಿಷ್ಟವಾಗಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಒಮ್ಮೆ ಸೆಟ್ಲ್ ಆದ ನಂತರ ಪಂತ್ ಬಿಗ್ ಇನ್ನಿಂಗ್ಸ್ ಆಡಬೇಕು ಅಂತ ಹೇಳಿರುವ ಅವರು ಮಂಗಳವಾರದ ಪಂದ್ಯದಲ್ಲಿ ಪಾಂಡ್ಯ 15 ಎಸೆತಗಳಲ್ಲಿ 17 ರನ್ ಬಾರಿಸದ್ದು ಅವರ ಖ್ಯಾತಿಗೆ ತಕ್ಕ ಆಟವಲ್ಲ ಎಂದಿದ್ದಾರೆ.

‘ಈ ಬಗೆಯ ಆರಂಭಿಕ ಜೋಡಿಯನ್ನು ಇಂಗ್ಲೆಂಡ್ ವಿರುದ್ಧ ಆಡಿಸಿದರೆ ಅವರ ಬೌಲರ್​ಗಳು ಖಂಡಿತವಾಗಿಯೂ ಅವರನ್ನು ಬೇಗ ಔಟ್ ಮಾಡುತ್ತಾರೆ. ಆಗ ಟೀಮಿನ ಮೇಲೆ ಒತ್ತಡ ತಾನಾಗಿಯೇ ಹೆಚ್ಚುತ್ತದೆ. ಇಶಾನ್ ಕಿಷನ್ ಅವರನ್ನು ಮೂರನೇ ಕ್ರಮಾಕಂದಲ್ಲಿ ಆಡಿಸಿದಾಗ ಅವರನ್ನು ಕಟ್ಟಿಹಾಕಲು ಅತ್ಯುತ್ತಮ ಯೋಜನೆಯನ್ನು ಮಾಡಿದ ಇಂಗ್ಲೆಂಡ್ ಶಾರ್ಟ್ ಎಸೆತಗಳನ್ನು ಬೌಲ್ ಮಾಡಲಾರಂಭಿಸಿತು. ಅಲ್ಲದೆ ರಿಷಬ್ ಪಂತ್ 25 ರನ್ ಗಳಿಸಿ ಔಟಾಗುತ್ತಿದ್ದಾರೆ. ಸೆಟ್ಲ್ ಆದ ನಂತರ ಅವರು ಹಾಗೆ ಔಟಾಗುತ್ತಿರುವುದು ಟೀಮಿಗೆ ಹಾನಿಯನ್ನುಂಟು ಮಾಡುತ್ತಿದೆ,’ ಎಂದು ರಾಜಾ ಹೇಳಿದ್ದಾರೆ.

Rameez Raja

ರಮೀಜ್ ರಾಜಾ

ಹಾಗೆಯೇ, ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್​ ಸದ್ದು ಮಾಡುತ್ತಿಲ್ಲ. ಅವರನ್ನು ಕಟ್ಟಿಹಾಕುವಲ್ಲಿ ಇಂಗ್ಲೆಂಡ್ ಬೌಲರ್​ಗಳು ಯಶ ಕಾಣುತ್ತಿದ್ದಾರೆ. ಪಾಂಡ್ಯ ಫುಲ್ಲರ್ ಎಸೆತಗಳನ್ನು ಮತ್ತು ಸ್ಪಿನ್ನರ್​ಗಳನ್ನು ಚೆನ್ನಾಗಿ ಆಡುತ್ತಾರೆಂದು ಅವರಿಗೆ ಗೊತ್ತಿದೆ. ಹಾಗಾಗಿ ಪಾಂಡ್ಯಗೆ ಅವರು ಶಾರ್ಟ್ ಆಫ್ ಗುಡ್ ಲೆಂಗ್ತ್ ಎಸೆತಗಳನ್ನು ಬೌಲ್ ಮಾಡುತ್ತಿದ್ದಾರೆ. ಪಾಂಡ್ಯ ಬಿಗ್ ಹಿಟ್​ ಬಾರಿಸಿಲು ಪ್ರಯತ್ನಿಸುತ್ತಿರುವರಾದರೂ ಅವರಿಗೆ ಅದು ಸಾಧ್ಯವಾಗುತ್ತಿಲ್ಲ. 20 ಎಸೆತಗಳಲ್ಲಿ ಅವರು 17 ರನ್ ಬಾರಿಸುವುದು ಖಂಡಿತವಾಗಿಯೂ ನಮಗೆ ಸ್ವೀಕೃತವಲ್ಲ. ಸ್ವಲ್ಪ ಹೊತ್ತಿನಲ್ಲೇ ಸೆಟ್ಲ್ ಆಗಿ ಎದುರಾಳಿ ಬೌಲರ್​ಗಳನ್ನು ಬಗ್ಗು ಬಡಿಯುವಂಥ ಕ್ಷಮತೆ ಪಾಂಡ್ಯ ಅವರಲ್ಲಿದೆ. ಅವರಿಂದ ನಿರೀಕ್ಷಿತ ಪ್ರದರ್ಶನಗಳು ಬರುತ್ತಿಲ್ಲವಾದ್ದರಿಂದ ಇಡೀ ಟೀಮನ್ನು ಸುಳಿಯೊಳಗೆ ನೂಕಿದಂತಾಗಿದೆ,’ ಎಂದು ರಾಜಾ ಹೇಳಿದ್ದಾರೆ.

ಇಂಗ್ಲೆಂಡ್ 2-1ರ ಮುನ್ನಡೆ ಸಾಧಿಸಿರುವುದರಿಂದ ನಾಳೆಯೇನಾದರೂ ಅದು ಗೆದ್ದರೆ ಸರಣಿಯನ್ನು ತನ್ನದಾಗಿಸಿಕೊಳ್ಳುತ್ತದೆ. ಹಾಗಾಗಿಯೇ, ನಾಳಿನ ಪಂದ್ಯ ಭಾರತಕ್ಕೆ ಬಹಳ ಮಹತ್ವಪೂರ್ಣದ್ದಾಗಿದೆ ಮತ್ತು ನಿರ್ಣಾಯಕವೂ ಅಗಿದೆ. ಸರಣಿಯನ್ನು ಜೀವಂತವಾಗಿಡಬೇಕಾದರೆ ಭಾರತ ನಾಳೆ ಗೆಲ್ಲಲೇಬೇಕು. ಈ ಫಾರ್ಮಾಟ್​ನಲ್ಲಿ ಇಂಗ್ಲೆಂಡ್ ಬಲಿಷ್ಠ ತಂಡವಾಗಿದೆ ಎಂದು ಹೇಳುವ ರಾಜಾ, ಭಾರತ ಬ್ಯಾಟಿಂಗ್ ಜೊತೆ ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಗೆಲುವು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ

ಇದನ್ನೂ ಓದಿ: ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ ಅನ್ನೋದು ನಿಜವೇ?

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ